Breaking News

TimeLine Layout

ಫೆಬ್ರವರಿ, 2025

  • 10 ಫೆಬ್ರವರಿ

    ಅಪರಿಚಿತ ವ್ಯಕ್ತ ಶವ ಪತ್ತೆ

    ಅಪರಿಚಿತ ವ್ಯಕ್ತ ಶವ ಪತ್ತೆ  ಕುಲಗೋಡ: ಗೋಕಾಕ ತಾಲೂಕಿನ ಬೇಟಗೇರಿ ಗ್ರಾಮದ ದಂಡಿನ ಇವರ ಜಮಿನದಲ್ಲಿನ ಬಾವಿಯಲ್ಲಿ ಅಪರಿಚಿತ ವ್ಯಕ್ತ ಶವ ಪತ್ತೆಯಾದ ಘಟನೆ ಇತ್ತಿಚಿಗೆ ನಡೆದಿದೆ .ಮೃತ ಬಾವಿ ಕಡೆ ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಕಂಡು ಬಂದಿದ್ದು. ಮೃತ 35-40 ಬಲಗೈ ಮೇಲೆ ಇಂಗ್ಲೀಷನಲ್ಲಿ ಮಧು ಅಂತ ಹಾಗೂ ಹೆಡೆ ಎತ್ತಿದ ನಾಗರ ಹಾವಿನ ಟ್ಯಾಟೋ ಇದ್ದು ಪ್ರಕರಣ ಕುಲಗೋಡ ಠಾಣೆಯಲ್ಲಿ ದಾಖಲಾಗಿದೆ. ಮೃತನ …

    Read More »
  • 10 ಫೆಬ್ರವರಿ

    ಶೈಕ್ಷಣಿಕ ಬಲವರ್ಧನಗೆ ಕಲಿಕಾ ಹಬ್ಬ ಪೂರಕ: ಅಂಗಡಿ

    ಶೈಕ್ಷಣಿಕ ಬಲವರ್ಧನಗೆ ಕಲಿಕಾ ಹಬ್ಬ ಪೂರಕ: ಅಂಗಡಿ ಮೂಡಲಗಿ 10: ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಷೇಶವಾಗಿ ಮೂಲಭೂತ ಸಾಕ್ಷರತೆ ಮತ್ತು ತಂತ್ರಜ್ಞಾನದ ಚಟುವಟಿಕೆಗಳ ಬಲವರ್ದನೆಗೆ ಕಲಿಕಾಹಬ್ಬ ಪೂರಕ ಹಾಗೂ ಸಂತೋಷದಾಯಕ ಕಲಿಕಾ ವಾತಾವರಣ ಪ್ರೇರೆಪಿಸುತ್ತದೆ ಎಂದು ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಅಂಗಡಿ ಹೇಳಿದರು. ಅವರು ತುಕ್ಕಾಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲೋಳಿ ಸಮೂಹ ಸಂಪನ್ಮೂಲ ಕೇಂದ್ರಮಟ್ಟದ ಕಲಿಕಾ ಹಬ್ಬದಲ್ಲಿ …

    Read More »
  • 10 ಫೆಬ್ರವರಿ

    ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ – ಬಿಇಓ ಅಜೀತ್ ಮನ್ನಿಕೇರಿ

    ಮೂಡಲಗಿ : ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ಬಿಇಓ ಅಜೀತ್ ಮನ್ನಿಕೇರಿ ಹೇಳಿದರು. ಪಟ್ಟಣದ ಬಿಇಓ ಕಚೇರಿಯ ಹಿಂಭಾಗದಲ್ಲಿ ನಿಸರ್ಗ ಫೌಂಡೇಶನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಯುವ ಜೀವನ ಸೇವಾ ಸಂಸ್ಥೆ ಇವುಗಳ ಆಶ್ರಯದಲ್ಲಿ ಜರುಗಿದ, ಶರಣರ ಜಯಂತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿದ …

    Read More »
  • 9 ಫೆಬ್ರವರಿ

    ಕುರುಹಿನಶೆಟ್ಟಿ ಸೊಸಾಯಿಟಿಗೆ ಅಧ್ಯಕ್ಷರಾಗಿ ಬೆಳಕೂಡ, ಉಪಾಧ್ಯಕ್ಷರಾಗಿ ಕಳ್ಳಿಮನಿ ಅವಿರೋಧ ಆಯ್ಕೆ

    ಕುರುಹಿನಶೆಟ್ಟಿ ಸೊಸಾಯಿಟಿಗೆ ಅಧ್ಯಕ್ಷರಾಗಿ ಬೆಳಕೂಡ, ಉಪಾಧ್ಯಕ್ಷರಾಗಿ ಕಳ್ಳಿಮನಿ ಅವಿರೋಧ ಆಯ್ಕೆ ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಮುಂದಿನ ಐದು ವರ್ಷಗಳ ಅವಧಿಗೆ ರವಿವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸೊಸಾಟಿಯ ಅಧ್ಯಕ್ಷರಾಗಿ ಸುಭಾಸ ಗಂಗಪ್ಪ ಬೆಳಕೂಡ ಮತ್ತು ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಮಹ್ಮದಸಾಹೇಬ ಕಳ್ಳಿಮನಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿ ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುರೇಶ ಬಿರಾದಾರಪಾಟೀಲ, ಸಹಾಯಕ ಚುನಾವಣಾಧಿಕಾರಿಯಾಗಿ ಸೊಸಾಯಿಟಿಯ …

    Read More »
  • 8 ಫೆಬ್ರವರಿ

    ಅರಳಿಮಟ್ಟಿಯಲ್ಲಿ ಬಸವೇಶ್ವರ ಕಾರ್ತಿಕೋತ್ಸವ

    ಅರಳಿಮಟ್ಟಿಯಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಫೆ.9 ರಿಂದ 11 ರವರಿಗೆ ಮೂರು ದಿನಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಫೆ.9 ರಂದು ಕಾರ್ತಿಕೋತ್ಸವ ನಿಮಿತ್ಯ ಅರಳಿಮಟ್ಟಿ ಹಾಘೂ ಆರತಿ ಕಡಕಭಾಂವಿ ಅವರಿಂದ ಭಜನಾ ಕಾರ್ಯಕ್ರಮ ಜರುಗುವವು. ಸೋಮವಾರ ಫೆ.10 ರಂದು ಮುಂಜಾನೆ 8ಕ್ಕೆ ಮಹಾಅಭಿಷೇಕ, ಸಾಯಂಕಾಲ ಕಾರ್ತಿಕೋತ್ಸವ, ರಾತ್ರಿ 10ಕ್ಕೆ ಲಕ್ಷ್ಮೇಶ್ವರ ಜೈ ಮಾತೃಭೂಮಿ ನಾಟ್ಯ …

    Read More »
  • 8 ಫೆಬ್ರವರಿ

    ದಿ.11 ರಂದು ಕಲ್ಲೋಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

    ದಿ.11 ರಂದು ಕಲ್ಲೋಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೂಡಲಗಿ: ತಾಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ, ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘಮತ್ತು ಬೆಳಗಾವಿ ಕೆ.ಎಲ್.ಇ. ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿ.11 ರಂದು ಬೆಳಗ್ಗೆ 9 ರಿಂದ 3 ಗಂಟೆಯವರೆಗೆ ಕಲ್ಲೋಳಿಯ ಶ್ರೀ ಬಸವೇಶ್ವರ …

    Read More »
  • 8 ಫೆಬ್ರವರಿ

    ದಿ.ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಫೇ ಸೌಲಭ್ಯ ಆರಂಭ

    ದಿ.ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಫೇ ಸೌಲಭ್ಯ ಆರಂಭ ಮೂಡಲಗಿ: ದಿ.ಮೂಡಲಗಿ ಸಹಕಾರಿ ಬ್ಯಾಂಕನ ಗ್ರಾಹಕರಿಗೆ ಶೀಘ್ರ ಹಣ ವರ್ಗಾವಣೆ ಹಾಗೂ ಜಮಾವಣೆ ಆಗಿ ವ್ಯವಹಾರವು ಸರಳಿಕರಣವಾಗುವುದಕ್ಕೆ ಫೋನ ಫೇ ( ಯುಪಿಐ) ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಬ್ಯಾಂಕನ ಅಧ್ಯಕ್ಷ ಮತ್ತು ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು. ಅವರು ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಸಹಕಾರಿ ಬ್ಯಾಂಕದಿಂದ ಯುಪಿಐ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಇಂದಿನ ಸ್ಪರ್ಧಾತ್ಮಕ …

    Read More »
  • 8 ಫೆಬ್ರವರಿ

    ಸ್ನಾನ ಮಾಡುವ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜೈಕಾರ ಹಾಕಿದ ಕಾರ್ಯಕರ್ತರು

    ಪ್ರಯಾಗರಾಜ್ (ಉತ್ತರ ಪ್ರದೇಶ)- ಗೋಕಾಕ ಸಾಹುಕಾರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಸಹೋದರರು ಏಕಕಾಲದಲಿಯೇ ಶಾಸಕರಾಗಿದ್ದರೆ, ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಸಂಸದರಾಗಿ ಚುನಾಯಿತರಾಗಿದ್ದಾರೆ. ಜಾರಕಿಹೊಳಿ ಹೆಸರು ಹೇಳಿದ್ರೆ ಸಾಕು. ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸುವಂತಹ ಕ್ರೇಜ್ ಇದೆ. ಅದು ಯಾವುದೇ ಸರ್ಕಾರ ಇರಲಿ. ಅಲ್ಲಿ ಗೋಕಾಕ ಸಾಹುಕಾರರು ಇಲ್ಲದ ಸಂಪುಟವೇ ಅಸ್ತಿತ್ವಕ್ಕೆ ಬರಲ್ಲ. ಅದು …

    Read More »
  • 8 ಫೆಬ್ರವರಿ

    ದೆಹಲಿಯಲ್ಲಿ ಆಡಳಿತ ನಡೆಸಲು ಅಲ್ಲಿನ ಮತದಾರರು ಆಶೀರ್ವಾದ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಹೆಣೆದ ತಂತ್ರಗಾರಿಕೆಗಳೇ ದೆಹಲಿಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ. ಜೊತೆಗೆ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳು ಈ ಐತಿಹಾಸಿಕ ಗೆಲುವಿಗೆ ಕಾರಣವಾಗಿದೆ. ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಾರ್ಟಿಯ ದುರಾಡಳಿತಕ್ಕೆ ಬೇಸತ್ತು ಅಲ್ಲಿನ ಮತದಾರರು ಆಡಳಿತಾರೂಢ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ೨೫ ವರ್ಷ ಬಳಿಕ ನಮ್ಮ ಪಕ್ಷವು ದೆಹಲಿಯಲ್ಲಿ ಆಡಳಿತ ನಡೆಸಲು ಅಲ್ಲಿನ …

    Read More »
  • 8 ಫೆಬ್ರವರಿ

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಗೆ ಆರ್ಶೀವದಿಸಿದ ಮತದಾರ

    ಮೂಡಲಗಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯನ್ನು ಬಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ತಿರಸ್ಕರಿಸಿದ್ದು, ಆ ಪಕ್ಷದ ನೇತಾರ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಮತ್ತು ಉಪಮುಖ್ಯಮಂತ್ರಿ ಮನಿಷ್ ಸೀಸೋಡಿಯಾ ಸೋಲುವ ಮೂಲಕ ಬಾರಿ ಹಿನ್ನೆಡೆ ಉಂಟಾಗಿದೆ. ಹೀಗಾಗಿ ಬಿಜೆಪಿಗೆ ಆರ್ಶೀವದಿಸಿದ ಮತದಾರ ಬಂಧುಗಳಿಗೆ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಶೇಷ ಶ್ರಮವಹಿಸಿದ ದೆಹಲಿ ಬಿಜೆಪಿ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು ನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ. ಶನಿವಾರ …

    Read More »