inmudalgi
ಆಗಷ್ಟ್ 24, 2021 Recent Posts, ತಾಲ್ಲೂಕು, ಬೆಳಗಾವಿ
ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದ -ಸಂಸದ ಈರಣ್ಣ ಕಡಾಡಿ ಮೂಡಲಗಿ: ಕೋವಿಡ್ ಎರಡನೇ ಅಲೆ ಕಾರಣ ಸಂಕಷ್ಠದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ಗಳನ್ನು ಭಾರತ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿತರಿಸಿದರು. ಮಂಗಳವಾರ ಆ …
Read More »
inmudalgi
ಆಗಷ್ಟ್ 23, 2021 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಕರೊನಾ ಸೋಂಕಿನ ಭೀತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಸರ್ಕಾರದ ನಿರ್ದೇಶನದಂತೆ ಆರಂಭವಾದ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಭವ್ಯ ಸ್ವಾಗತ ಕೋರುವ ಕಾರ್ಯಕ್ರಮ ಸೋಮವಾರ ಆ.23 ರಂದು ನಡೆಯಿತು. ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಮಾತನಾಡಿ, ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ನಿಯಮಗಳನ್ನು ಶಾಲಾ ಮಕ್ಕಳಿಗೆ …
Read More »
inmudalgi
ಆಗಷ್ಟ್ 23, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಕೊರೋನಾ ಮಹಾಮಾರಿಯ ದುಷ್ಪರಿಣಾಮದಿಂದಾಗಿ ಕೇಲವು ತಿಂಗಳುಗಳಿಂದ ಶೈಕ್ಷಣಿಕ ಚಟುವಟಿಕೆಗಳು ಭೌತಿಕವಾಗಿ ನಡೆಯದೆ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿವೆ. ಸದ್ಯ ಸರಕಾರ, ಇಲಾಖೆಯು ಕೋವಿಡ್-19 ನಿಯಮಾವಳಿಗಳ ಪ್ರಕಾರ ತರಗತಿ ಪ್ರಾರಂಭವಾಗಿರುವದರಿಂದ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಖುಷಿ ನೀಡಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸೋಮವಾರ ಪಟ್ಟಣದ 9 ನೇ ಮತ್ತು 10 ನೇ ತರಗತಿಗಳ ಪ್ರಾರಂಭೋತ್ಸವದಲ್ಲಿ ಸ್ಥಳೀಯ ಕೆ.ಎಚ್.ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ಭಾಗವಹಿಸಿ, …
Read More »
inmudalgi
ಆಗಷ್ಟ್ 23, 2021 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಪ್ರತಿಯೊಬ್ಬ ಮನುಷ್ಯನು ಪರೋಪಕಾರ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು. ಹಬ್ಬ-ಹರಿ ದಿನಗಳು, ಜಾತ್ರಾ ಮಹೋತ್ಸವ, ನಮ್ಮ ನಾಡಿನ ಸಂಸ್ಕøತಿ, ಸಂಪ್ರದಾಯದ ಪ್ರತೀಕವಾಗಿವೆ ಎಂದು ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆ.23ರಂದು ನಡೆದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ಸತ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಸ್ಥಳೀಯರು ನೀಡುತ್ತಿರುವ ಸಹಾಯ, …
Read More »
inmudalgi
ಆಗಷ್ಟ್ 22, 2021 Recent Posts, ತಾಲ್ಲೂಕು, ಬೆಳಗಾವಿ
ಜೈ ಹನುಮಾನ ಸೇವಾ ಸಂಘದಿಂದ ಸ್ವಚ್ಚತಾ ಅಭಿಯಾನ ಮೂಡಲಗಿ: ಕರೋನಾದಿಂದ ಶಾಲೆಗೆ ಬಾರದ ವಿದ್ಯಾರ್ಥಿಗಳು ಆ.23 ರಂದು ಮರಳಿ ಶಾಲೆಗೆ ಬರುತ್ತಿರುವದರಿಂದ ಹೊಸ ಉತ್ಸಾಹ ತುಂಬುವದಕ್ಕಾಗಿ ತಾಲೂಕಿನ ಕಲ್ಲೋಳಿ ಪಟ್ಟಣದ “ಜೈ ಹನುಮಾನ ಯುವ ಜನ ಸೇವಾ ಸಂಘ” ದಿಂದ ಕಲ್ಲೋಳಿಯ ಪಂಡಿತ ಜವಾಹರಲಾಲ ನೆಹರೂ ಪ್ರೌಢ ಶಾಲೆಯ ಆವರಣದಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದರು. ಈ ಸಮಯದಲ್ಲಿ ಸಂಘಟನೆ ಅಧ್ಯಕ್ಷರು ಪರಶುರಾಮ ಇಮಡೇರ, ಉಪಾಧ್ಯಕ್ಷರು ಮಹಾಂತೇಶ ಕಡಲಗಿ, ರಾಜಪ್ಪಾ ಮಾವರಕರ, …
Read More »
inmudalgi
ಆಗಷ್ಟ್ 22, 2021 Recent Posts, ತಾಲ್ಲೂಕು, ಬೆಳಗಾವಿ
ನೂಲಿ ಚಂದಯ್ಯನವರ ನಾಮ ಫಲಕವನ್ನು ಅನಾವರಣ ಮೂಡಲಗಿ: 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲಿನವರಾದ ಕೊರಮ ಸಮಾಜದ ಧರ್ಮ ಗುರುಗಳಾದ ಶಿವ ಶರಣ ಕಾಯಕ ಯೋಗಿ ಶ್ರೀ ನೂಲಿ ಚಂದಯ್ಯನವರ 914 ಜಯಂತ್ಯುತ್ಸವದ ನಿಮಿತ್ಯ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ರವಿವಾರ ನೂಲಿ ಚಂದಯ್ಯನವರ ನಾಮ ಫಲಕವನ್ನು ಅನಾವರಣಗೊಳಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊರಮ ಸಮಾಜದ ಮುಖಂಡ ಮಡ್ಡೆಪ್ಪ ಭಜಂತ್ರಿ ಮಾತನಾಡಿ, ು ಶಿವಶರಣ ನೂಲಿ ಚಂದಯ್ಯನವರು 12 …
Read More »
inmudalgi
ಆಗಷ್ಟ್ 22, 2021 Recent Posts, ತಾಲ್ಲೂಕು, ಬೆಳಗಾವಿ
ಶಿವಶರಣ ನೂಲಿ ಚಂದಯ್ಯನವರ ಜಯಂತಿ ಆಚರಣೆ ಮೂಡಲಗಿ: 12ನೇ ಶತಮಾನದಲ್ಲಿ ಅತ್ಯಂತ ಸರ್ವಶ್ರೇಷ್ಠ ಶಿವ ಶರಣರೆನಿಸಿ ಸಾಕ್ಷಾತ ಪರಶಿವನನ್ನೆ ತನ್ನ ಸತ್ಯ, ನಿಷ್ಠೆ ಕಾಯಕದಿಂದ ಒಲಿಸಿಕೊಂಡ ಮಹಾನ ಶಿವಶರಣರು ತಾವು ಮಾಡಿದ ಕಾಯಕದಿಂದ ಜಂಗಮ ದಾಸೋಹದಂತ ಸೇವೆಗಳನ್ನು ಈ ನಾಡಿಗೆ ಪರಿಚಯಸಿದ ಸರ್ವ ಶ್ರೇಷ್ಠ ಶಿವಶರಣ ವಚನಕಾರ ಕಾಯಕಯೋಗಿ ಕೊರಮ ಸಮುದಾಯದ ಕುಲತಿಲಕರು ಹಾಗೂ ಕುಲಗುರುಗಳಾದ ಕಾಯಕಯೋಗಿ ಶ್ರೀ ಶಿವ ಶರಣ ನೂಲಿ ಚಂದಯ್ಯನವರ 914ನೇ ಜಯಂತಿಯನ್ನು ಪಟ್ಟಣದ ಕೊರಮ …
Read More »
inmudalgi
ಆಗಷ್ಟ್ 21, 2021 Recent Posts, ತಾಲ್ಲೂಕು, ಬೆಳಗಾವಿ
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕ್ರಿಕೆಟ್ ಟೂರ್ನಿ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ಗೆ ಚಾಂಪಿಯನ್ಷಿಪ್ ಟ್ರೋಪಿ ಮೂಡಲಗಿ: 75ನೇ ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತ್ರೀಕೋಣ ಕ್ರೀಕೆಟ್ ಟೂರ್ನಿಯಲ್ಲಿ ಮೂಡಲಗಿಯ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡವು ಚಾಂಪಿಯನ್ಷಿಪ್ ಪಡೆದುಕೊಂಡುಟ್ರೋಪಿಯನ್ನುತನ್ನದಾಗಿಸಿಕೊಂಡಿತು. ಹಳ್ಳೂರಿನ ಬಿಸಿಸಿ ತಂಡವು ರನ್ನರ್ಸ್ಷಿಪ್ ಪಡೆದುಕೊಂಡಿತು. ಸರ್ವೋತ್ತಮ ಆಟಗಾರರಾಗಿ ಶಿವು ಹುಬಳಿ, ಅತ್ಯುತ್ತಮ ಸರಣಿ ಆಟಗಾರರಾಗಿ ಬಾಳು ಸಣ್ಣಕ್ಕಿ ಆಯ್ಕೆಯಾಗಿ ವಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು. ಬಹುಮಾನ ಪ್ರಾಯೋಜಕ ಪುರಸಭೆ …
Read More »
inmudalgi
ಆಗಷ್ಟ್ 21, 2021 Recent Posts, ತಾಲ್ಲೂಕು, ಬೆಳಗಾವಿ
ಬೀಸನಕೊಪ್ಪ ವ್ಯಕ್ತಿ ಕಾಣೆ ಮೂಡಲಗಿ: ತಾಲೂಕಿನ ಬೀಸನಕೊಪ್ಪ ಗ್ರಾಮದ ವ್ಯಕ್ತಿ ಮಹಾದೇವ ಸಿದ್ದಪ್ಪ ಹುಚ್ಚನ್ನವರ(38)ಎಂಬುವನ್ನು ಕಳೆದ ಡಿಸೆಂಬರ 31ರಂದು ಮುಂಜಾನೆ ಬೀಸನಕೊಪ್ಪ ಗ್ರಾಮದಿಂದ ಗೋಕಾಕಕ್ಕೆ ಹೋಗಿ ಬರುವದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ರೇಣುಕಾ ಮ.ಹುಚ್ಚನ್ನವರ ಕುಲಗೋಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಕಾಣೆಯಾದ ವ್ಯಕ್ತಿಯು 5.8 ಪೂಟ ಎತ್ತರ, ಸದೃಡ ಮೈಕಟು, ದುಂಡು ಮುಖ, ಸಾದಾಗಪ್ಪು ಮೈ ಬಣ್ಣ, ಉದ್ದ …
Read More »
inmudalgi
ಆಗಷ್ಟ್ 21, 2021 Recent Posts, ತಾಲ್ಲೂಕು, ಬೆಳಗಾವಿ
ಯಾದವಾಡ ಯುವತಿ ಕಾಣೆ ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ವಿವಾಹಿತ ಮಹಿಳೆ ಮಾಸಾಬಿ ಶಾನೂರ ತಹಶಿಲ್ದಾರ(20)ಎಂಬುವಳು ಕಳೆದ ಅಕ್ಟೋಬರ 11 ರಂದು ತನ ಮನೆಯಿಂದ ಮುಂಜಾನೆ ಬಹಿರ್ದೆಶೆಗೆ ಹೋಗಿ ಬರುತ್ತೆನೆ ಎಂದು ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಮಹೀಳೆಯ ಪತಿ ಶಾನೂರ ಅ.ತಹಶೀಲ್ದಾರ ಕುಲಗೋಡ ಪೋಲಿಸ್ ಠಾಣೆಯಲ್ಲಿ ದೂರು ನೀಡಿದಾರೆ. ಕಾಣೆಯಾದ ಮಹಿಳೆಯು 5.1 ಪೂಟ ಎತ್ತರ, ದುಂಡು ಮುಖ ಗೋದಿ ಬಣ್ಣ, ಉದ್ದ ಮೂಗು, ಹೊಂದಿದ್ದು …
Read More »