ಮೂಡಲಗಿ: ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಸಮೀಪದ ಪಟಗುಂದಿ ಗ್ರಾಮದ ಸುರೇಶ ಕಲ್ಲಪ್ಪ ನಾಯ್ಕ ಅವರನ್ನು ಆಯ್ಕೆಗೋಳಿಸಿ ರಾಜ್ಯಾಧ್ಯಕ್ಷ ಗುಡ್ಡೆಗೌಡರು ನೇಮಕಗೋಳಿಸಿ ಆದೇಶ ಹೊರಡಿಸಿದ್ದಾರೆ.
ಗುರುತರವಾಗಿ ಜವಾಬ್ದಾರಿ ವಹಿಸಿಕೊಂಡು ಸಂಘಟನೆಯ ಎಲ್ಲ ಮುಖಂಡರನ್ನು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕು. ರೈತರ ಏಳ್ಗೆಗಾಗಿ ನಿಸ್ಪಕ್ಷಪಾಥವಾಗಿ ಶ್ರಮವಹಿಸಬೇಕು. ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ನಂಬಿಕೆಯ ರೀತಿಯಲ್ಲಿ ಕಾರ್ಯನಿರ್ವಹಿಸ ಬೇಕು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News