Breaking News
Home / Recent Posts / ರಾಜ್ಯಸಭೆಯಲ್ಲಿ ನಡೆದ ಸಂಸದೀಯ ಅನುಭವಗಳನ್ನು ವಿಶ್ವ ಮಾನ್ಯ ನಾಯಕ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ -ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ರಾಜ್ಯಸಭೆಯಲ್ಲಿ ನಡೆದ ಸಂಸದೀಯ ಅನುಭವಗಳನ್ನು ವಿಶ್ವ ಮಾನ್ಯ ನಾಯಕ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ -ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

Spread the love

ಮೂಡಲಗಿ:ದೇಶದ ಪ್ರತಿಷ್ಠಿತ ರಾಜ್ಯಸಭೆಯಲ್ಲಿ ನಡೆದ ಸಂಸದೀಯ ಅನುಭವಗಳನ್ನು ವಿಶ್ವ ಮಾನ್ಯ ನಾಯಕ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡದ್ದು ನೂತನ ರಾಜ್ಯಸಭಾ ಸದಸ್ಯರಾದ ನಮ್ಮೆಲ್ಲರಿಗೂ ಅವಿಸ್ಮರಣೀಯ ಘಳಿಗೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ದೆಹಲಿಯ ಪಾರ್ಲಿಮೆಂಟ್ ಹೌಸ್ ಪ್ರಧಾನಿ ಕಛೇರಿಯಲ್ಲಿ ಶುಕ್ರವಾರ ಫೆ.12 ರಂದು ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಸಂಸದರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯದ 25 ಜಿಲ್ಲೆಗಳಿಗೆ ಪ್ರವಾಸ ಮಾಡಿ ಕೇಂದ್ರ ಸರ್ಕಾರದ ಜನಪರ, ರೈತಪರ, ನೂತನ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಲಾಗಿದನ್ನು ಪ್ರಧಾನಿ ಮೋದಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬೇರೆ ಬೇರೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬಿಜೆಪಿ ಪಕ್ಷ ನಿಮಗೆ ಈ ಅವಕಾಶ ನೀಡಿದೆ. ರಾಜ್ಯಸಭೆ ಅಧಿವೇಶನದ ಕಲಾಪಗಳಲ್ಲಿ ಪ್ರತಿದಿನ ಸರಿಯಾದ ಸಮಯಕ್ಕೆ ಹಾಜರಾಗಿ ತಮ್ಮ ಪೂರ್ಣ ಸಮಯವನ್ನು ಅಧಿವೇಶನದಲ್ಲಿ ಕಳೆಯುವ ಮೂಲಕ ನಿಮ್ಮ ಸಂಸದೀಯ ವ್ಯಕ್ತಿತ್ವ ಉನ್ನತ ಸ್ಥಾನಕ್ಕೆರುವ ಅವಕಾಶ ನಿಮಗೆ ಸಿಕ್ಕಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದು ಪ್ರಧಾನಿ ಮೋದಿ ಅವರು ಮಾರ್ಗದರ್ಶನ ಮಾಡಿದರು ಎಂದು ತಿಳಿಸಿದ್ದಾರೆ.
ರಾಜ್ಯಸಭೆಯ ಕಲಾಪದ ಹಲವಾರು ಅನುಭವಗಳನ್ನು ಮೋದಿ ಅವರಿಂದ ಕೇಳಿ ಮನವರಿಕೆ ಮಾಡಿಕೊಂಡೆವು. ದೇಶದ ಪ್ರದಾನಿಯಾದರೂ ಕೂಡ ಮೋದಿ ಅವರು ನಮ್ಮಂತಹ ಸಾಮಾನ್ಯ ಕಾರ್ಯಕರ್ತರ ಬೆಳವಣಿಗೆಗೆ ಅವಶ್ಯಕವಾದ ಸಣ್ಣ ಸಣ್ಣ ಸಂಗತಿಗಳನ್ನು ಗಮನಕ್ಕೆ ತರುವ ಮೂಲಕ ಅವರ ಮೇರು ವ್ಯಕ್ತಿತ್ವವನ್ನು ಹತ್ತಿರದಿಂದ ಗಮನಿಸಿದ ಅವಕಾಶ ನಮಗೆಲ್ಲಾ ಸಿಕ್ಕಿದ್ದು ಸುದೈವ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಗಳಾದ ಅರುಣ ಸಿಂಗ್, ಬಿಹಾರದ ಸುಶೀಲ ಮೋದಿ ಸೇರಿದಂತೆ ಉತ್ತರಪ್ರದೇಶ, ಉತ್ತರಖಂಡ, ಕರ್ನಾಟಕದ ರಾಜ್ಯಸಭಾ ಸದಸ್ಯರು ಇತರರು ಇದ್ದರು.


Spread the love

About inmudalgi

Check Also

ಮೂಡಲಗಿಯಲ್ಲಿ ಡಯಾಲಿಸಿಸ್ ಕೇರ್ ಕೇಂದ್ರವನ್ನು   ಉದ್ಘಾಟಿಸಿದ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅನುಕೂಲವಾಗಲು ಡಯಾಲಿಸಿಸ್ ಕೇಂದ್ರದ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ