Breaking News
Home / ಬೆಳಗಾವಿ / ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಸಿದ್ಧೇಶ್ವರ ಕುರಬೇಟ, ಉಪಾಧ್ಯಕ್ಷರಾಗಿ ವಿಜಯ ಮಠದ ಆಯ್ಕೆ

ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಸಿದ್ಧೇಶ್ವರ ಕುರಬೇಟ, ಉಪಾಧ್ಯಕ್ಷರಾಗಿ ವಿಜಯ ಮಠದ ಆಯ್ಕೆ

Spread the love

ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಸಿದ್ಧೇಶ್ವರ ಕುರಬೇಟ, ಉಪಾಧ್ಯಕ್ಷರಾಗಿ ವಿಜಯ ಮಠದ ಆಯ್ಕೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಸೆ.1ರಂದು ನಡೆದ ಸಂಘದ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ನೇತೃತ್ವದ ಗುಂಪಿನ ಸದಸ್ಯ ಸಿದ್ಧೇಶ್ವರ ಕುರಬೇಟ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ವಿಜಯ ಮಠದ ಆಯ್ಕೆಯಾಗಿದ್ದಾರೆ. ಒಟ್ಟು 12 ಸದಸ್ಯರ ಬಲ ಹೊಂದಿರುವ ಸಂಘ, ಅಧ್ಯಕ್ಷ ಸ್ಥಾನಕ್ಕೆ ನೇರಾನೇರ ಚುನಾವಣೆ ನಡೆದು ಸಿದ್ದಪ್ಪ ಕುರಬೇಟ 6 ಮತ ಪಡೆದರೆ ಪ್ರತಿಸ್ಪರ್ಧಿಯಾಗಿ ಸತ್ತೆಪ್ಪ ಹೊರಟ್ಟಿ 6 ಮತ ಪಡೆದುಕೊಂಡು ಇಬ್ಬರೂ ಅಭ್ಯರ್ಥಿಗಳು ಸಮಬಲ ಮತ ಪಡೆದಿದ್ದರಿಂದ ಚೀಟಿ ಎತ್ತುವ ಮೂಲಕ ಸಿದ್ಧೇಶ್ವರ ಕುರಬೇಟ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ಸ್ಪರ್ಧೆ ಮಾಡದ ಕಾರಣ ವಿಜಯ ಮಠದ ಉಪಾಧ್ಯಕ್ಷರಾಗಿ ಅವಿರೂಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ನೂತನ ಅಧ್ಯಕ್ಷ ಸಿದ್ಧೇಶ್ವರ ಕುರಬೇಟ, ಉಪಾಧ್ಯಕ್ಷ ವಿಜಯ ಮಠದ ಅವರನ್ನು ಸತ್ಕರಿಸಲಾಯಿತು. ಚುನಾವಣಾಧಿಕಾರಿಯಾಗಿ ಎಸ್.ಬಿ.ಬಿರಾದಾರ ಪಾಟೀಲ ಕಾರ್ಯನಿರ್ವಹಿಸಿದರು.
ಅರ್ಜುನ ದೇಯಣ್ಣವರ, ಹನುಮಂತ ಸವತಿಕಾಯಿ, ಈಶ್ವರ ಮುಧೋಳ, ಈರಣ್ಣ ಬಳಿಗಾರ, ಅಶೋಕ ಕೋಣಿ, ಲಖನ ಚಂದರಗಿ, ಕೆಂಪಣ್ಣ ಪೇದನ್ನವರ, ಅಪ್ಪಯ್ಯ ಆಶೆಪ್ಪಗೋಳ, ದುಂಡಪ್ಪ ಕಂಬಿ, ಶಂಕರ ಕೋಣಿ, ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಬಳಿಗಾರ, ಮಹಾದೇವ ಕಂಬಿ, ಅರ್ಜುನ ಬ್ಯಾಗಿ, ಯಲ್ಲಾಲಿಂಗ ದೇಯಣ್ಣವರ, ಮಲ್ಲಿಕಾರ್ಜುನ ಪೇದನ್ನವರ, ಮಹಾದೇವ ಮಾಳೇದ, ಸುರೇಶ ತಳವಾರ, ಗಂಗವ್ವ ತೋಟಗಿ, ಬಸವ್ವ ಕೋಣಿ, ಗ್ರಾಪಂ ಸದಸ್ಯರು, ಸಂಘದ ಮುಖ್ಯ ಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ, ಸಿಬ್ಬಂದಿ, ರಾಜಕೀಯ ಮುಖಂಡರು, ಗಣ್ಯರು, ಯುವಕರು, ಇತರರು ಇದ್ದರು.


Spread the love

About inmudalgi

Check Also

ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶಿಷ್ಟವಾಗಿ ರಕ್ಷಾ ಬಂಧನ ಹಬ್ಬ ಆಚರಣೆ.!

Spread the loveಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶಿಷ್ಟವಾಗಿ ರಕ್ಷಾ ಬಂಧನ ಹಬ್ಬ ಆಚರಣೆ.! ಸಹೋದರ-ಸಹೋದರಿಯರಭಾತೃತ್ವದ ಬಿಂಬಿಸುವ ಮಹತ್ವಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ