ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 38ನೇ ಸತ್ಸಂಗ ಸಮ್ಮೇಳನ ಇದೇ ಸೋಮವಾರ ಆ.29 ರಿಂದ ಸೆ.2 ತನಕÀ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ.
ಆ.29ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಸಾಯಂಕಾಲ 7:30ಗಂಟೆಗೆ ಚಿಕ್ಕಮುನವಳ್ಳಿ ಶಿವಪುತ್ರ ಸ್ವಾಮಿಜಿ, ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ, ಹಿಪ್ಪರಗಿಯ ಸಿದ್ಧಾರೂಢ ಶರಣರು ಇವರಿಂದ ವರ ಭಕ್ತಿಯಿಂದ ಸಚ್ಚರಿತ ಮುಂಟೆ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.
ಆ.30 ರಂದು ಸಾಯಂಕಾಲ 7:30 ಗಂಟೆಗೆ ಅಸುಂಡಿ(ಗದಗ) ಡಾ. ನೀಲಮ್ಮಾತಾಯಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಕುಂದರಗಿಯ ಅಮರಸಿದ್ಧೇಶ್ವರ ಸ್ವಾಮಿಜಿ, ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ, ಗದಗದ ಶರಣೆ ಮೈತ್ರಾ ತಾಯಿಯವರು, ಇವರಿಂದ ನಿಮಿಷವಾಗಲಿ ನಿಮ್ಮ ನೆನಹುನಿಂದೊಡೆ ಮುಕ್ತಿ ಎಂಬ ವಿಷಯದ ಮೇಲೆ ಪ್ರವಚನ, ಕರಿಕಟ್ಟಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನೆ ಜರುಗಲಿದೆ.
ಆ.31 ರಂದು ಸಾಯಂಕಾಲ 7:30ಗಂಟೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ, ಅಸುಂಡಿ(ಗದಗ) ಡಾ. ನೀಲಮ್ಮಾತಾಯಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ, ಗದಗದ ಶರಣೆ ಮೈತ್ರಾ ತಾಯಿಯವÀರಿಂದ ಮೃತ್ಯು ಮುಟ್ಟದ ಮುನ್ನ ಎಂಬ ವಿಷಯ ಮೇಲೆ ಪ್ರವಚನ ನಡೆಯಲಿದೆ.
ಸೆ.1ರಂದು ಪ್ರಾತ: ಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ಸಾಯಂಕಾಲ 6 ಗಂಟೆಗೆ ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಸ್ವಾಗತ ಮೆರವಣಿಗೆ ಬಳಿಕ ರಾತ್ರಿ 8 ಗಂಟೆಗೆ ಭಾರತಿ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಹಳಕಟ್ಟಿಯ ನಿಜಗುಣ ಸ್ವಾಮಿಜಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮಿಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮಿಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ (ಅಸುಂಡಿ), ಹುಣಶ್ಯಾಳ(ಪಿ.ಜಿ) ನಿಜಗುಣ ದೇವರು, ಮಲ್ಲಾಪೂರ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಗದಗದ ಶರಣೆ ಮೈತ್ರಾ ತಾಯಿಯವÀರು, ಹಡಗಿನಾಳದ ಮಲ್ಲೇಶ ಶರಣರಿಂದ ಗುರುವರನೊಲವಿಲ್ಲದವನೇನನೋದಲು ದೊರೆಯಲರಿಯದು ಸಮ್ಯಜ್ಞಾನ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.
ಸ್ಥಳೀಯ ಶರಣೆ ಬಸವ್ವ ಕಂಬಿ, ಶರಣರಾದ ಶಿವಾನಂದ ಪಾರ್ವತೇರ, ಬಸವಂತ ಕೋಣಿ ಮತ್ತು ಸಹೋದರರು, ಶರಣೆ ಪಾರವ್ವ ಬಳಿಗಾರ ಹಾಗೂ ಕುಟುಂಬದವರಿಂದ ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕಿರೀಟ ಮಹಾಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ ರಾತ್ರಿ ಶಿವ ಭಜನೆ, ಶಿವಜಾಗರಣೆ, ಮಹಾಂತೇಶ ಕಲ್ಲೋಳಿ ತಬಲಾ ಸಾಥ್ದೊಂದಿಗೆ ಶೇಗುಣಿಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ, ಕುಮಾರ ಪತ್ರೆಪ್ಪ ಶಿವಾನಂದ ಮೆಳೆಣ್ಣವರರಿಂದ ಮಹಾಪ್ರಸಾದ ಸೇವೆ ನಡೆಯಲಿದೆ.
ಸೆ.2 ರಂದು ಮುಂಜಾನೆ 10 ಗಂಟೆಗೆ ಸಮ್ಮೇಳನದಲ್ಲಿ ಉಪಸ್ಥಿತರಿರುವ ಸಕಲ ಮಹಾತ್ಮರಿಂದ ಬಚ್ಚಿಟ್ಟ ಮಂತ್ರವ ಬಿಚ್ಚು ನುಡಿಯಾಗಿಸಿದ ಆರೂಢರು ಎಂಬ ವಿಷಯದ ಮೇಲೆ ಪ್ರವಚನ ನಡೆದು, ಸಾಧಕರಿಗೆ, ದಾನಿಗಳಿಗೆ ಸತ್ಕಾರ, ಆಶೀರ್ವಾದ, ಶ್ರೀಗಳಿಂದ ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದ ಕಾರ್ಯಕ್ರಮ ಜರುಗಿ ಸತ್ಸಂಗ ಸಮ್ಮೇಳನ ಸಮಾರೊಪಗೊಳ್ಳಲಿದೆ ಎಂದು ಇಲ್ಲಿಯ ಈಶ್ವರ ಭಜನಾ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.