Breaking News
Home / Recent Posts / ಶಿಕ್ಷಕರು ಸಂಸ್ಕøತಿಯ ರಾಯಭಾರಿಗಳಾಗಬೇಕು: ಶಿವಲಿಂಗ ಸಿದ್ನಾಳ

ಶಿಕ್ಷಕರು ಸಂಸ್ಕøತಿಯ ರಾಯಭಾರಿಗಳಾಗಬೇಕು: ಶಿವಲಿಂಗ ಸಿದ್ನಾಳ

Spread the love

ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನಾಲ್ಕು ಅಕ್ಷರ ಕಡಿಮೆ ಕಲಿಸಿದರೂ ಪರವಾಗಿಲ್ಲ ಸಂಸ್ಕಾರ ಕಲಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಮಹಾಲಿಂಗಪೂರ ಕೆ.ಎಲ್.ಇ ಪಿಯು ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.

ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸ್ಫರ್ಧೆಗಳು ಹಗು ಸಾಂಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಕಂಡು ಪ್ರತಿಭೆಯನ್ನು ಪೆÇ್ರೀತ್ಸಾಹಿಸಿ ಮಕ್ಕಳ ಭವಿಷ್ಯತ್ತು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು. ಹಳ್ಳಿಗಳು ಸನಾತನ ಸಂಸ್ಕೃತಿಯ ತೊಟ್ಟಿಲುಗಳಾಗಿದ್ದು, ಅವರಾದಿಯಂಥ ಗ್ರಾಮದಲ್ಲಿ ಅಪರೂಪದ ಶಾಲೆಯಾಗಿ ಮಹಾಲಕ್ಷ್ಮೀ ಪ್ರಾಥಮಿಕ ಶಾಲೆ ಮಾಡುತ್ತಿರುವ ಸೇವೆ ಶ್ಲಾಘನೀಯ. ಈ ಶಾಲೆಯ ಮಕ್ಕಳ ಬಹುಮುಖ ಪ್ರತಿಭೆಯ ಹಿಂದೆ ಶಿಕ್ಷಕರ ಶ್ರಮ ಪ್ರಶಂಸನೀಯ ಎಂದರು.
ಸಮಾರಂಭದಲ್ಲಿ ಭಾಷನ, ಪ್ರಬಂಧ, ದೇಶಭಕ್ತಿ ಗೀತೆ ಹಾಗೂ ಚದುರಂಗ ಸ್ಪರ್ಧೆಯ ವಿಜೇತರಿಗೆ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎ.ಪಿ ಬಿ ಪಾಟೀಲ ಮತ್ತು ಶಿಕ್ಷಕ ವೃಂದವರು ಇದ್ದರು.
ಪ್ರದೀಪ ಜಕ್ಕನ್ನವರ ಸ್ವಾಗತಿಸಿದರು, ಬಾಳು ನಾಯಿಕ ನಿರೂಪಿಸಿದರು, ಬಿ.ಡಿ.ತೇರದಾಳ ವಂದಿಸಿದರು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ