Breaking News
Home / ಬೆಳಗಾವಿ / *ಮಾನವನ ಮನುಕುಲದ ಉಳುವಿಗಾಗಿ ಗಿಡ ಮರಗಳನ್ನು ಬೆಳಿಸಿ : ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ*

*ಮಾನವನ ಮನುಕುಲದ ಉಳುವಿಗಾಗಿ ಗಿಡ ಮರಗಳನ್ನು ಬೆಳಿಸಿ : ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ*

Spread the love

ಮೂಡಲಗಿ : ಪ್ರಕೃತಿಯನ್ನು ಉಳಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ, ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಅಧ್ಯಕ್ಷರು ಹಾಗೂ ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು.

ಅವರು ಸಮೀಪದ ಖಾನಟ್ಟಿಯ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡವನ್ನು ನೆಟ್ಟು ನೀರು ಉಣಿಸಿ ಮಾನವನ ಮನುಕುಲದ ಉಳುವಿಗಾಗಿ ಸಸಿಗಳನ್ನು ನೆಟ್ಟು ಅವುಗನ್ನು ನಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಸುಂದರ ಪರಿಸರ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಆರ್ ಎಸ್ ಹುನ್ನೂರ ಮಾತನಾಡಿ ಮನೆಗೊಂದು ಮರ ಉರಿಗೊಂದು ವನ ಇನ್ನುವಂತೆ ಪ್ರತಿಯೊಬ್ಬರೂ ಗಿಡಗನ್ನು ಬೆಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲೆಯ ಗುರುಗಳಾದ ಆರ್ ಬಿ ವಾಲಿಕಾರ, ಎ ಎಸ್ ಪಾಟೀಲ್, ಪಿ ಬಿ ಕುಲಕರ್ಣಿ, ಎನ್ ಡಿ ನಿಡೋಣಿ, ಆರ್ ಬಿ ಹೋನವಾಡ, ಎಲ್ ಪಿ ಪಾಟೀಲ್, ಎ ಕೆ ಸುಣದೊಳಿ, ಆರ್ ಎಸ್ ಮಡಿವಾಳರ, ಆರ್ ಎಸ್ ಕಮತೆ, ಎಸ್ ಎಸ್ ತೇಲಿ, ಶ್ರೀಮತಿ ಸಂಗೀತಾ ಸಿಂತ್ರೆ, ಚಂದ್ರಿಕಾ ಪಾಟೀಲ್, ಮಹಾನಂದಾ ಹೊಸವಾಲಿಕಾರ, ಮಾಲಾ ಪಾರ್ಸಿ, ಪ್ರಿಯಾಂಕಾ ಕರಗಣ್ಣಿ ಮುಂತಾದವರು ಉಪಸ್ಥಿತರಿದ್ದರು.


Spread the love

About inmudalgi

Check Also

ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ

Spread the love ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕøತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ