Breaking News

TimeLine Layout

ಜನವರಿ, 2022

  • 4 ಜನವರಿ

    ಬೆಟಗೇರಿ ಗ್ರಾಮದ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ದೇಶ ಸೇವೆ ಅನುಕರಣಿಯ *ಇಂದು ನಿವೃತ್ತ ಸೈನಿಕರ ಬಳಗ ಹಾಗೂ ಗ್ರಾಮಸ್ಥರಿಂದ ಭವ್ಯ ಸ್ವಾಗತ ಮೆರವಣಿಗೆ * ಸತ್ಕಾರ ಕಾರ್ಯಕ್ರಮ

    ಬೆಟಗೇರಿ ಗ್ರಾಮದ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ದೇಶ ಸೇವೆ ಅನುಕರಣಿಯ *ಇಂದು ನಿವೃತ್ತ ಸೈನಿಕರ ಬಳಗ ಹಾಗೂ ಗ್ರಾಮಸ್ಥರಿಂದ ಭವ್ಯ ಸ್ವಾಗತ ಮೆರವಣಿಗೆ * ಸತ್ಕಾರ ಕಾರ್ಯಕ್ರಮ  ವರದಿ:  ಅಡಿವೇಶ ಮುಧೋಳ ಬೆಟಗೇರಿ:ಗ್ರಾಮದ ಸೈನಿಕ ಮುತ್ತೆಪ್ಪ ಬಸಪ್ಪ ನೀಲಣ್ಣವರ ಅವರು ಈಗ ಸೈನಿಕ ಸೇವೆಯಿಂದ ನಿವೃತ್ತಿಯಾಗಿ ಹುಟ್ಟೂರು ಗೋಕಾಕ ತಾಲೂಕಿನ ಬೆಟಗೇರಿ ಬೆಟಗೇರಿ ಗ್ರಾಮಕ್ಕೆ ಆಗಮಿಸುತ್ತಿರುವ ಅವರಿಗೆ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಜ.5 ರಂದು ಹಮ್ಮಿಕೊಳ್ಳಲಾಗಿದೆ. …

    Read More »
  • 3 ಜನವರಿ

    ‘ಕುರುಹಿನಶೆಟ್ಟಿ ಸೊಸೈಟಿಯ ಸಮಾಜಮುಖಿ ಕಾರ್ಯವು ಶ್ಲಾಘನೀಯವಾಗಿದೆ’ – ಶ್ರೀ ದತ್ತಾತ್ರಯಬೋಧ ಸ್ವಾಮೀಜಿ

    ಮೂಡಲಗಿಯ ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಶಿವಬೋಧರಂಗ ಮಠದ ನೂತನ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಅವರನ್ನು ಸನ್ಮಾನಿಸಿದರು.  ‘ಕುರುಹಿನಶೆಟ್ಟಿ ಸೊಸೈಟಿಯ ಸಮಾಜಮುಖಿ ಕಾರ್ಯವು ಶ್ಲಾಘನೀಯವಾಗಿದೆ’ ಮೂಡಲಗಿ: ‘ಕುರುಹಿನಶೆಟ್ಟಿ ಸೊಸೈಟಿಯು ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಗನೀಯವಾಗಿದೆ’ ಎಂದು ಶ್ರೀಶಿವಬೋಧರಂಗ ಮಠದ ಪೀಠಾಧಿಪತಿ  ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಹೇಳಿದರು. ಇಲ್ಲಿಯ ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಹೈಟೆಕ್ ರಕ್ತ ತಪಾಸಣೆ ಕೇಂದ್ರ ಹಾಗೂ ಗೋಕಾಕ ಬ್ಲ್‍ಡ ಬ್ಯಾಂಕ್ …

    Read More »
  • 3 ಜನವರಿ

    ಡೇ-ನಲ್ಮ್ ವಿಭಾಗದಲ್ಲಿ ಸಿಆರ್‍ಪಿ ಹುದ್ದೆಗೆ ಅರ್ಜಿ ಆಹ್ವಾನ

      ಡೇ-ನಲ್ಮ್ ವಿಭಾಗದಲ್ಲಿ ಸಿಆರ್‍ಪಿ ಹುದ್ದೆಗೆ ಅರ್ಜಿ ಆಹ್ವಾನ ಮೂಡಲಗಿ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಸ್ವಸಹಾಯ ಸಂಘಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಮೂಡಲಗಿ ಪುರಸಭೆಗೆ ಒಟ್ಟು 2 ಹುದ್ದೆ ಖಾಲಿ ಇದ್ದು ಗೌರವಧನ ಮಾಸಿಕ ರೂ. 8 ಸಾವಿರ …

    Read More »
  • 3 ಜನವರಿ

    ಮೂಡಲಗಿಯ ಜ್ಯೋತಿರ್ಲಿಂಗ ಸಹಕಾರಿ ಸಂಘದಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ

    ಮೂಡಲಗಿಯ ಜ್ಯೋತಿರ್ಲಿಂಗ ಸಹಕಾರಿ ಸಂಘದಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ ಮೂಡಲಗಿ: ಇಲ್ಲಿನ ಜ್ಯೋತಿರ್ಲಿಂಗ ವಿವಿಧ ಉದ್ದೇಶಗಳ ಸಹಕಾರಿ ಸಂಘದಲ್ಲಿ ಅಕ್ಷರ ತಾಯಿ ಸಾವಿತ್ರಿ ಬಾಯಿ ಪುಲೆಯವರ 191ನೇ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಈ ಸಮಯದಲ್ಲಿ ಸಂಘದ ನಿರ್ದೇಶಕ ಈರಪ್ಪ ಬನ್ನೂರ ಮಾತನಾಡಿ, ದೀನ ದಲಿತರ ಶೈಕ್ಷಣಿಕ ಅಭಿವೃದ್ದಿಗೆ ತಮ್ಮ ಜೀವ ಪಣಕ್ಕಿಟ್ಟು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಹೆಣ್ಣು ಮಕ್ಕಳೂ ಶಿಕ್ಷಣ ಪಡೆಯುವಂತೆ …

    Read More »
  • 3 ಜನವರಿ

    ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು- ಲಸಿಕೆ ಹಾಕಿಸಿ-ಸಂಸದ ಈರಣ್ಣ ಕಡಾಡಿ ಪೊಷಕರಲ್ಲಿ ಮನವಿ

    ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು- ಲಸಿಕೆ ಹಾಕಿಸಿ-ಸಂಸದ ಈರಣ್ಣ ಕಡಾಡಿ ಪೊಷಕರಲ್ಲಿ ಮನವಿ ಮೂಡಲಗಿ: ಕೋವಿಡ್‍ನಿಂದ ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿ ಪೊಷಕರಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದರು. ಸೋಮವಾರ ಜ.03 ರಂದು ಕಲ್ಲೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ …

    Read More »
  • 2 ಜನವರಿ

    ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ಜೀವನ ಆನಂದವಾಗಿಸಿರಿ

    ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ಜೀವನ ಆನಂದವಾಗಿಸಿರಿ ಮೂಡಲಗಿ: ‘ಮನಸ್ಸಿನಲ್ಲಿರುವ ಕಲ್ಮಶಗಳನ್ನು ದೂರಮಾಡಿ ಉತ್ತಮ ಚಿಂತನೆ, ಆಚರಣೆಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡು ಜೀವನವನ್ನು ಆನಂದಮಯವಾಗಿಸಿಕೊಳ್ಳಬೇಕು’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು. ಇಲ್ಲಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರೇಖಾ ಅಕ್ಕನವರು ಭಕ್ತರೊಂದಿಗೆ ದೀಪವನ್ನು ಬೆಳಗಿಸುವ ಮೂಲಕ ಹೊಸ ವರ್ಷವನ್ನು ಆಚರಿಸಿ ಮಾತನಾಡಿದ ಅವರು ದೇವರಲ್ಲಿ ಧ್ಯಾನ, ಭಕ್ತಿಯನ್ನು ಇಡುವುದರ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಮಾಡಿಕೊಳ್ಳಬೇಕು ಎಂದರು. ಸಮಾಜದಲ್ಲಿ ಪ್ರೀತಿ, ಸೌಹಾರ್ದತೆಯಿಂದ …

    Read More »
  • 2 ಜನವರಿ

    ಮಠ ಮಂದಿರಗಳು ಸತತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಇದೆ -ಸಂಸದ ಈರಣ್ಣ ಕಡಾಡಿ

    ಮೂಡಲಗಿ: ಭಕ್ತಿ ಭಾವದಿಂದ ಸೇವೆ ಮಾಡುವುದರಿಂದ ನೆಮ್ಮದಿ ಸಾಧ್ಯವಾಗುತ್ತದೆ ಮಠ ಮಂದಿರಗಳು ಸತತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಇದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು. ರವಿವಾರ ಡಿ-02 ರಂದು ಶ್ರೀ ಶಿವಭೋಧರಂಗ ಸಂಸ್ಥಾನ ಮಠದ ನೂತನ ಶ್ರೀಗಳ ಪೀಠಾರೋಹಣ ಅಲಂಕರಿಸಿದ ಸಂದರ್ಭದಲ್ಲಿ ಶ್ರೀ ದತ್ತಾತ್ರೇಯಬೋಧ ಶ್ರೀಪಾದ ಬೋಧ ಸ್ವಾಮಿಜೀ ಹಾಗೂ ಶ್ರೀ ಶ್ರೀಧರ ಶ್ರೀಪಾದಬೋಧ ಸ್ವಾಮಿಜೀಗಳನ್ನು ಸತ್ಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು …

    Read More »
  • 1 ಜನವರಿ

    5ಕೆಜಿ250 ಗ್ರಾಂ ತೂಕದ ಗೆಣಸು.!

    5ಕೆಜಿ250 ಗ್ರಾಂ ತೂಕದ ಗೆಣಸು.! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರೈತ ಪ್ರಕಾಶ ಈಶ್ವರ ಮೇಳೆಣ್ಣವರ ಅವರ ತೋಟದಲ್ಲಿ 5ಕೆಜಿ 250ಗ್ರಾಂ ತೂಕದ ಗೆಣಸು ಬೆಳೆದು ಆಶ್ಚರ್ಯ ಮೂಡಿಸಿದೆ. ಈ ಗೆಣಸು ನೋಡಿದವರು ಹುಬ್ಬೆರುಸುವಂತಾಗಿದೆ.  

    Read More »
  • 1 ಜನವರಿ

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಬ್ಯಾಂಕ ಖಾತೆಗಳಿಗೆ ಇಂದು ಹಣ

    ಮೂಡಲಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ದೇಶದ 10.09 ಕೋಟಿ ರೈತ ಬಂಧುಗಳಿಗೆ ರೂ.20,900 ಕೋಟಿ ರೂ ಗಳನ್ನು ರೈತರ ಬ್ಯಾಂಕ ಖಾತೆಗಳಿಗೆ ಇಂದು ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘೀಸಿದ್ದಾರೆ. ಶನಿವಾರ ಜ.01 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ …

    Read More »
  • 1 ಜನವರಿ

    ಸರ್ವರನ್ನು ಒಂದುಗೂಡಿಸಿ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಕೈಯಲ್ಲಿದೆ- ಸರ್ವೋತ್ತಮ ಜಾರಕಿಹೊಳಿ

    ಮೂಡಲಗಿ: ಜಾನಪದ ಸಾಹಿತ್ಯದಲ್ಲಿ ಸಮಾಜ ಕಟ್ಟುವ ಶಕ್ತಿ ಇದೆ ಸರ್ವರನ್ನು ಒಂದುಗೂಡಿಸುವ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಕೈಯಲ್ಲಿದೆ ಎಂದು ಗೋಕಾಕ್ ಲಕ್ಷ್ಮಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು ಗುರ್ಲಾಪುರ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಹಾಗೂ ಗುರ್ಲಾಪುರ್ …

    Read More »