Breaking News
Home / Recent Posts / ಬೆಳದಿಂಗಳ ‘ಸಾಹಿತ್ಯ ಚಿಂತನ-ಮಂಥನ’ ಕಾರ್ಯಕ್ರಮ

ಬೆಳದಿಂಗಳ ‘ಸಾಹಿತ್ಯ ಚಿಂತನ-ಮಂಥನ’ ಕಾರ್ಯಕ್ರಮ

Spread the love

 

 ಬೆಳದಿಂಗಳ ‘ಸಾಹಿತ್ಯ ಚಿಂತನ-ಮಂಥನ’ ಉದ್ಘಾಟನೆ

ಮೂಡಲಗಿ: ಇಲ್ಲಿಯ ಜ್ಞಾನದೀಪ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಆಯೋಜಿಸಲಿರುವ ‘ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ’ ಕಾರ್ಯಕ್ರಮದ ಉದ್ಘಾಟನೆಯು ಡಿ. 19ರಂದು ಸಂಜೆ 5ಕ್ಕೆ ಹರ್ಷ ದಂತ ಚಿಕಿತ್ಸಾ ಆಸ್ಪತ್ರೆಯ ಸಂಸ್ಕøತಿ ಭವನದಲ್ಲಿ ಜರುಗಲಿದೆ.
ಮೂಡಲಗಿಯ ಶಿವಬೋಧರಂಗ ಮಠದ ಶ್ರೀಧರ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಗೋಕಾಕದ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ, ಚಿಂತಕ ಪ್ರೊ. ಚಂದ್ರಶೇಖರ ಅಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಅಧ್ಯಕ್ಷತೆವಹಿಸುವರು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅದ್ಯಕ್ಷ ಮೋಹನ ಪಾಟೀಲ ಹಾಗೂ ಬೆಳಗಾವಿಯ ವಿಭಾಗೀಯ ಕಾರ್ಮಿಕ ಇಲಾಖೆ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಭಾಗವಹಿಸುವರು. ಸೋಮಶೇಖರ ಕಂಠೀಕಾರಮಠ ಹಾಗೂ ಬಸವರಾಜ ಕರಕಂಬಿ ಅವರಿಂದ ಸಂಗೀತ ಇರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಗೌರವ ಕಾರ್ಯದರ್ಶಿ ಎ.ಎಚ್. ಒಂಟಗೋಡಿ ತಿಳಿಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ