ನೂಲಿ ಚಂದಯ್ಯನವರ ನಾಮ ಫಲಕವನ್ನು ಅನಾವರಣ
ಮೂಡಲಗಿ: 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲಿನವರಾದ ಕೊರಮ ಸಮಾಜದ ಧರ್ಮ ಗುರುಗಳಾದ ಶಿವ ಶರಣ ಕಾಯಕ ಯೋಗಿ ಶ್ರೀ ನೂಲಿ ಚಂದಯ್ಯನವರ 914 ಜಯಂತ್ಯುತ್ಸವದ ನಿಮಿತ್ಯ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ರವಿವಾರ ನೂಲಿ ಚಂದಯ್ಯನವರ ನಾಮ ಫಲಕವನ್ನು ಅನಾವರಣಗೊಳಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊರಮ ಸಮಾಜದ ಮುಖಂಡ ಮಡ್ಡೆಪ್ಪ ಭಜಂತ್ರಿ ಮಾತನಾಡಿ, ು ಶಿವಶರಣ ನೂಲಿ ಚಂದಯ್ಯನವರು 12 ನೇ ಶತಮಾನದಲ್ಲಿ ಶ್ರೇಷ್ಠ ವಚನಕಾರರಾಗಿ. ದಾಸೋಹಿಗಳಾಗಿ ತನ್ನ ಕಾಯಕ ಮಾಡುತ್ತ ಬಸವಣ್ಣವರ ನಿಷ್ಠರಲ್ಲಿ ಒಬ್ಬರಾಗಿದ್ದರು. ಅವರ ಆದರ್ಶಗಳನ್ನು ಇಂದಿನ ಯುಗ ಜನಾಂಗವು ಅರಿತುಕೊಳ್ಳುವುದು ಅತ್ಯವಶಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊರಮ ಸಮಾಜದ ಮುಖಂಡರಾದ ಕೆಂಪಣ್ಣ ಭಜಂತ್ರಿ. ರವಿ ಭಜಂತ್ರಿ. ಅಜ್ಜಪ್ಪ ಭಜಂತ್ರಿ. ದಶರಥ ಭಜಂತ್ರಿ. ವಿಠ್ಠಲ ಭಜಂತ್ರಿ. ಮಾರುತಿ ಭಜಂತ್ರಿ. ಶ್ರೀಕಾಂತ ಭಜಂತ್ರಿ. ತಮ್ಮಣ್ಣ ಭಜಂತ್ರಿ. ಭೀಮಶಿ ಭಜಂತ್ರಿ. ಶಂಕರ ಭಜಂತ್ರಿ.ಸೇರಿದಂತೆ ಅನೇಕರು ಅನೇಕರು ಉಪಸ್ಥಿತರಿದ್ದರು.