Breaking News
Home / ಬೆಳಗಾವಿ / ಘಟಪ್ರಭಾ ರೈಲ್ವೆ ನಿಲ್ದಾಣ ಸಲಹಾ ಸಮಿತಿಗೆ ನೇಮಕ

ಘಟಪ್ರಭಾ ರೈಲ್ವೆ ನಿಲ್ದಾಣ ಸಲಹಾ ಸಮಿತಿಗೆ ನೇಮಕ

Spread the love

ಘಟಪ್ರಭಾ ರೈಲ್ವೆ ನಿಲ್ದಾಣ ಸಲಹಾ ಸಮಿತಿಗೆ ನೇಮಕ

ಮೂಡಲಗಿ: ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಘಟಪ್ರಭಾ ರೈಲ್ವೆ ಸ್ಟೇಶನ್‍ದ ಸಲಹಾ ಸಮಿತಿಗೆ ಅರಭಾವಿ ಮತಕ್ಷೇತ್ರದ ಐವರನ್ನು ಬೆಳಗಾವಿಯ ಸಂಸದಜಗದೀಶ ಶೆಟ್ಟರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶಿಫಾಸ್ಸು ಮೇರಿಗೆ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಿ. ಪರಂದಮಾನಆದೇಶ ಹೊರಡಿಸಿದ್ದಾರೆ.
ಅರಭಾವಿ ಬೆಜೆಪಿ ಮಂಡಲದ ಕಾರ್ಯಕರ್ತರಾದ

ಕೇದಾರಿ ಭಸ್ಮೆ(ಮೂಡಲಗಿ),

ಮುತ್ತೆಪ್ಪ ಮನ್ನಾಪೂರ(ತಪ್ಪಸಿ),

ಭೀಮಶಿ ಮಾಳೇದವರ(ಸಂಗನಕೆರಿ),

ಪ್ರಮೋದ ನುಗ್ಗಾನಟ್ಟಿ( ಕಲ್ಲೋಳಿ),

ನಾಗೇಶ ಕುದರಿ(ತಳಕಟ್ನಾಳ)

ಇವರು ಇದೇ ಜ.1ರಿಂದ ಎರಡು ವರ್ಷಗಳ ಅವಧಿಗೆ ನೇಮಕವಾಗಿರುವರು.
ಈ ಕುರಿತು ಬೆಳಗಾವಿಯ ಸಂಸದಜಗದೀಶ ಶೆಟ್ಟರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರುಅವರನ್ನು ಶಿಫಾಸ್ಸು ಮೇರಿಗೆ ಮಾಡಿರುವರು.


Spread the love

About inmudalgi

Check Also

ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ

Spread the love   ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ ಕುಲಗೋಡ: ಮನೆ ಕಳ್ಳತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ