Breaking News
Home / Uncategorized / ಹಸಿದವರಿಗೆ ಅನ್ನ ನೀಡುವ ದೇವತಾ ಮನುಷ್ಯ : ಬಂಡಿಗಣಿ ದಾನೇಶ್ವರ ಸ್ವಾಮೀಜಿ

ಹಸಿದವರಿಗೆ ಅನ್ನ ನೀಡುವ ದೇವತಾ ಮನುಷ್ಯ : ಬಂಡಿಗಣಿ ದಾನೇಶ್ವರ ಸ್ವಾಮೀಜಿ

Spread the love

  • ಹಳ್ಳೂರ : ಉತ್ತರ ಕರ್ನಾಟಕದಲ್ಲಿ ಅನ್ನದಾನೇಶ್ವರ ಎಂದು ಪ್ರಶಿದವಾಗಿರುವ ಶ್ರೀ ಬಸವ ಗೋಪಾಲ ನೀಲಮಾಣಿಕ್ಯ ಮಠ ಸುಕ್ಷೇತ್ರ ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಅವರಿಂದ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ಜನರನ್ನು ರಕ್ಷಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಇಂದು ಸ್ವಾಮೀಜಿ ತಮ್ಮ ಮಠದಿಂದ ಊಟದ ವ್ಯೆವಸ್ಥೆ ಮಾಡಿದ್ದರು.
    ಸ್ಥಳೀಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಊಟದ ವ್ಯೆವಸ್ಥೆ ಮಾಡಿದ ಬಸವ ಗೋಪಾಲ ಮಠದ ಭಕ್ತರು ಎಲ್ಲ ಅಧಿಕಾರಿಗಳಿಗೆ ಊಟ ಬಡಿಸುವು ಮೂಲಕ ಆ ಬಸವ ಗೋಪಾಲನ ಕೃಪೆಗೆ ಪಾತ್ರರಾದರು.

  • ಜನರ ಹಸಿವಿನಿಂದ ಬಳಲಬಾರದು ಎಂದು ಬೇರೆ ಬೇರೆ ರಾಜ್ಯದಲ್ಲಿ ಅನ್ನದಾಸೋಹ ಮಾಡಿ ಅನ್ನದಾನೇಶ್ವರ ಎಂದು ಅಂಕಿನಾಮ ಪಡೆದ ದಾನೇಶ್ವರ ಸ್ವಾಮೀಜಿಯವರಿಗೆ ಸಲಾಂ. ಇಡೀ ದೇಶದ ತುಂಬೆಲ್ಲ ಲಾಕ್ ಡೌನ ಇರುವಾಗ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಹಸಿವಿನ ಕೊರತೆ ಉಂಟಾಗಬಾರದೆAದು ಎಲ್ಲ ಕಡೆಗಳಲ್ಲಿ ಅಧಿಕಾರಿಗಳಿಗೆ ಊಟದ ವ್ಯೆವಸ್ಥೆ ಮಾಡುತ್ತಿರುವ ದಾನೇಶ್ವರ ಸ್ವಾಮೀಜಿ ಅವರಿಗೆ ಹಸಿದವರಿಗೆ ಅನ್ನ ನೀಡುವ ದೇವತಾ ಮನುಷ್ಯ ಎಂದರು ತಪ್ಪಾಗಲಾರದು.
  • ಇದೆ ಸಂದರ್ಭದಲ್ಲಿ ಮೂಡಲಗಿ ಪೋಲಿಸ್ ಠಾಣಾಧಿಕಾರಿ ಮಲ್ಲಿಕಾರ್ಜುನ ಸಿಂಧೂರ, ಪೋಲಿಸ್ ಠಾಣೆಯ ಸಿಂಬ್ಬದಿಗಳು, ಗ್ರಾಮದ ಪಂಚಾಯತ ಸಿಂಬ್ಬದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪತ್ರಿಕಾ ವರದಿಗಾರರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Spread the love

About inmudalgi

Check Also

11 ಕಾರ್ಯಕರ್ತೆಯರು, 34 ಸಹಾಯಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ- ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ ಅರಭಾವಿ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ