ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಮಹಾಮಾರಿ ಕರೋನಾ ನಡೆಸಿದ್ದ ಆರ್ಭಟ ಇಂದು ಸ್ವಲ್ಪ ತಗ್ಗಿದೆ. ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕುಸಿತ ಖಂಡಿದ್ದು, ಗೋಕಾಕ ತಾಲೂಕಿನಲ್ಲಿ ೨ ಸೋಂಕು ಮಾತ್ರ ದೃಢಪಟ್ಟಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಹೇಳಿದರು. ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದ ೧೪ ವರ್ಷದ ಯುವಕನಿಗೆ ಹಾಗೂ ಘಟಪ್ರಭಾದ ೨೫ ವರ್ಷದ ಯುವತಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಿಗೆ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ …
Read More »TimeLine Layout
ಆಗಷ್ಟ್, 2020
-
2 ಆಗಷ್ಟ್
ಜಿಎಲ್ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ
ಮೂಡಲಗಿ: ಇಂದು ಬೆಳವಣಿಗೆ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುವುದು ಅಗತ್ಯವಾಗಿದೆ. ನೇಗಿಲಯೋಗಿ ದೇಶದ ಬೆನ್ನಲುಬು, ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ನೀರಾವರಿ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಬೆಳಗಾವಿ ಕರ್ನಾಟಕ ನೀರಾವರಿ ನಿಗಮ ವಿಭಾಗದ ಸಹಯೋಗದ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರವಿವಾರ ಆ.2ರಂದು ನಡೆದ ಜಿಎಲ್ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಭೂಮಿ …
Read More » -
2 ಆಗಷ್ಟ್
ಎನ್ಎಸ್ಎಫ್ ಅತಿಥಿ ಗೃಹದಲ್ಲಿ ರೋಗಿಗಳ ಆರೈಕೆ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ಸಭೆ
ಗೋಕಾಕ : ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದೆ ಅನುಸರಿಸಬೇಕಾದ ಕ್ರಮಗಳ ಕುರಿತು ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ರೋಗಿಗಳ ಆರೈಕೆ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಆರೋಗ್ಯಾಧಿಕಾರಿಗಳು, …
Read More » -
1 ಆಗಷ್ಟ್
ಜಿಲ್ಲೆಯಲ್ಲಿ 219 ಸೋಂಕಿತರು ದೃಢಪಟ್ಟಿದ್ದಾರೆ.
ಬೆಳಗಾವಿ : ಬೆಳಗಾವಿ ತಾಲೂಕಿನಲ್ಲಿ 130 , ಜಿಲ್ಲೆಯಲ್ಲಿ 219 ಸೋಂಕಿತರು ದೃಢಪಟ್ಟಿದ್ದಾರೆ. ಇನ್ನು ರಾಯಬಾಗ್ ತಾಲೂಕಿನಲ್ಲಿ 24, ಚಿಕ್ಕೋಡಿ ತಾಲೂಕಿನಲ್ಲಿ 17, ಗೋಕಾಕ್ ತಾಲೂಕಿನಲ್ಲಿ 14, ಸವದತ್ತಿ ತಾಲೂಕಿನಲ್ಲಿ 13, ರಾಮದುರ್ಗ ತಾಲೂಕಿನಲ್ಲಿ 8, ಹುಕ್ಕೇರಿ ತಾಲೂಕಿನಲ್ಲಿ 7, ಖಾನಾಪುರ ತಾಲೂಕಿನಲ್ಲಿ 3, ಬೈಲಹೊಂಗಲ ತಾಲೂಕಿನಲ್ಲಿ 01, ಅಥಣಿ ತಾಲೂಕಿನಲ್ಲಿ 02 ಸೋಂಕಿತರು ದೃಢಪಟ್ಟಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ನಾಲ್ವರನ್ನು ಕಿಲ್ಲರ್ ಕೊರೊನಾ ಬಲಿ ಪಡೆದುಕೊಂಡಿದೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ …
Read More » -
1 ಆಗಷ್ಟ್
ತುಕ್ಕಾನಟ್ಟಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಹೊರಾಂಗಣ ಶಿಕ್ಷಣ.
ತುಕ್ಕಾನಟ್ಟಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಹೊರಾಂಗಣ ಶಿಕ್ಷಣ. ಮೂಡಲಗಿ: ಮಹಾಮಾರಿ ಕೊರೊನಾ ವೈರಸ್ದಿಂದಾಗಿ ಶಾಲೆಗಳು ತೆರೆಯದೇ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಕೂಡಾ ನಮ್ಮ ಗ್ರಾಮೀಣ ಮಟ್ಟದ ಬಡ ಕುಟಂಬಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಕಾರಣ ಬಡ ಮಕ್ಕಳ ಜನ ವಸತಿ ಪ್ರದೇಶಕ್ಕೆ ಶಿಕ್ಷಕರೇ ಹೋಗಿ ಸಾಮಾಜಿಕ ಅಂತರದಲ್ಲಿ ಬಯಲು ಪ್ರದೇಶದಲ್ಲಿ ಶಿಕ್ಷಣ ನೀಡುತ್ತಿದ್ದೇವೆ ಎಂದು ಮೂಡಲಗಿ ವಲಯದ ತುಕ್ಕಾನಟ್ಟಿಯ ಸರಕಾರಿ ಶಾಲೆಯ ಮುಖ್ಯ …
Read More » -
1 ಆಗಷ್ಟ್
ಮೂಡಲ, ಮೂಡಣ ಎಂಬುದೇ ಮೂಡಲಗಿ : ಶ್ರೀ ಮಹಾದೇವ ಪೋತರಾಜ
ಮೂಡಲ, ಮೂಡಣ ಎಂಬುದೇ ಮೂಡಲಗಿ : ಶ್ರೀ ಮಹಾದೇವ ಪೋತರಾಜ ಗೋಕಾಕ: ಮೂಡಣ ಪ್ರದೇಶ ಎಂಬ ದಿಗ್ವಾಚಕ ಪದವೇ ಮೂಡಲಗಿ ಎಂದಾಗಿರಬಹುದು ಎಂದು ಖಾನಟ್ಟಿಯ ಪಿ.ಎಚ್. ಡಿ ಸಂಶೋಧನಾರ್ಥಿ ಶ್ರೀ ಮಹಾದೇವ ಪೋತರಾಜ ಅಭಿಪ್ರಾಯಿಸಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ 2019 ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 16ನೇ ಗೋಷ್ಠಿಯಲ್ಲಿ “ಮೂಡಲಗಿ ಐತಿಹಾಸಿಕ ಚಿಂತನೆ” ವಿಷಯ ಕುರಿತು …
Read More » -
1 ಆಗಷ್ಟ್
ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇಮಕ
ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ …
Read More » -
1 ಆಗಷ್ಟ್
ರವಿವಾರದ ಸಂತೆಯನ್ನು ಸಂಪೂರ್ಣ ರದ್ದು- ಈಶ್ವರ ಬಳಿಗಾರ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಭಾನುವಾರದ ಸಂತೆಯನ್ನು ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆ.2, ಆ.9, ಆ.16, ಆ.23, ಆ30ರ ದಿನಗಳ ರವಿವಾರದ ಸಂತೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಹಕರಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದ್ದಾರೆ. ಶನಿವಾರ ಆ.1 ರಂದು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಬೆಟಗೇರಿ ಗ್ರಾಮದ ಹಿರಿಯ ನಾಗರಿಕರ …
Read More »
ಜುಲೈ, 2020
-
31 ಜುಲೈ
ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ
ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ ಗೋಕಾಕ: ಸಾಂಸ್ಕೃತಿಕ ಇತಿಹಾಸಕ್ಕೆ ಸ್ಥಳೀಯ ನೆಲದ ಹೆಸರುಗಳನ್ನು ಅರ್ಥೈಸುವಲ್ಲಿ ಅಧ್ಯಯನದ ಅಗತ್ಯವಿದೆ. ಒಂದು ಪ್ರದೇಶದ ಜನರ ನೆಲೆ, ಜಾಗ, ಸ್ಥಳ ಹೆಸರುಗಳಿಗೆ ಊರು, ಕೇರಿ, ಹಳ್ಳಿ, ಗ್ರಾಮ ಎಂದು ಕರೆಯಲಾಗಿದೆ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಯರಿಯಪ್ಪ ಬೆಳಗುರ್ಕಿ ಅಭಿಪ್ರಾಯ ಪಟ್ಟರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ …
Read More » -
31 ಜುಲೈ
ಭಾರತದ ಸಂಸ್ಕøತಿ ಬಿಂಬಿಸುವ ಹೊಸ ಶಿಕ್ಷಣ ನೀತಿ. ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ ; ಎಚ್.ಆರ್.ಎನ್ ಸ್ವಾಗತ.
ಭಾರತದ ಸಂಸ್ಕøತಿ ಬಿಂಬಿಸುವ ಹೊಸ ಶಿಕ್ಷಣ ನೀತಿ. ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ ; ಎಚ್.ಆರ್.ಎನ್ ಸ್ವಾಗತ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಅನೇಕ ವರ್ಷಗಳ ಬೇಡಿಕೆ ಈಗ ಈಡೇರಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ 2020ನ್ನು ತಾವು ಹಾರ್ದಿಕವಾಗಿ ಸ್ವಾಗತಿಸುವುದಾಗಿ ವಿಧಾನ ಪರಿಷತ್ ಸದಸ್ಯ ಹನುಮಂತ ಆರ್ ನಿರಾಣಿ ತಿಳಿಸಿದ್ದಾರೆ. ಭಾರತದ ಭವ್ಯ ಪರಂಪರೆ ಮತ್ತು …
Read More »
IN MUDALGI Latest Kannada News