Breaking News

TimeLine Layout

ಡಿಸೆಂಬರ್, 2021

  • 22 ಡಿಸೆಂಬರ್

    ರಮೇಶ್ ಕತ್ತಿಗೆ ‘ಜೈ’ ಎಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿ. ಜಾರಕಿಹೊಳಿ- ಕತ್ತಿ ಕುಟುಂಬದ ಮಧ್ಯ ಯಾವುದೇ ಬಿರುಕಿಲ್ಲ. ನಾವೆಲ್ಲ ಒಂದೇ.

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿಗೆ ‘ಜೈ’ ಎಂದ ನಿರ್ದೇಶಕರು ರಮೇಶ ಕತ್ತಿ ಅವರೇ ಪೂರ್ಣಾವಧಿ ಅಧ್ಯಕ್ಷರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಯಾರಿಂದಲೂ ಜಾರಕಿಹೊಳಿ-ಕತ್ತಿ ಕುಟುಂಬಗಳನ್ನು ಒಡೆಯಲು ಸಾಧ್ಯವಿಲ್ಲ. ಬೆಳಗಾವಿ : ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ ಹಾಕಿದ್ದು, ಅಧ್ಯಕ್ಷ ರಮೇಶ ಕತ್ತಿ ಮತ್ತು ಬ್ಯಾಂಕಿನ ನಿರ್ದೇಶಕರುಗಳ ಮಧ್ಯೆ ನಡೆದ ಸಂಧಾನ ಸಭೆ ಯಶಸ್ವಿಯಾಗುವ ಮೂಲಕ …

    Read More »
  • 22 ಡಿಸೆಂಬರ್

    ಹೈಸ್ಕೂಲಿನ 1990-91 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಅಪೂರ್ವ ಸ್ನೇಹಸಂಗಮ ಕಾರ್ಯಕ್ರಮ

    ಮೂಡಲಗಿ : ಭಾರತೀಯ ಸಂಸ್ಕ್ರತಿಯಲ್ಲಿ ತ್ರಿಮೂರ್ತಿಗಳಿಗೆ ಅತೀತವಾದ ಸ್ಥಾನವನ್ನು ಗುರುವಿಗೆ ನೀಡಿದೆ. ಸೃಷ್ಠಿ, ಸ್ಥಿತಿ, ಲಯಗಳನ್ನು ನಿರ್ವಹಿಸುತ್ತಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಕಾರ್ಯಗಳನ್ನು ಗುರುವೊಬ್ಬನೇ ನಿರ್ವಹಿಸಬಲ್ಲನಾದ್ದರಿಂದ “ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮ: ಎನ್ನುವ ಮೂಲಕ “ನ ಗುರೋರಧಿಕಂ” ಎಂದು ಮನ್ನಿಸಲಾಗಿದೆ. ಗುರು-ಶಿಷ್ಯ ಪರಂಪರೆಗೆ ಸನಾತನ ಕಾಲದಿಂದಲೂ ಬಹುದೊಡ್ಡ ಇತಿಹಾಸವಿದೆ. ಅಂತಹ ಗುರುಶಿಷ್ಯರ ಸಮ್ಮಿಲನ ಇಂದು ಕಣ್ಮನಗಳಿಗೆ ಮುದ ನೀಡುವಂತಿದೆ ಎಂದು ವಿಶ್ರಾಂತ ಪ್ರಾದ್ಯಾಪಕ, …

    Read More »
  • 21 ಡಿಸೆಂಬರ್

    ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಸಂಪನ್ನ

    ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಸಂಪನ್ನ ಬೆಟಗೇರಿ:ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪಲ್ಲಕ್ಕಿ ಉತ್ಸವ ಮಂಗಳವಾರ ಡಿ.21 ರಂದು ವಿಜೃಂಭನೆಯಿಂದ ನಡೆದವು. ಮುಂಜಾನೆ 10.30 ಗಂಟೆಗೆ ಇಲ್ಲಿಯ ದ್ಯಾಮವ್ವದೇವಿ ದೇವರ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶೃಂಗಾರಗೊಳಿಸುವ, ಉಡಿತುಂಬುವದು, ಪುರದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು ಸಡಗರದಿಂದ ನಡೆಯಿತು. ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯದಲ್ಲಿ ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಿ, …

    Read More »
  • 21 ಡಿಸೆಂಬರ್

    ‘ಸಾಹಿತ್ಯದ ಓದುಗಾರಿಕೆಯು ಮನುಷ್ಯನ ಹೃದಯ ಶುದ್ದತೆ ಮತ್ತು ಸಂಸ್ಕಾರಗೊಳಿಸುವುದು

    ‘ಸಾಹಿತ್ಯದ ಓದುಗಾರಿಕೆಯು ಮನುಷ್ಯನ ಹೃದಯ ಶುದ್ದತೆ ಮತ್ತು ಸಂಸ್ಕಾರಗೊಳಿಸುವುದು ಮೂಡಲಗಿ: ‘ಸಾಹಿತ್ಯದ ಓದು ಮನುಷ್ಯನ ಹೃದಯವನ್ನು ಶುದ್ಧ ಮತ್ತು ಸಂಸ್ಕಾರಗೊಳಿಸುವ ಪ್ರಕ್ರಿಯೆಯಾಗಿದೆ’ ಎಂದು ಸಾಹಿತಿ ಗೋಕಾಕದ ಜೆಸ್‍ಎಸ್ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು. ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಆಯೋಜಿಸಲಿರುವ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯದ ಓದು ಜೀವನೋತ್ಸಾಹವನ್ನು ವೃದ್ಧಿಸುತ್ತದೆ ಎಂದರು. ಇಂದಿನ ತಂತ್ರಜ್ಞಾನದ ಬೆಳವಣಿಗೆಯ ಒತ್ತಡೆದಲ್ಲಿ …

    Read More »
  • 21 ಡಿಸೆಂಬರ್

    ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಹರಿಯುತ್ತಿರುವ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ವಿರೋಧಿಸಿ ವಿಶ್ವರಾಜ್ ಶುಗರ್ಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ವಡೇರಹಟ್ಟಿ ಗ್ರಾಮಸ್ಥರು

    ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಹರಿಯುತ್ತಿರುವ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ವಿರೋಧಿಸಿ ವಿಶ್ವರಾಜ್ ಶುಗರ್ಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ವಡೇರಹಟ್ಟಿ ಗ್ರಾಮಸ್ಥರು ಮೂಡಲಗಿ : ತಾಲೂಕಿನ ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್‍ನಿಂದ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ಬಿಡುವುದನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ. ಮಂಗಳವಾರದಂದು ವಡೇರಹಟ್ಟಿ ಗ್ರಾಮದ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಇಂದು ತಹಶೀಲ್ದಾರ ಕಛೇರಿಗೆ ಆಗಮಿಸಿ ಕಾರ್ಖಾನೆಯ ಮಾಲೀಕರ ವಿರುದ್ಧ …

    Read More »
  • 21 ಡಿಸೆಂಬರ್

    ಎಮ್ ಇ ಎಸ್ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

    ಎಮ್ ಇ ಎಸ್ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಮೂಡಲಗಿ – ಭಾಷಾ ಗೊಂದಲದಲ್ಲಿ ಬಸವಣ್ಣ, ರಾಯಣ್ಣನಂಥವರಿಗೆ ಅವಮಾನ ಮಾಡಿರುವ ಎಮ್ ಇಎಸ್ ಪುಂಡರ ಹುಟ್ಟಡಗಿಸಬೇಕು. ಕರ್ನಾಟಕದಲ್ಲಿ ಶಿವಸೇನೆ ಮತ್ತು ಎಮ್ ಇ ಎಸ್ ಸಂಘಟನೆಗಳ ಮೇಲೆ ನಿಷೇಧ ಹೇರಲೇಬೇಕು ಎಂದು ನಿವೃತ್ತ ಶಿಕ್ಷಕ ಬಿ ಆರ್ ತರಕಾರ ಹೇಳಿದರು. ವಿಶ್ವಗುರು ಬಸವಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ …

    Read More »
  • 20 ಡಿಸೆಂಬರ್

    ಡಿ.21ರಂದು ಬೆಟಗೇರಿ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ

    ಡಿ.21ರಂದು ಬೆಟಗೇರಿ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಬೆಟಗೇರಿ:ಗ್ರಾಮದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಮಂಗಳವಾರ ಡಿ.21 ರಂದು ನಡೆಯಲಿದೆ. ಡಿ.21 ರಂದು ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ದ್ಯಾಮವ್ವದೇವಿ ದೇವರ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶ್ರೀದೇವಿ ಶೃಂಗಾರಗೊಳಿಸುವ, ಉಡಿತುಂಬುವದು, ಪುರದೇವರ ವಿವಿಧ ಪಲ್ಲಕ್ಕಿಗಳ ಬರಮಾಡಿಕೊಳ್ಳುವದು, ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ, ಪುರಜನರಿಂದ ಪೂಜೆ ಪುನಸ್ಕಾರ, ನೈವೇದ್ಯ ಸಮರ್ಪನೆ …

    Read More »
  • 20 ಡಿಸೆಂಬರ್

    ಅಯ್ಯಪ್ಪಸ್ವಾಮಿ ಮಹಾಪೂಜೆಯ ಭವ್ಯ ಮೇರವಣಿಗೆಗೆ ಚಾಲನೆ

    ಅಯ್ಯಪ್ಪಸ್ವಾಮಿ ಮಹಾಪೂಜೆಯ ಭವ್ಯ ಮೇರವಣಿಗೆಗೆ ಚಾಲನೆ ಮೂಡಲಗಿ: ಪಟ್ಟಣದ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 28ನೇ ವರ್ಷದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ಉತ್ಸವ ಹಾಗೂ ಭವ್ಯ ಮೆರವಣಿಗೆಗೆ ಸೋಮವಾರ ಸಂಜೆ ಜರುಗಿತು. ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಹೊತ್ತಿರುವ ಆನೆಯ ಅಂಬಾರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಷಂಬಿ, ಪುರಸಭೆ ಅಧ್ಯಕ್ಷ …

    Read More »
  • 20 ಡಿಸೆಂಬರ್

    ಲಯನ್ಸ್ ಪರಿವಾರದಿಂದ ಇಂದು ಅನ್ನದಾಸೋಹ

      ಲಯನ್ಸ್ ಪರಿವಾರದಿಂದ ಇಂದು ಅನ್ನದಾಸೋಹ ಮೂಡಲಗಿ: ಲಯನ್ನ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಮತ್ತು ಅವರ ಪಾಲಕರಿಗೆ ಇಂದು ಸೋಮವಾರ ದಿನಾಂಕ: 20-12-2021ರಂದು ಮಧ್ಯಾಹ್ನ 12 ಗಂಟೆಗೆ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ. ಮೂಡಲಗಿಯ ಎಲವು ಕೀಲು ಚಿಕಿತ್ಸಾ ತಜ್ಞ ಡಾ. ರಾಜೇಂದ್ರ ಅ. ಗಿರಡ್ಡಿ ಅವರು ಅನ್ನದಾಸೋಹಿಗಳಾಗಿರುವರು. ಮುಖ್ಯ ಅತಿಥಿ ಮೂಡಲಗಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ, ನಿರ್ದೇಶಕ ಶ್ರೀ ಅಜ್ಜಪ್ಪ …

    Read More »
  • 19 ಡಿಸೆಂಬರ್

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ “ಅಹಂ” ಮುರಿಯಲು ಬಂಡಾಯದ ಬಾವುಟ ಹಾರಿಸಿದ ಬ್ಯಾಂಕಿನ ನಿರ್ದೇಶಕರು. ನಿನ್ನೆ ಶನಿವಾರದಂದು ಕೋರಂ ಇಲ್ಲದೇ ಆಡಳಿತ ಮಂಡಳಿ ಸಭೆ ನಡೆಸಿದ ಆರೋಪ ಹೊತ್ತಿರುವ ರಮೇಶ ಕತ್ತಿ

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ “ಅಹಂ” ಮುರಿಯಲು ಬಂಡಾಯದ ಬಾವುಟ ಹಾರಿಸಿದ ಬ್ಯಾಂಕಿನ ನಿರ್ದೇಶಕರು. ನಿನ್ನೆ ಶನಿವಾರದಂದು ಕೋರಂ ಇಲ್ಲದೇ ಆಡಳಿತ ಮಂಡಳಿ ಸಭೆ ನಡೆಸಿದ ಆರೋಪ ಹೊತ್ತಿರುವ ರಮೇಶ ಕತ್ತಿ ಬೆಳಗಾವಿ : ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಗೆ 10 ಜನ ನಿರ್ದೇಶಕರು ಗೈರು ಹಾಜರಾಗುವ ಮೂಲಕ ಅಧ್ಯಕ್ಷ ರಮೇಶ ಕತ್ತಿ ಅವರ ಸರ್ವಾಧಿಕಾರತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಶನಿವಾರ ದಿನಾಂಕ 18 ರಂದು …

    Read More »