Breaking News
Home / ಬೆಳಗಾವಿ / ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ

ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ

Spread the love

ಮೂಡಲಗಿ: ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರ ಮಕ್ಕಳ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತೇರ್ಗಡೆಯಾದ ತಲಾ ಮೂವರಿಗೆ ಪ್ರೋತ್ಸಾಹ ಧನವನ್ನು ಮತ್ತು ಸಂಘದ ಸದಸ್ಯರ ಕಲ್ಯಾಣ ಕಾರ್ಯಕ್ರಮಗಳಿಗೆ ಮೂಲಸೌಕರ್ಯ ಒದಗಿಸುವದು ಹಾಗೂ ಸಂಘದ ಸದಸ್ಯರುಗಳಿಗೆ ಮರಣೋತ್ತರ ನಿಧಿಯಿಂದ ಸಾಲಗಾರ ಸದಸ್ಯರಿಗೆ ಹತ್ತು ಸಾವಿರ ಧನಸಹಾಯ ನೀಡಲಾಗುವುದು ಎಂದು ಸಂಘ ಅಧ್ಯಕ್ಷ ನೀಲಕಂಠ ಬಸಪ್ಪ ಕಪಲಗುದ್ದಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 112 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 112 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾದಿಸುತ್ತ ಬಂದಿರುವ ಸಂಘವು ಕಳೆದ ಮಾರ್ಚ ಅಂತ್ಯಕ್ಕೆ 2,848 ಸಾಮಾನ್ಯ ಸದಸ್ಯರಿಂದ 2.69 ಕೋಟಿ ರೂ ಶೇರು ಬಂಡವಾಳ, 5.90 ಕೋಟಿ ರೂ ನಿಧಿಗಳು, ಬಿ.ಡಿ.ಸಿ.ಸಿ. ಬ್ಯಾಂಕನಲ್ಲಿ ಆರ್.ಎಫ್.ಡಿ. ಸಹಿತ 7,34 ಕೋಟಿ ರೂ ಗುಂತಾವಣೆಗಳನ್ನು ಹೊಂದಿ 58.34 ಲಕ್ಷ ರೂ ಲಾಭ ಗಳಿಸಿ ಮತ್ತು ಶೇರುದಾರರಿಗೆ ಶೇ.5 ರಷ್ಟು ಲಾಭಾವಂಶ ವಿತರಿಸಿ ಸಂಘವು ಪ್ರಗತಿ ಪತಥದಲ್ಲಿ ನಡೆದಿದೆ ಎಂದರು.
1,438 ಸದಸ್ಯರುಗಳಿಗೆ 15,84 ಕೋಟಿ ರೂ ಬೆಳೆಸಾಲವನ್ನು ಹಾಗೂ 05 ಸದಸ್ಯರುಗಳಿಗೆ 27,16 ಲಕ್ಷ ರೂ ಟ್ಯಾಕ್ಟರ ಸಾಲ, 14 ಸದಸ್ಯರುಗಳಿಗೆ 97 ಸಾವಿ ಹೈನುಗಾರಿಕೆ ಸಾಲವನ್ನು ಬಿ.ಡಿ.ಸಿ.ಸಿ. ಬ್ಯಾಂಕಿನಿಂದ ವಿತರಿಸಿದೆ. ಹಾಗೂ ಸ್ವಂತ ಬಂಡವಾಳದಲ್ಲಿ 9,71 ಲಕ್ಷ ರೂ Éಳೆಸಾಲ ನೀಡಲಾಗಿದೆ ಎಂದರು
ಸನ್ 2022-23 ನೇ ಸಾಲಿಗಾಗಿ ಹೊಸ ಪತ್ತ ಮಂಜೂರಿ ಪಡೆದು ಪ್ರತಿ ಎಕರೆಗೆ 40 ಸಾವಿರ ರೂ ಗಳಂತೆ 16,40 ಕೋಟಿ ಮಂಜೂರಾಗಿದ್ದು ಅದರಲ್ಲಿ ರೂ 16,00,00,000/ ಡಿ.ಸಿ.ಸಿ. ಬ್ಯಾಂಕನಿಂದ ಹಾಗೂ ರೂ 28,83 ಲಕ್ಷ ರೂ ಸ್ವಂತ ಬಂಡವಾಳದಲ್ಲಿ ಸಾಲ ವಿತರಿಸಲಾಗಿದೆ, ಆಡಳಿತ ಮಂಡಳಿಯ ಮತ್ತು ಸಿಬ್ಬಂದಿ ವರ್ಗದವರ ಶ್ರಮದಿಂದ ಶೇ. 100 ರಷ್ಟು ವಸೂಲಾತಿ ಸಾಧಿಸಲು ಸಾದ್ಯವಾಗಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಭೀಮಪ್ಪ ವ್ಯಾಪಾರಿ ನಿರ್ದೇಶಕರಾದ ಬಸವರಾಜ ಬೆಳಕೂಡ, ಮಲ್ಲಪ್ಪ ಕಡಾಡಿ, ಆನಂದ ಹೆಬ್ಬಾಳ, ಶಂಕರ ಗೋರೋಶಿ, ಬಸಪ್ಪ ಬಿ||ಪಾಟೀಲ, ಧರೀಶ ಖಾನಗೌಡ್ರ, ಮಹಾದೇವಿ ಖಾನಾಪೂರ, ಕೆಂಪವ್ವ ಗೋರೋಶಿ, ಮಲ್ಲಪ್ಪ ಪೂಜೇರಿ, ಧರ್ಮಣ್ಣ ನಂದಿ, ಬ್ಯಾಂಕ ನಿರೀಕ್ಷಕ ಹಾಗೂ ಶೇರುದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲಪ್ಪ ಹೆಬ್ಬಾಳ ವಾರ್ಷೀಕ ವರದಿಯನ್ನು ಮಂಡಿಸಿದರು, ಮಾನಿಂಗ ಮೇತ್ರಿ ವಂದಿಸಿದರು.


Spread the love

About inmudalgi

Check Also

*ಅರಿಹಂತ್ ಆಸ್ಪತ್ರೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಮಹಾದೇವ್ ಡಿ. ದೀಕ್ಷಿತ್ ಅವರಿಗೆ “ಲೈಫ್ಟೈಮ್ ಅಚೀವ್‌ಮೆಂಟ್ ಅವಾರ್ಡ್”*

Spread the love *ಅರಿಹಂತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಮಹಾದೇವ್ ಡಿ. ದೀಕ್ಷಿತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ