ಹುಟ್ಟು ಹಬ್ಬದ ಪ್ರಯುಕ್ತ. ಶಾಲಾ ಮಕ್ಕಳಿಗೆ ಸಾಮಗ್ರಿಗಳ ವಿತರಣೆ:
ಕುಲಗೋಡ: ಇಂದಿನ ಯುವ ಪೀಳಿಗೆ ಹುಟ್ಟು ಹಬ್ಬಗಳ ಆಚರಣೆಯ ಹೆಸರಿನಲ್ಲಿ ಮೊಜ್ಜು ಮಸ್ತಿಯಲ್ಲಿ ತೊಡಗಿ ಸಾವಿರಾರೂ ರೂ ಹಣ ವ್ಯರ್ಥ ಖರ್ಚು ಮಾಡುತ್ತಾರೆ. ಇದನ್ನು ಬಿಟ್ಟು ಶಿಕ್ಷಣಕ್ಕೆ ಒತ್ತು ನೀಡಿ ಸರಕಾರಿ ಶಾಲೆಗಳು ಮಕ್ಕಳಿಗೆ ಆಸರೆಯಾಗಿ, ಶಿಕ್ಷಣ ಕ್ರಾಂತಿಗೆ ಕೈಜೋಡಿಸಿ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನೀಕೇರಿ ಮಾತನಾಡಿದರು.
ಇವರು ಮೂಡಲಗಿ ತಾಲೂಕಿನ ಮನ್ನಾಪೂರ ಲಕ್ಷ್ಮೀದೇವಸ್ಥಾನದಲ್ಲಿ ಆರ್.ಎಮ್.ಯಡಹಳ್ಳಿ ಪೌಂಡೇಶನ್, ಮುಧೋಳ ವತಿಯಿಂದ ಕುಲಗೋಡ ಸಿ.ಆರ್.ಸಿ ಯ 7 ಶಾಲೆಗಳ 500 ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ರಾಜು ಯಡಹಳ್ಳಿ ಹುಟ್ಟು ಹಬ್ಬಕ್ಕೆ ಮಕ್ಕಳಿಗೆ ಸಾಮಗ್ರಿ ನೀಡಿ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿದ್ದಾರೆ. ಯಡಹಳ್ಳಿ ಇವರು ಅತಿವೃಷ್ಠಿ, ಅನಾವೃಷ್ಠಿ ಕರೋನಾ ಸಂದರ್ಭದಲ್ಲಿ ಮೂಧೋಳ ಹಾಗೂ ಮೂಡಲಗಿ ತಾಲೂಕಿಗೆ ಸಹಾಯ ಮಾಡಿದ್ದು ಸ್ಮರಣಿಯವಾಗಿದೆ. ಪ್ರತಿಯೊಬ್ಬರು ಹುಟ್ಟು ಹಬ್ಬಕ್ಕೆ ಗಿಡಗಳನ್ನು ಬೆಳಸಿ, ಶಿಕ್ಷಣಕ್ಕೆ ಇತ್ತು ನೀಡಿ ಅಂದಾಗ ದೇಶ ಅಭೀವೃದ್ದಿ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈರನಟ್ಟಿ ತೋಟ. ಮನ್ನಾಪೂರ ಶಾಲೆ, ಹುಣಶ್ಯಾಳ ಪಾಟೀಲ ತೋಟ, ಢವಳೇಶ್ವರ ಮಡ್ಡಿ ಶಾಲೆ, ಮೆಟಗುಡ ತೋಟದ ಹಾಗೂ ಕಳ್ಳಿಮಡ್ಡಿ ಶಾಲೆ ಕುಲಗೋಡ, ಕೌಜಲಗಿ ಬುದ್ನಿ ತೋಟದ ಶಾಲೆಗಳ ಮಕ್ಕಳಿಗೆ ಸಾಮಗ್ರಿ ವಿತರಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಆರ್ ಎಮ್ ಮಹಾಲಿಂಗಪೂರ. ಮೂಡಲಗಿ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಮ್ ಬಡಕಲ್ಲ. ಸಿ.ಆರ್.ಪಿ ಸುರೇಶ ತಳವಾರ. ಆರ್.ಆಯ್ ಬುದ್ನಿ. ಎಫ್.ಡಿ ದೊಡಮನಿ. ಆರ್.ಎಮ್.ಯಡಹಳ್ಳಿ ಪೌಂಡೇಶನ್ ನಿರ್ದೇಶಕÀ ಶಂಕರ ಹಾದಿಮನಿ, ಅರುಣಕುಮಾರ ದೇಸಾಯಿ. ಪ್ರಕಾಶ ಪಾಟೀಲ. ಬಸು ನಿಲ್ಲಪ್ಪಗೋಳ, ರಾಮಪ್ಪ ಪೂಜೇರಿ.. ಬಾಬುಸಾಬ ಮುಲ್ಲಾ. ಪಾಪು ನಾಯಿಕ, ಸದಾ ಬಡಕಲ್ಲ. ಮಲ್ಲು ಮುರಕಟ್ನಾಳ. ಹಾಗೂ ಶಿಕ್ಷಕರು ಮನ್ನಾಪೂರ ಗ್ರಾಮಸ್ಥರು, ಜನಪ್ರತಿನಿಧಿಗಳು ಇದ್ದರು.