ಯಾದವಾಡ ಕೋವಿಡ್ ಆರೈಕೆ ಕೇಂದ್ರಕ್ಕೆ ಆಹಾರ ಸಾಮಗ್ರಿ ವಿತರಣೆ
ಮೂಡಲಗಿ: ತಾಲೂಕಿನ ಯಾದವಾಡ ಕೋವಿಡ್ ಆರೈಕೆ ಕೆಂದ್ರಕ್ಕೆ ಯಾದವಾಡ ಜಿ.ಪಂ ಸದಸ್ಯ ಗೊವಿಂದ ಕೊಪ್ಪದ ಮತ್ತು ಭಾರತ ಫೌಂಡೇಶ್ನದ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯಿಂದ ಆಹಾರ ಉಪಹಾರ ಮತ್ತು ಊಟದ ಸಾಮಗ್ರಿಗಳನ್ನು ಕೇಂದ್ರದ ಸಿಬ್ಬಂದಿಗೆ ಹಸ್ತಾಂತರಿಸಿದರು.
ಈ ಸಮಯದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಯಲ್ಲಪ್ಪಗೌಡ ನ್ಯಾಮಗೌಡ, ರಾಜುಗೌಡ ಪಾಟೀಲ, ಕುಬೇರ ದಾಸರ, ಬಸವರಾಜ ಭೂತಾಳಿ, ಶಿವನಗೌಡ ಪಾಟೀಲ್, ಮಲ್ಲಪ್ಪ ಕಂಕನೋಡಿ, ಕಲ್ಲಪ್ಪ ಗಾಣಿಗೇರ, ಹನಮಂತ ಚೆಕ್ಕೆನವರ, ದಾಲ್ಮೀಯಾ ಕಾರ್ಖಾನೆಯ ಕಾನೂನು ಸಲಹೆಗಾರ ರಮೇಶ ಮಳಲಿ, ಕುಲಗೂಡ ಪಿಎಸ್ಐ ಹನಮಂತ ನೆರಳೆ ಮತ್ತಿತರು ಇದ್ದರು.