ಮೂಡಲಗಿ : ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ, ಇಂದಿನ ಆಧುನಿಕ ಯುಗದಲ್ಲಿ ಅನೇಕರು ಹಲವು ಒತ್ತಡಗಳ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದು, ವ್ಯಾಯಾಮದಿಂದ ಮಾತ್ರ ಒತ್ತಡದಿಂದ ಹೊರ ಬರಲು ಸಾಧ್ಯ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಗುರುವಾರದಂದು ಪಟ್ಟಣದ ಗಂಗಾನಗರದ ಅಂಬೇಡ್ಕರ್ ಭವನದಲ್ಲಿ, ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವ್ಯಾಯಾಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದವರು, ನಾನು ಜಿಲ್ಲಾ ಪಂಚಾಯತ ಅಧ್ಯಕ್ಷನಾಗುವಕ್ಕಿಂತ ಮೊದಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ವಿನಂತಿಸಿಕೊಂಡು ಅಂಬೇಡ್ಕರ್ ಭವನವನ್ನು ಮಂಜೂರು ಮಾಡಿಸಿದ್ದೆ ಅದೇ ಭವನದಲ್ಲಿ ರಾಜ್ಯಸಭೆ ಸಂಸದನಾಗಿ ವ್ಯಾಯಾಮ ಕೇಂದ್ರವನ್ನು ಮಂಜೂರು ಮಾಡಿ ಉದ್ಘಾಟಿಸುವ ಸೌಭಾಗ್ಯ ನನ್ನದಾಗಿದೆ ಎಂದರು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಾಕಷ್ಟು ಸಮುದಾಯ ಭವನಗಳು, ಮಕ್ಕಳಿಗಾಗಿ ಸ್ಮಾರ್ಟ್ ಕ್ಲಾಸ್ ಗಳು, ಬಸ್ ತಂಗುಧಾನ, ಕ್ರೀಡಾಪಟುಗಳಿಗೆ ಗರಡಿ ಮನೆಗಳು, ಗ್ರಂಥಾಲಯಗಳು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಬೇಜಾರಾದ ಸಂಗತಿ ಒಂದೇ ಅದು ಮೂಡಲಗಿಯ ಸಾರ್ವಜನಿಕರು ಸಂಸದರ ಯೋಜನೆಗಳನ್ನ ಸದುಪಯೋಗ ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂಡಲಗಿ ತಾಲೂಕಾ ಕೇಂದ್ರವಾಗಿದ್ದು ಸಾರ್ವಜನಿಕರ ಕೆಲಸಗಳಿಗೆ ಸುಮಾರು 1 ಕೋಟಿ ಅನುದಾನ ನೀಡಲು ನಾನು ಸಿದ್ಧನಿದ್ದೇನೆ ಸಾರ್ವಜನಿಕರು ಅದನ್ನ ಸದುಪಯೋಗ ಮಾಡಿಕೊಳ್ಳಿ ಎಂದು ಕರೆ ನೀಡಿದ ಅವರು, ಸಾರ್ವಜನಿಕರು ಮತ ನೀಡಿ ಆಯ್ಕೆ ಮಾಡಿದ ಜನಪ್ರತಿನಿಧಿಗಳಿಂದ ಕೆಲಸಗಳನ್ನು ಪಡೆದುಕೊಳ್ಳುವಂತಾ ಕಾರ್ಯವಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿಸರ್ಗ ಫೌಂಡೇಶನ್ ವತಿಯಿಂದ ಕಬ್ಬಡ್ಡಿ ಪಂದ್ಯಾವಳಿಯ ಮ್ಯಾಟ್ ಹಾಗೂ ಗ್ಯಾಲರಿ ನೀಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಮನವಿ ಸಲ್ಲಿಸಿದರು.ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಮಾದರ, ಶಿವಬಸು ಹಂದಿಗುಂದ,ಮಲ್ಲಪ್ಪ ಮದಗುಣಕಿ, ಈಶ್ವರ ಮುರಗೋಡ, ಮೂಡಲಗಿ ಅರಣ್ಯ ಇಲಾಖೆಯ ವೃತ್ತ ನಿರೀಕ್ಷಕರಾದ ಮಹಾಂತೇಶ ಹಿಪ್ಪರಗಿ, ನಿಸರ್ಗ ಫೌಂಡೇಶನ್ ಅಧ್ಯಕ್ಷ ಈರಪ್ಪ ಢವಳೇಶ್ವರ, ಗುರುನಾಥ ಗಂಗಣ್ಣವರ, ಸಂಜು ಕಮತೆ, ಪ್ರಭಾಕರ ಮಂಟೂರ, ಬಸವರಾಜ ಗಾಡವಿ,ಲಕ್ಷ್ಮಣ ಪೂಜೇರಿ, ರಾಜು ಹಿರೇಹೊಳಿ, ಮಂಜು ಸರ್ವಿ, ಯಲ್ಲಪ್ಪ ಭಜಂತ್ರಿ, ವಿಶ್ವನಾಥ ಯಕ್ಕುಂಡಿ, ನಾಗೇಶ ಬಾಲಪ್ಪಗೋಳ, ರಾಜು ಢವಳೇಶ್ವರ ಸೇರಿದಂತೆ ಹಲವಾರು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.