Breaking News
Home / Recent Posts / ಮಹಾನಗರದ ಜನತೆಯನ್ನು ಅಭಿನಂದಿಸಿದ – ಸಂಸದ ಈರಣ್ಣ ಕಡಾಡಿ

ಮಹಾನಗರದ ಜನತೆಯನ್ನು ಅಭಿನಂದಿಸಿದ – ಸಂಸದ ಈರಣ್ಣ ಕಡಾಡಿ

Spread the love

 

ಮಹಾನಗರದ ಜನತೆಯನ್ನು ಅಭಿನಂದಿಸಿದ – ಸಂಸದ ಈರಣ್ಣ ಕಡಾಡಿ

ಮೂಡಲಗಿ: ಮೊದಲ ಬಾರಿಗೆ ಬಿಜೆಪಿ ತನ್ನ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದಾಗ ಬೆಳಗಾವಿ ಮಹಾನಗರದ ಜನತೆ ಅಭೂತಪೂರ್ವವಾದ ಬೆಂಬಲವನ್ನು ನೀಡಿದಕ್ಕಾಗಿ ಮಹಾನಗರದ ಜನತೆಗೆÉ ಹೃದಯ ಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಸ.6 ರಂದು ಪತ್ರಿಕಾ ಹೇಳಿಕೆ ನೀಡಿದ ಈರಣ್ಣ ಕಡಾಡಿ ಅವರು ಕಳೆದ ಕೆಲ ದಶಕಗಳಿಂದ ಬರಿ ಜಾತಿ, ಮತ, ಭಾμÉ ಆಧಾರದ ಮೇಲೆ ಚುನಾವಣೆ ಮಾಡುತ್ತಾ ಜನರ ದೈನಿಕ ಜೀವನಕ್ಕೆ ಬಹಳಷ್ಟು ತೊಂದರೆಗಳಾಗಿದ್ದ, ಅದಕ್ಕೆ ಮತದಾರರು ರೋಷಿ ಹೊಗಿದ್ದರು. ಅಭಿವೃದ್ಧಿ ಪರವಾದಂತಹ ಬಿಜೆಪಿಯ ವಿಚಾರಗಳಿಗೆ ಇವತ್ತು ಮತದಾರರು ಬಲ ತುಂಬಿದ್ದಾರೆ.
ಗೆದ್ದಿರುವಂತಹ ಮಹಾನಗರ ಪಾಲಿಕೆ ಸದಸ್ಯರು ಬಹಳ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಇಲ್ಲಿ ತನಕ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಕೂಡಾ ಮಹಾನಗರ ಪಾಲಿಕೆ ನಮ್ಮ ಕೈಯಲ್ಲಿ ಇಲ್ಲದ ಕಾರಣದಿಂದ ಎಲ್ಲೋ ಕೆಲವು ಕಡೆ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು ಎನ್ನುವ ಕೊರಗು ಬಹಳಷ್ಟು ಜನರಿಗೆ ಇದೆ ಅದನ್ನು ನಿವಾರಣೆ ಮಾಡುವ ದೃಷ್ಠಿಯಲ್ಲಿ ಹೆಜ್ಜೆ ಇಡಬೇಕು ಎಂದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ