ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿಯ ಸಮಾವೇಶ,ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು:ಸಂಸದ ಕಡಾಡಿ ಬೆಳಗಾವಿ: ಹಿಂದಿನ ದಿನಮಾನಗಳಲ್ಲಿ ನಮ್ಮ ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು. ಆ ಕಾಲದಲ್ಲಿ ದೇಶದ ಜನಸಂಖ್ಯೆಗೆ ಬೇಕಾಗುವ ಆಹಾರವನ್ನು ಪೂರೈಸಲು ತೊಂದರೆಯಾದಾಗ ವಿದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಯಿತು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ …
Read More »Daily Archives: ಡಿಸೆಂಬರ್ 16, 2021
ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಮೂಡಲಗಿಯಿಂದ ಮಹಾಲಿಂಗಪೂರ ವಾಯ ಹಳ್ಳೂರ ಶಿವಾಪುರ ಕಪ್ಪಲಗುದ್ದಿ ಕ್ರಾಸ್ ಸೈದಾಪುರ ಹಳ್ಳೂರ ಕ್ರಾಸ್ ಹೀಗೆ ದಿನನಿತ್ಯ ಬಸ್ ಸಂಚರಿಸಲು ಅರಭಾವಿ ಶಾಸಕರು ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಾಗ ತಕ್ಷಣ ಸ್ಪಂದಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ನಿರಂತರ ಬಸ್ ಸಂಚರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಅವರು ಚಿಕ್ಕೋಡಿ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸಮಯಕ್ಕೆ …
Read More »ಡಿ.18 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ
ಡಿ.18 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ ಬೆಟಗೇರಿ:ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರ ಡಿ.18 ರಿಂದ ರವಿವಾರ ಡಿ.19 ರವರೆಗೆ ನಡೆಯಲಿವೆ. ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಶನಿವಾರ ಡಿ.18 ರಂದು ಬೆಳಿಗ್ಗೆ 6 ಗಂಟೆಗೆ ಸ್ಥಳೀಯ ಮಾರುತಿ ದೇವರ ದೇವಾಲಯದಲ್ಲಿರುವ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಹೋಮ, ಎಲೆಪೂಜೆ, ಪಂಚಾಮೃತಾಭಿಷೇಕ, 11 ಗಂಟೆಗೆ …
Read More »ಡಿ.24 ರಂದು ಬೆಟಗೇರಿ ಪಿಕೆಪಿಎಸ್ ಸಂಘದ ವಾರ್ಷಿಕ ಮಹಾಸಭೆ
ಡಿ.24 ರಂದು ಬೆಟಗೇರಿ ಪಿಕೆಪಿಎಸ್ ಸಂಘದ ವಾರ್ಷಿಕ ಮಹಾಸಭೆ ಬೆಟಗೇರಿ:ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2020-21ನೇಯ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯನ್ನು ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರ ಅಧ್ಯಕ್ಷತೆಯಲ್ಲಿ ಡಿ.24ರಂದು ಮುಂಜಾನೆ 11 ಗಂಟೆಗೆ ನಡೆಯಲಿದೆ. ಸಂಘದ ವಾರ್ಷಿಕ ಆಯಾ-ವ್ಯಯ ಅನುಮೋದನೆ, ನಿವ್ಹಳ ಲಾಭಗಳ ವಿಂಗಡನೆ, ಕಾರ್ಯ ಚಟುವಟಿಕೆಗಳ ಅನುಮೋದನೆ, ವಾರ್ಷಿಕ ವರದಿ ಸೇರಿದಂತೆ ಸಂಘದ ಸಮಗ್ರ ಪ್ರಗತಿಗಾಗಿ ಹಲವಾರು ವಿಷಯಗಳನ್ನು …
Read More »ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ತುರ್ತು ಕರೆ ಸಂಖ್ಯೆ 112 ಕುರಿತು ತಿಳುವಳಿಕೆ
ತುರ್ತು ಕರೆ 112 ಸಂಖ್ಯೆ ಸದುಪಯೋಗ ಪಡೆದುಕೊಳ್ಳಬೇಕು: ಬಿ.ಬಿ.ಬಿರಾದಾರ. ಬೆಟಗೇರಿ:ಸಾರ್ವಜನಿಕರು, ಶಾಲಾ ಮಕ್ಕಳು ತುರ್ತು ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ ತುರ್ತು ಕರೆ ಸಂಖ್ಯೆ 112ಕ್ಕೆ ಕರೆ ಮಾಡಿದರೆ, 112ವಾಹನ ಕೆಲವೇ ನಿಮಿಷದಲ್ಲಿ ನಿಮ್ಮ ಬಳಿಗೆ ಬರಲಿದೆ ಎಂದು ಕುಲಗೋಡ ಪೊಲೀಸ್ ಠಾಣೆ ಪೊಲೀಸ್ ಪೇದೆ ಬಿ.ಬಿ.ಬಿರಾದಾರ ಹೇಳಿದರು. ಬೆಳಗಾವಿ ಜಿಲ್ಲಾ ಪೊಲೀಸ್ ಮತ್ತು ಮೂಡಲಗಿ ಪೊಲೀಸ್ ಠಾಣೆ ಹಾಗೂ ಕುಲಗೋಡ ಪೊಲೀಸ್ ಠಾಣೆ …
Read More »ಹುಟ್ಟು ಹಬ್ಬದ ಪ್ರಯುಕ್ತ. ಶಾಲಾ ಮಕ್ಕಳಿಗೆ ಸಾಮಗ್ರಿಗಳ ವಿತರಣೆ
ಹುಟ್ಟು ಹಬ್ಬದ ಪ್ರಯುಕ್ತ. ಶಾಲಾ ಮಕ್ಕಳಿಗೆ ಸಾಮಗ್ರಿಗಳ ವಿತರಣೆ: ಕುಲಗೋಡ: ಇಂದಿನ ಯುವ ಪೀಳಿಗೆ ಹುಟ್ಟು ಹಬ್ಬಗಳ ಆಚರಣೆಯ ಹೆಸರಿನಲ್ಲಿ ಮೊಜ್ಜು ಮಸ್ತಿಯಲ್ಲಿ ತೊಡಗಿ ಸಾವಿರಾರೂ ರೂ ಹಣ ವ್ಯರ್ಥ ಖರ್ಚು ಮಾಡುತ್ತಾರೆ. ಇದನ್ನು ಬಿಟ್ಟು ಶಿಕ್ಷಣಕ್ಕೆ ಒತ್ತು ನೀಡಿ ಸರಕಾರಿ ಶಾಲೆಗಳು ಮಕ್ಕಳಿಗೆ ಆಸರೆಯಾಗಿ, ಶಿಕ್ಷಣ ಕ್ರಾಂತಿಗೆ ಕೈಜೋಡಿಸಿ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನೀಕೇರಿ ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಮನ್ನಾಪೂರ ಲಕ್ಷ್ಮೀದೇವಸ್ಥಾನದಲ್ಲಿ ಆರ್.ಎಮ್.ಯಡಹಳ್ಳಿ ಪೌಂಡೇಶನ್, …
Read More »