ಮೂಡಲಗಿ : ಪಟ್ಟಣದ ನಾಗಲಿಂಗ ನಗರ ನಿವಾಸಿಗಳ ಬಹುದಿನ ಬೇಡಿಕೆಯಾದ ಮೂಡಲಗಿ ಪಟ್ಟಣದ ಗುರ್ಲಾಪುರ ಮುಖ್ಯ ರಸ್ತೆಯಿಂದ ನಾಗಲಿಂಗ ನಗರಕ್ಕೆ ಸಂಪರ್ಕ ಕೊಡುವ ಕೋರ್ಟ್ ಪಕ್ಕದಲ್ಲಿರುವ ರಸ್ತೆಗಾಗಿ ಹಲವು ದಿನಗಳಿಂದ ನಾಗಲಿಂಗ ನಗರ ನಿವಾಸಿಗಳ ಮುಖ್ಯ ಬೇಡಿಕೆಯಾಗಿತ್ತು. ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತನಾಡಿ ಯಾರಿಗೂ ತೊಂದರೆ ಆಗದಂತೆ ರಸ್ತೆ ದುರಸ್ತಿಗೊಳಿಸಿ ಜನರಿಗೆ ಸಂಚರಿಸಲು ವ್ಯವಸ್ಥೆ ಕಲ್ಪಿಸಿಕೊಟ್ಟರು. ಮೂಡಲಗಿ ಪುರಸಭೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಲು ಸ್ಥಳದಲ್ಲಿಯೇ ಮುಖ್ಯಧಿಕಾರಿಗೆ ಸೂಚನೆ ನೀಡಿದರು. ಬರುವ ದಿನಗಳಲ್ಲಿ ನಾಗಲಿಂಗ ನಗರದ ದೇವಸ್ಥಾನಗಳಿಗೆ ಅನುದಾನ ತರುತ್ತೇವೆ ಈ ಭಾಗದಲ್ಲಿ ಇರುವಂತ ಮುಖ್ಯ ಬೇಡಿಕೆ ರಸ್ತೆ ಈ ಇತ್ತು ಯಾಕೆಂದರೆ ಈ ರಸ್ತೆ ಎಲ್ಲರ ಸಹಕಾರದಿಂದ ಸಮಸ್ಯಯನ್ನು ಬಗೆ ಹರಿಸಿ ಕೆಲಸ ಮಾಡಿದ್ದೇವೆ. ನಿಮ್ಮಲ್ಲಿ ಏನೇ ಸಮಸ್ಯೆ ಇದ್ದರು ನಮ್ಮ ಎನ್ ಎಸ್ ಎಫ್ ಗೆ ಬಂದು ಕೆಲಸ ಮಾಡಿಕೊಳ್ಳಿ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಅರಭಾವಿ ಕ್ಷೆತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಗಲಿಂಗ ನಗರದ ಎಲ್ಲ ಸಾರ್ವಜನಿಕರ ಪರವಾಗಿ ಸನ್ಮಾನಿಸಿ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರೇಣುಕಾ ಹಾದಿಮನಿ, ಮುಖ್ಯಧಿಕಾರಿ ತುಕಾರಾವi ಮಾದರ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಶಾಸಕರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಯಕ್ಷಂಬಿ, ಮರೆಪ್ಪ ಮರೆಪ್ಪಗೊಳ, ಅನ್ವರ ನಧಾಫ, ಪುರಸಭೆ ಸದಸ್ಯ ಸಂತೋಸ ಸೊನವಾಲ್ಕರ, ಈರಪ್ಪ ಮುನ್ಯಾಳ ಮುಂಖಡರಾದ ಲಕ್ಷ್ಮಣ ಅಡಿಹುಡಿ, ಭೀಮಸಿ ಢವಳೇಶ್ವರ, ಶ್ರೀಶೈಲ ಗಾಣಿಗೇರ, ಸರ್ಮಥ ಕಟ್ಟಡ ಕಾಮೀಕ ಸಂಘದ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಪಿ.ಕೆ.ಪಿ.ಎಸ್ ನಿರ್ದೆಶಕ ಈಶ್ವರ ಕಂಕಣವಾಡಿ ಅಡಿವೇಪ್ಪ ಶಿರಸಂಗಿ, ಶಿವಲಿಂಗ ಹಾದಿಮನಿ, ಪ್ರಕಾಶ ಶೇಗುನಶಿ,ರತ್ನಪ್ಪ ಬಗಾಡಿ, ಮುಂತಾದವರು ಉಪಸ್ಥಿತರಿದ್ದರು.