Breaking News
Home / Recent Posts / ಕೊರೋನಾ ಸೋಂಕಿತ ಪತ್ರಕರ್ತರಿಗೆ ಹಾಸಿಗೆ, ಆಮ್ಲಜನಕ ಕಾಯ್ದಿರಿಸಿ ತುರ್ತು ಚಿಕಿತ್ಸೆ ನೀಡಿ

ಕೊರೋನಾ ಸೋಂಕಿತ ಪತ್ರಕರ್ತರಿಗೆ ಹಾಸಿಗೆ, ಆಮ್ಲಜನಕ ಕಾಯ್ದಿರಿಸಿ ತುರ್ತು ಚಿಕಿತ್ಸೆ ನೀಡಿ

Spread the love

ಕೊರೋನಾ ಸೋಂಕಿತ ಪತ್ರಕರ್ತರಿಗೆ ಹಾಸಿಗೆ, ಆಮ್ಲಜನಕ ಕಾಯ್ದಿರಿಸಿ ತುರ್ತು ಚಿಕಿತ್ಸೆ ನೀಡಿ

ಮೂಡಲಗಿ :ಕೊರೋನಾ ಎರಡನೆಯ ಅಲೆಯು ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಕೊವಿಡ್ ಸೋಂಕಿತರಿಗೆ ಆಸ್ಪತ್ರಗಳಲ್ಲಿ ಸರಿಯಾದ ಸಮಯಕ್ಕೆ ಹಾಸಿಗೆ, ಆಮ್ಲಜನಕ ದೊರೆಯದೆ ಕೊರೋನಾಗೆ ಬಲಿಯಾಗುತ್ತಿದ್ದಾರೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ ಕಳವಳ ವ್ಯಕ್ತಪಡಿಸಿದರು.
ಮಂಗಳವಾರದಂದು ಪತ್ರಕರ್ತರಿಗೆ ಕೋವಿಡ ಲಸಿಕೆ ಹಾಗೂ ಕೊರೊನಾ ಸೊಂಕಿತ ಪತ್ರಕರ್ತರಿಗೆ ಹಾಸಿಗೆ ಮತ್ತು ಆಮ್ಲಜನಕ ಕಾಯ್ದಿರಿಸಿ, ತುರ್ತು ಚಿಕಿತ್ಸೆ ನೀಡುವಂತೆ ತಹಶೀಲದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕರ್ತವ್ಯನಿರ್ವಹಿಸುವ ಸಮಯದಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ ಅಷ್ಟೆ ಅಲ್ಲದೆ ಸೋಂಕಿಗೆ ತುತ್ತಾಗಿ ಹಾಸಿಗೆ ಹಾಗೂ ಆಮ್ಲಜನಕ ಸಿಗದೆ ಪರದಾಡುವಂತಾಗಬಾರದು ಆದ್ದರಿಂದ ತಾಲೂಕಾಡಳಿತ ಹೆಚ್ಚಿನ ಕಾಳಜಿ ವಹಿಸಿ ಪತ್ರಕರ್ತರಿಗೆ ಹಾಗೂ ಅವರ ಅವರ ಕಟುಂಬಕ್ಕೂ ಕೂಡ ಕೋವಿಡ ಲಸಿಕೆ ಹಾಗೂ ಹಾಸಿಗೆ ಮತ್ತು ಆಮ್ಜನಕ ಸುಲಭವಾಗಿ ನಿಗದಿತ ಸಮಯದಲ್ಲಿ ದೊರೆಯುವಂತೆ ಕಾಯ್ದಿರಿಸಿ ತುರ್ತು ಚಿಕಿತ್ಸೆ ದೊರೆಕಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಬೇಕು. ಸರಕಾರ ಈಗಾಗಲೆ ಪತ್ರಕರ್ತರನ್ನು ಪ್ರಂಟ್‍ಲೈನ್ ವಾರಿಯರ್ಸ ಎಂದು ಘೋಷಣೆ ಮಾಡಿದ್ದು ಒಳ್ಳೆಯ ಸಂಗತಿಯಾಗಿದೆ ಎಂದರು.
ತಾಲೂಕಾ ಶಿರಸ್ತೆದಾರ ಪರುಶುರಾಮ ನಾಯ್ಕ ಮನವಿ ಸ್ವೀಕರಿಸಿ ಶೀಘ್ರ ತಮ್ಮ ಬೇಡಿಕೆ ಈಡೆರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸುಭಾಸ ಗೊಡ್ಯಾಗೋಳ, ಭಗವಂತ ಉಪ್ಪಾರ, ಮಲ್ಲು ಬೋಳನ್ನವರ, ಅಲ್ತಾಫ್ ಹವಾಲ್ದಾರ, ಮಹಾದೇವ ನಡುವಿನಕೇರಿ, ರಾಜು ಮಗದುಮ್, ಹನಮಂತ ಕಂಕಣವಾಡಿ ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ