ಮೂಡಲಗಿ: ಕಳೆದ ದಿಸೆಂಬರ 27 ರಂದು ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಮತಾದನ ನಡೆದ ನಂತರ ಮೂಡಲಗಿಯಲ್ಲಿದ ಸ್ಟ್ರಾಂಗ್ ರೂಮನಲ್ಲಿ ಇರಿಸಲಾದ ಮತಯಂತ್ರ ಬದಲಾವಣೆಯಾಗಿವೆ ಎಂದು ಬಿಜೆಪಿ ಕಾರ್ಯಕರ್ತರ ಆರೋಪ ಸತ್ಯಕ್ಕೆ ದೂರವಾದುದ್ದು ಎಂದು ಬೆಳಗಾವಿ ಬಿಡಿಸಿಸಿ ನಿರ್ದೇಶಕ ನೀಲಕಂಠ ಕಪ್ಪಲಗುದಿ ಹೇಳಿದರು. ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಮತಯಂತ್ರ ಬದಲಾವಣೆಯಾಗಿದೆ ಎಂದು ರಾಜ್ಯಸಭಾ ಈರಣ್ಣ ಕಡಾಡಿಯವರ ಬೆಂಬಲಿಗರು ಮಾಡಿರುವ ಎಲ್ಲ ಆರೋಪಗಳು ಸುಳ್ಳಿನಿಂದ ಕೂಡಿವೆ ಎಂದು …
Read More »ವಿಕಲಚೇತನ ನೌಕರರಿಗೆ ಜನವರಿ 18 ರವರೆಗೆ ಮನೆಯಿಂದಲೇ ಕೆಲಸ :ಬೀರಪ್ಪ ಅಂಡಗಿ ಚಿಲವಾಡಗಿ
ಕೊಪ್ಪಳ: ಕೋವಿಡ್ 19 ರ ರೂಪಾಂತರಿ ವೈರಸ್ ” ಓಮಿಕ್ರಾನ್” ವೈರಾಣು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಿಕಲಚೇತನ ನೌಕರರು ಮನೆಯಿಂದ ಕಚೇರಿಗೆ ಬಂದು ಕಾರ್ಯ ನಿರ್ವಹಿಸಲು ತೊಂದರೆ ಆಗುವುದನ್ನು ಗಮನಿಸಿ ಸರಕಾರವು ವಿಕಲಚೇತನ ನೌಕರರಿಗೆ ಕಚೇರಿ/ ಶಾಲೆಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ ಅವರು ಆದೇಶ ಮಾಡಿದ್ದು ಜನವರಿ 18 ರ ವರಗೆ ಜಾರಿಯಲ್ಲಿ ಇರುತ್ತದೆ.ಈ ಆದೇಶವು ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಸೇರಿದಂತೆ ವಿವಿಧ ಇಲಾಖೆಯಲ್ಲಿ …
Read More »ಪ್ರಧಾನಿಗೆ ಭದ್ರತಾ ಲೋಪ-ಸಂಸದ ಈರಣ್ಣ ಕಡಾಡಿ ಆತಂಕ
ಪ್ರಧಾನಿಗೆ ಭದ್ರತಾ ಲೋಪ-ಸಂಸದ ಈರಣ್ಣ ಕಡಾಡಿ ಆತಂಕ ಮೂಡಲಗಿ: ಪಂಜಾಬ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು 15 ರಿಂದ 20 ನಿಮಿಷಗಳ ಕಾಲ ತಡೆಯುವಂತೆ ಮಾಡಿ ಭದ್ರತಾ ವೈಫಲ್ಯ ವೆಸಗಿದ ಪಂಜಾಬ್ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆತಂಕ ವ್ಯಕ್ತಪಡಿಸಿದರು. ಬುಧಾವಾರ ಜ 5 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಇದು ಕ್ರಾಂಗೇಸ್ ಪಕ್ಷದ ತುಕ್ಕು ಹಿಡಿದ, ರೋಗಗ್ರಸ್ತ, ನೀರ್ಲಜ್ಯ …
Read More »ನೂತನ 2 ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ- ಡಾ.ರಾಜೇಂದ್ರ ಸಣ್ಣಕ್ಕಿ
ಬೆಟಗೇರಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು. ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲ್ಲಿ ಜ.5ರಂದು 2020-21 ಸಾಲಿನ ಠೇವಣಿ ಸಂಗ್ರಹ ಮೊತ್ತದ ಯೋಜನೆಯ ಸುಮಾರು 31 ಲಕ್ಷ ರೂ.ಗಳ ಅನುದಾನದಡಿಯಲ್ಲಿ ನೂತನ 2 ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಇಲ್ಲಿಯ ಗ್ರಾಮಸ್ಥರಿಗೆ …
Read More »ಬೆಟಗೇರಿ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರಗೆ ಅದ್ದೂರಿ ಸ್ವಾಗತ
ಬೆಟಗೇರಿ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರಗೆ ಅದ್ದೂರಿ ಸ್ವಾಗತ ಬೆಟಗೇರಿ:ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧ ಮುತ್ತೆಪ್ಪ ನೀಲಣ್ಣವರ ಜ.5ರಂದು ಹುಟ್ಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಕ್ಕೆ ಆಗಮಿಸಿದ ಪ್ರಯುಕ್ತ ಸ್ಥಳೀಯ ಹಾಲಿ ಮತ್ತು ನಿವೃತ್ತ ಸೈನಿಕರ ಬಳಗ, ಗ್ರಾಮಸ್ಥರು ಹಾಗೂ ಸ್ನೇಹಿತರು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಬೆಟಗೇರಿ ಗ್ರಾಮದ ಅಶ್ವಾರೂಢ ಬಸವೇಶ್ವರ ವೃತ್ತದಿಂದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ಭಾರತಾಂಬೆಯ ಮೂರ್ತಿ ತನಕ ಸಕಲ …
Read More »ಮೂಡಲಗಿ ಪಿಕೆಪಿಎಸ್ಗೆ ಅಧ್ಯಕ್ಷರಾಗಿ ಸಂದೀಪ, ಉಪಾಧ್ಯಕ್ಷೆಯಾಗಿ ನೀಲವ್ವ ಆಯ್ಕೆ
ಮೂಡಲಗಿ ಪಿಕೆಪಿಎಸ್ಗೆ ಅಧ್ಯಕ್ಷರಾಗಿ ಸಂದೀಪ, ಉಪಾಧ್ಯಕ್ಷೆಯಾಗಿ ನೀಲವ್ವ ಆಯ್ಕೆ ಮೂಡಲಗಿ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇತ್ತಿಚೆಗೆ ಜರುಗಿದ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂದೀಪ ಮಲ್ಲಪ್ಪ ಸೋನವಾಲಕರ ಹಾಗೂ ಉಪಾಧ್ಯಕ್ಷೆಯಾಗಿ ನೀಲವ್ವ ದುಂಡಯ್ಯ ಮಠಪತಿ ಅವರು ಅವಿರೋಧವಾಗಿ ಆಯ್ಕೆಯಾಗಿರುವರು. ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿ ಸಂದೀಪ ಸೋನವಾಲಕರ ಮಾತನಾಡಿ ‘1947ರಲ್ಲಿ ರೈತರಿಂದ ಸ್ಥಾಪಿತವಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸೋಸೈಟಿಯು ಮೂಡಲಗಿಯ ಪ್ರಥಮ ಸಹಕಾರಿ ಸಂಸ್ಥೆಯಾಗಿದೆ. …
Read More »ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಮರು ಚುನಾವಣೆ ನಡೆಸುವಂತೆ ಬಿಜೆಪಿ ಪರಾಜೀತ ಅಭ್ಯರ್ಥಿಗಳಿಂದ ಮನವಿ
ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಮರು ಚುನಾವಣೆ ನಡೆಸುವಂತೆ ಬಿಜೆಪಿ ಪರಾಜೀತ ಅಭ್ಯರ್ಥಿಗಳಿಂದ ಮನವಿ ಮೂಡಲಗಿ:ಅರಭಾಂವಿ ಮತಕ್ಷೇತ್ರದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಡಿ-27 ರಂದು ನಡೆದ ನಂತರ ಮೂಡಲಗಿ ಶ್ರೀ ಶಿವಬೋಧರಂಗ ಕಾಲೇಜಿನ ಸ್ಟ್ರಾಂಗ್ ರೂಮನಲ್ಲಿ ಇರಿಸಲಾದ ಮತಯಂತ್ರ ಬದಲಾವಣೆಯಾಗಿವೆ ಎಂದು ಬುಧವಾರ ನಗರದ ತಹಶೀಲ್ದಾರ ಕಚೇರಿ ಎದುರು ಕಲ್ಲೋಳಿ ಪಟ್ಟಣದ ನೂರಾರು ಬಿಜೆಪಿ ಕಾರ್ಯಕರ್ತರು ತಹಶೀಲ್ದಾರಿಗೆ ಮನವಿ ಸಲ್ಲಿಸಿ, ಮರು ಚುನಾವಣೆ ನಡೆಸಬೇಕೇಂದು ಆಗ್ರಹಿಸಿದರು. ತಾಲೂಕಿನ ಕಲ್ಲೋಳಿ …
Read More »ಹಿರಿಯ ಜೀವಿಗಳನ್ನು ಗೌರವಿಸುವುದು ಇಂದಿನ ಯುವ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ : ಬಾಲಶೇಖರ ಬಂದಿ
ಹಿರಿಯ ಜೀವಿಗಳನ್ನು ಗೌರವಿಸುವುದು ಇಂದಿನ ಯುವ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ : ಬಾಲಶೇಖರ ಬಂದಿ ಮೂಡಲಗಿ : ಭಾರತಿಯ ಸಂಸ್ಕೃತಿಯು ಗ್ರಾಮೀಣ ಭಾಗದ ಹಿರಿಯ ಜೀವಿಗಳಾದ ಅಜ್ಜ-ಅಜ್ಜಿಯಲ್ಲಿ ಮಾತ್ರ ಇಂದಿನ ದಿನಗಳಲ್ಲಿ ಹೆಚ್ಚಾಗಿ ಉಳಿದಿದೆ ನಮ್ಮ ಸಂಸ್ಕೃತಿಯ ಆಚಾರ-ವಿಚಾರ ನಡೆ-ನುಡಿಗಳ ಕುರಿತು ಅಜ್ಜ ಅಜ್ಜಿಯರ ಮೂಲಕ ಮೊಮ್ಮಕ್ಕಳಿಗೆ ತಲುಪಿಸಬೇಕಾಗಿದೆ ಇಂದಿನ ಮಕ್ಕಳು ಗುರು ಹಿರಿಯರನ್ನು ಗೌರವದಿಂದ ಕಾಣುವುದು ಮತ್ತು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಮತ್ತು ಕ್ರಿಯಾಶೀಲತೆಯನ್ನು ಹುಟ್ಟಿಸುವುದು ಶಿಕ್ಷಣದ ಮಹತ್ವದ …
Read More »ಬೆಟಗೇರಿ ಗ್ರಾಮದ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ದೇಶ ಸೇವೆ ಅನುಕರಣಿಯ *ಇಂದು ನಿವೃತ್ತ ಸೈನಿಕರ ಬಳಗ ಹಾಗೂ ಗ್ರಾಮಸ್ಥರಿಂದ ಭವ್ಯ ಸ್ವಾಗತ ಮೆರವಣಿಗೆ * ಸತ್ಕಾರ ಕಾರ್ಯಕ್ರಮ
ಬೆಟಗೇರಿ ಗ್ರಾಮದ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ದೇಶ ಸೇವೆ ಅನುಕರಣಿಯ *ಇಂದು ನಿವೃತ್ತ ಸೈನಿಕರ ಬಳಗ ಹಾಗೂ ಗ್ರಾಮಸ್ಥರಿಂದ ಭವ್ಯ ಸ್ವಾಗತ ಮೆರವಣಿಗೆ * ಸತ್ಕಾರ ಕಾರ್ಯಕ್ರಮ ವರದಿ: ಅಡಿವೇಶ ಮುಧೋಳ ಬೆಟಗೇರಿ:ಗ್ರಾಮದ ಸೈನಿಕ ಮುತ್ತೆಪ್ಪ ಬಸಪ್ಪ ನೀಲಣ್ಣವರ ಅವರು ಈಗ ಸೈನಿಕ ಸೇವೆಯಿಂದ ನಿವೃತ್ತಿಯಾಗಿ ಹುಟ್ಟೂರು ಗೋಕಾಕ ತಾಲೂಕಿನ ಬೆಟಗೇರಿ ಬೆಟಗೇರಿ ಗ್ರಾಮಕ್ಕೆ ಆಗಮಿಸುತ್ತಿರುವ ಅವರಿಗೆ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಜ.5 ರಂದು ಹಮ್ಮಿಕೊಳ್ಳಲಾಗಿದೆ. …
Read More »‘ಕುರುಹಿನಶೆಟ್ಟಿ ಸೊಸೈಟಿಯ ಸಮಾಜಮುಖಿ ಕಾರ್ಯವು ಶ್ಲಾಘನೀಯವಾಗಿದೆ’ – ಶ್ರೀ ದತ್ತಾತ್ರಯಬೋಧ ಸ್ವಾಮೀಜಿ
ಮೂಡಲಗಿಯ ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಶಿವಬೋಧರಂಗ ಮಠದ ನೂತನ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಅವರನ್ನು ಸನ್ಮಾನಿಸಿದರು. ‘ಕುರುಹಿನಶೆಟ್ಟಿ ಸೊಸೈಟಿಯ ಸಮಾಜಮುಖಿ ಕಾರ್ಯವು ಶ್ಲಾಘನೀಯವಾಗಿದೆ’ ಮೂಡಲಗಿ: ‘ಕುರುಹಿನಶೆಟ್ಟಿ ಸೊಸೈಟಿಯು ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಗನೀಯವಾಗಿದೆ’ ಎಂದು ಶ್ರೀಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಹೇಳಿದರು. ಇಲ್ಲಿಯ ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಹೈಟೆಕ್ ರಕ್ತ ತಪಾಸಣೆ ಕೇಂದ್ರ ಹಾಗೂ ಗೋಕಾಕ ಬ್ಲ್ಡ ಬ್ಯಾಂಕ್ …
Read More »