inmudalgi
ಸೆಪ್ಟೆಂಬರ್ 1, 2021 Recent Posts, ತಾಲ್ಲೂಕು, ಬೆಳಗಾವಿ
ಇಂದು ಲಯನ್ಸ್ ಕ್ಲಬ್ದಿಂದ ಅನ್ನದಾಸೋಹ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೆ. 1ರಂದು ಮಧ್ಯಾಹ್ನ 1 ಗಂಟೆಗೆ ಪಾಕ್ಷಿಕ ಅನ್ನದಾಸೋಹ ಏರ್ಪಡಿಸಲಾಗಿದೆ. ಅನ್ನದಾಸೋಹದ ಪ್ರಾಯೋಜಕತ್ವವನ್ನು ವೆಂಕಟೇಶ ಆರ್. ಸೋನವಾಲಕರ ವಹಿಸಿಕೊಂಡಿರುವರು. ದಾಸೋಹ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಡಿ.ಜಿ. ಮಹಾತ್ ಅವರು ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಭಾಗವಹಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ …
Read More »
inmudalgi
ಆಗಷ್ಟ್ 31, 2021 Recent Posts, ತಾಲ್ಲೂಕು, ಬೆಳಗಾವಿ
ತುಕ್ಕಾನಟ್ಟಿ: ಸೆ. 2ರಂದು ಗೋವಿನ ಜೋಳ ಕ್ಷೇತ್ರೋತ್ಸವ ಮೂಡಲಗಿ: ತಾಲ್ಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಗೋಕಾಕ ಇವರು ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ಆಶಾ ಭರತ ಮಹಾತ್ರೆ ಅವರ ತೋಟದಲ್ಲಿ ಸೆ. 2ರಂದು ಬೆಳಿಗ್ಗೆ 10ಕ್ಕೆ ಗೋವಿನ ಜೋಳ ಕ್ಷೇತ್ರೋತ್ಸವ ಮತ್ತು ರೈತರ ಗೋಷ್ಠಿ ಏರ್ಪಡಿಸಿರವರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬ. ಬೆಳಕೂಡ ಕಾರ್ಯಕ್ರಮವನ್ನು ಉದ್ಘಾಟಿಸಿವರು. ತುಕ್ಕಾನಟ್ಟಿ ಗ್ರಾಮ ಪಂಚಾಯ್ತಿ …
Read More »
inmudalgi
ಆಗಷ್ಟ್ 31, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಮಂಗಳವಾರದoದು ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮೀತಿಯಿಂದ ಪಟ್ಟಣದ ಪ್ರಮುಖ ರಸ್ತೆ ಬಂದ್ ಮಾಡಿ ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ಕಾಮುಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಸಾವಿರಾರು ಶಾಲಾ-ಕಾಲೇಜ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. …
Read More »
inmudalgi
ಆಗಷ್ಟ್ 31, 2021 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನ ಹಾಗೂ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರ ನೇತೃತ್ವದಲ್ಲಿ ಸಮೀಪದ ಕೌಜಲಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಬಸಪ್ಪ ಯಲ್ಲಪ್ಪ ಕುಂದರಗಿ ಅವರು ಅವಿರೋಧವಾಗಿ ಮಂಗಳವಾರ ಆ.31ರಂದು ಆಯ್ಕೆಗೊಂಡಿದ್ದಾರೆ. ಸ್ಥಳೀಯ ಪಿಕೆಪಿಎಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಸಪ್ಪ ಕುಂದರಗಿ ಹಾಗೂ ಗಣ್ಯರನ್ನು ಇಲ್ಲಿಯ ಪಿಕೆಪಿಎಸ್ ವತಿಯಿಂದ ಸತ್ಕರಿಸಲಾಯಿತು. ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ಅವರು …
Read More »
inmudalgi
ಆಗಷ್ಟ್ 31, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾದ್ಯವಾಗುವದು. ಜನ ಸಾಮಾನ್ಯರಿಗೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಸರಕಾರವು ಆರೋಗ್ಯ ಇಲಾಖೆಗೆ ನೀಡಿರುವ ಸೌಲಭ್ಯಗಳನ್ನು ಉಪಯೋಗ ಪಡೆದುಕೊಳ್ಳ ಬೇಕು ಎಂದು ಅರಭಾಂವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅವರು ಪಟ್ಟಣದ ಮೇಲ್ದರ್ಜೆಗೆರಿದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಸೊನೋಗ್ರಾಫಿ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯಾಧುನಿಕ ರೋಗ ಪರೀಶೋಧಕ ಯಂತ್ರದಿಂದಾಗಿ ಸ್ತ್ರೀಯರ ಪ್ರಸವ ಪೂರ್ವ ನಂತರದ ದಿನಗಳಲ್ಲಿ …
Read More »
inmudalgi
ಆಗಷ್ಟ್ 30, 2021 Recent Posts, ತಾಲ್ಲೂಕು, ಬೆಳಗಾವಿ
‘ರೈತರು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತಾಗಬೇಕು’-ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೂಡಲಗಿ: ‘ಕೃಷಿಯನ್ನು ಉದ್ಯಮ ರೀತಿಯಲ್ಲಿ ಬೆಳೆಸಿದಾಗ ಮಾತ್ರ ರೈತರ ಆದಾಯವು ದ್ವಿಗುಣವಾಗಲು ಸಾಧ್ಯ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ತಾಲ್ಲೂಕಿನ ಕಲ್ಲೋಳಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗೋವಿನಜೋಳ ಮತ್ತು ಸೋಯಾಅವರೆಯ ಕ್ಷೇತ್ರೋತ್ಸವ ಹಾಗೂ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಒಕ್ಕುಲತನ ಮಾಡುವ ಇಚ್ಛಾಶಕ್ತಿಯೊಂದಿಗೆ ಲಭ್ಯವಿರುವ ಹೊಸ …
Read More »
inmudalgi
ಆಗಷ್ಟ್ 30, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಮೂಡಲಗಿ ವತಿಯಿಂದ 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 95% ಕ್ಕಿಂತ ಹೆಚ್ಚು ಹಾಗೂ ಪಿ.ಯು.ಸಿಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಸರಕಾರಿ ನೌಕರರ ತಾಲೂಕಾಧ್ಯಕ್ಷ ಆನಂದ ಹಂಜಾಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಗತ್ಯ ದಾಖಲೆಗಳಾದ ದೃಢೀಕೃತ ಅಂಕ ಪಟ್ಟಿ, ಪಾಲಕರ ಮನವಿ ಪತ್ರ, ಇಲಾಖೆಯ ಮುಖ್ಯಸ್ಥರಿಂದ …
Read More »
inmudalgi
ಆಗಷ್ಟ್ 30, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಬೃಹತ ಪ್ರತಿಭಟನೆಯು ಸೋಮವಾರದಂದು ಪಟ್ಟಣದ ಪ್ರಮುಖ ನಗರಲ್ಲಿ ಮೆರವಣಿಗೆ ಮೂಲಕ ಕಲ್ಮೇಶ್ವರ ವೃತ್ತದಲ್ಲಿ ಜಮಾಯಿಸಿ, ಅತ್ಯಚಾರ ಮಾಡಿದ ಐದು ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ ಮೂಲಕ ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸದರು. ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ತಾಲೂಕಿನ ರಾಜಾಪೂರ ದಲಿತ ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿ …
Read More »
inmudalgi
ಆಗಷ್ಟ್ 30, 2021 Recent Posts, ತಾಲ್ಲೂಕು, ಬೆಳಗಾವಿ
ಬಾಲಕೃಷ್ಣ ಮತ್ತು ರಾಧೆಯ ವೇಷದಲ್ಲಿ ಆರೋಹಿ ನಾಡಗೌಡರ ಗಮನಸೆಳೆದ ಕೃಷ್ಣನ ವೇಷದಲ್ಲಿ ಆರೋಹಿ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಸೋಮವಾರ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬಾಲಕೃಷ್ಣ ಮತ್ತು ರಾಧೆಯ ವೇಷದಲ್ಲಿ ಗಮನಸೆಳೆದಳು. ಆರೋಹಿ ಇಲ್ಲಿಯ ಪುರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಹಾಗೂ ವಿದ್ಯಾ ಅವರ ಮೊಮ್ಮಗಳು. ತಾಯಿ ಶೃತಿ ಮಗುವಿನ ವೇಷವನ್ನು ಸಿದ್ದಗೊಳಿಸಿದ್ದರು.
Read More »
inmudalgi
ಆಗಷ್ಟ್ 29, 2021 Recent Posts, ತಾಲ್ಲೂಕು, ಬೆಳಗಾವಿ
ಶ್ರದ್ಧೆ ಮತ್ತು ವಿಶ್ವಾಸದಲ್ಲಿ ಯಶಸ್ಸು ಸಾಧನೆ ಮೂಡಲಗಿ: ‘ಶ್ರದ್ದೆ ಮತ್ತು ಜನರ ವಿಶ್ವಾಸವಿದ್ದರೆ ಎಲ್ಲ ವ್ಯವಹಾರಗಳು ಯಶಸ್ಸು ಸಾಧಿಸುತ್ತವೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳು ಹೇಳಿದರು. ಇಲ್ಲಿಯ ಕಾಲೇಜು ರಸ್ತೆಯಲ್ಲಿ ಸಮರ್ಥ ಟಿವಿಎಸ್ ದ್ವಿಚಕ್ರ ವಾಹನಗಳ ಮಾರಾಟ ನೂತನ ಶೋರೂಮ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈವಭಕ್ತಿ ಇದ್ದರೆ ಸಾಗುವ ದಾರಿಯು ಯಶಸ್ಸಿನತ್ತ ಇರುತ್ತದೆ ಎಂದರು. ಶಿವಬಸಪ್ಪ ಭೀಮಪ್ಪ …
Read More »