Breaking News

Daily Archives: ಏಪ್ರಿಲ್ 27, 2021

ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ – ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ ಮಾದರಿ …

Read More »

ಸರಳವಾಗಿ ಆಚರಿಸಿದ ಹನುಮ ಜಯಂತಿ, ವಿಶೇಷ ಅಲಂಕಾರ

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಹನಮಂತ ದೇವರ ದೇವದಸ್ಥಾನದಲ್ಲಿ ಮಂಗಳವಾರ ಸರಳವಾಗಿ ಆಚರಿಸಿದ ಹನುಮ ಜಯಂತಿಯ ಅಂಗವಾಗಿ ವಿಶೇಷವಾಗಿ ಅಲಂಕರಿಸಿದ್ದರು. ಕಲ್ಲೋಳಿ: ಸರಳವಾಗಿ ಹನುಮ ಜಯಂತಿ ಆಚರಣೆ ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಸಿದ್ಧ ಹನಮಂತ ದೇವರ ದೇವಸ್ಥಾನದಲ್ಲಿ ಮಂಗಳವಾರ ಕೊವಿಡ್ ಎರಡನೇ ಅಲೆಯ ಅತಂಕದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಹನುಮ ಜಯಂತಿಯನ್ನು ಆಚರಿಸಿದರು. ಬೆಳಿಗ್ಗೆ ಹನಮಂತ ದೇವರ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಿ, ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ಮಾಡಿದರು. ಸಂಪ್ರದಾಯದಂತೆ …

Read More »

ಎಸ್.ಬಿ.ಸಿದ್ನಾಳ ನಿಧನ : ಲಖನ ಸವಸುದ್ದಿ ಸಂತಾಪ ಸೂಚನೆ

ಎಸ್.ಬಿ.ಸಿದ್ನಾಳ ನಿಧನ : ಲಖನ ಸವಸುದ್ದಿ ಸಂತಾಪ ಸೂಚನೆ ಮೂಡಲಗಿ : ಸತತ ನಾಲ್ಕು ಬಾರಿ ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಸಂಸದರಾಗಿದ್ದ ಬೆಳಗಾವಿ ಜಿಲ್ಲೆಯ ಕಾಂಗ್ರೇಸ್‍ನ ರಾಜಕೀಯ ಹಿರಿಯ ಜೀವ ಎಸ್.ವಿ.ಸಿದ್ನಾಳ ಅವರು ಮಂಗಳವಾರದಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಬೆಳಗಾವಿ ಜಿಲ್ಲೆಯ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಖನ ಸವಸುದ್ದಿ ಸಂತಾಪ ಸೂಚಿಸಿದ್ದಾರೆ. ಅವರ ನಿಧನದಿಂದ ಜಿಲ್ಲೆಯಲ್ಲಿ ಒಳ್ಳೆಯ ರಾಜಕೀಯ ನಾಯಕನ್ನು ಕಳೆದುಕೊಂಡಿದು ನಮ್ಮಲ್ಲರಿಗೂ ನೋವು ಉಂಟು ಮಾಡಿದೆ. ಅವರ ಕುಟುಂಬ …

Read More »

ದನಕರುಗಳಿಗೆ ಅಗತ್ಯ ಬೇಕಾಗುವ ಮೇವನ್ನು ಪೂರೈಸಿಕೊಂಡು ಉತ್ಪಾದನೆಯ ಜೊತೆ ಆರ್ಥಿಕವಾಗಿ ಸಬಲರಾಗಬೇಕು- ಮಲ್ಲಪ್ಪ ಪಾಟೀಲ

ಗೋಕಾಕ : ದನಕರುಗಳಿಗೆ ಅಗತ್ಯ ಬೇಕಾಗುವ ಮೇವನ್ನು ಪೂರೈಸಿಕೊಂಡು ಉತ್ಪಾದನೆಯ ಜೊತೆ ಆರ್ಥಿಕವಾಗಿ ಸಬಲರಾಗಬೇಕು. ಕೆ.ಎಮ್.ಎಫ್‍ದಿಂದ ಕೊಡಲ್ಪಡುವ ಬೀಜಗಳು ಸುಧಾರಿತವಾದ್ದು, ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ ಹೇಳಿದರು. ಅವರು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಎನ್.ಎಸ್.ಎಫ್ ಅತಿಥಿ ಕಛೇರಿಯಲ್ಲಿ ಜರುಗಿದ ಕೆ.ಮ್.ಎಫ್ ದಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ ಹಾಲು ಪೂರೈಸುತ್ತಿರುವ ರೈತರಿಗೆ ಉಚಿತ ಮೇವಿನ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ …

Read More »

ಯಾರೂ ಆತಂಕಪಡುವ ಅಗತ್ಯವಿಲ್ಲ ನಾವಿದ್ದೇವೆ ಹೆದರಬೇಡಿ ನಮ್ಮನ್ನು ಸಂಪರ್ಕಿಸಿ

ಕೋಮು ಸೌಹಾರ್ದತೆಗೆ ಮಾದರಿಯಾದ ಮೂಡಲಗಿ ಹಿಂದು ಶವಗಳಿಗೆ ಮುಸ್ಲಿಂ ಯುವಕರಿಂದ ಶವ ಸಂಸ್ಕಾರ ಮೂಡಲಗಿ ಪಟ್ಟಣದ ಮಣ್ಣಿನಲ್ಲಿ ಮೊದಲಿನಿಂದಲೂ ವಿಶೇಷತೆ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದ್ದು ಅದರಲ್ಲೂ ಸೌಹಾರ್ಧತೆಗೆ ಮಾದರಿ ಪಟ್ಟಣವಾಗಿ ಪ್ರಖ್ಯಾತಿ ಪಡೆದಿದೆ ಎಂದರೆ ತಪ್ಪೇನಿಲ್ಲ. ದಿನದಿಂದ ದಿನಕ್ಕೆ ಎರಡನೇ ಅಲೆಯ ಕೊರೋನಾ ಪ್ರಕರಣಗಳ ಹೆಚ್ಚಳ ಮತ್ತು ಸಾವುಗಳಿಂದ ಜನತೆ ತಲ್ಲನಗೊಂಡಿರುವ ಇಂತಹ ಸಮಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಸ್ವತ:ಕುಟುಂಬಸ್ಥರು,ಸಂಬಂದಿಕರು,ಬಂಧು,ಮಿತ್ರರು ಹಿಂಜರಿಯುತ್ತಿರುವ ಮಾನವೀಯತೆ ಮರೆಯುತ್ತಿರುವ ಇಂತಹ ಸಮಯದಲ್ಲಿ …

Read More »