
ಮೂಡಲಗಿ : ಜನಸೇವೆ ಮತ್ತು ಭಕ್ತಿ ಸೇವೆಯಿಂದ ಪರಮಾತ್ಮನನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಕನಕದಾಸರು ಇಡೀ ವಿಶ್ವಕ್ಕೆ ಪರಿಚಯಸಿದರು ಕನಕದಾಸರ ವಿಚಾರಗಳು ಮತ್ತು ಚಿಂತನೆಗಳು ಮಾನವ ಕುಲಕೋಟಿಯ ಐಕ್ಯತೆಯ ಸ್ಪೂರ್ತಿಯನ್ನು ಬಿಂಬಿಸುತ್ತದೆ ಮಾನವ ಕುಲದ ಐಕ್ಯತೆ ಚಿಂತನಕಾರರಲ್ಲಿ ಕನಕದಾಸರು ಶ್ರೇಷ್ಟರು. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆಯನೇನಾದರೂ ಬಲ್ಲಿರಾ…. ಎಂದು ಸಮಾಜ ಸುದಾರಕರಾಗಿ 15-16 ನೇ ಶತಮಾನದಲ್ಲಿ ಭಾರತೀಯ ಧಾರ್ಮಿಕ ಅಂದೋಲನದ ಪ್ರತಿಪಾದನೆಯನ್ನು ಕನಕದಾಸರು ಮಾಡಿದರು. ಅಲ್ಲದೇ ಜನರಲ್ಲಿ ಇರುವ ಜೀವನದ ಮೌಢತ್ಯೆಗಳನ್ನು ದಾಸ ಸಾಹಿತ್ಯದ ಮೂಲಕ ತಿಳುವಳಿಕೆ ನೀಡಿದರು ಅವರ ದಾಸಸಾಹಿತ್ಯವು ಪ್ರಸ್ತುತ ಸಮಾಜದ ಜನರ ಜೀವನಕ್ಕೆ ಅನುಕರಣೆ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಂಗಾಧರ ಮನ್ನಾಪೂರ ಹೇಳಿದರು.
ಪಟ್ಟಣದ ಆರ್ಡಿಎಸ್. ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯ, ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ನೇರವೇರಿಸಿ ಮಾತನಾಡಿ ಕನಕದಾಸರ ಸಾಹಿತ್ಯ ಮಾನವ ಕುಲದ ಸಮಗ್ರತೆಯ ಮೌಲ್ಯಗಳನ್ನು ಒಳಗೊಂಡಿದೆ ಎಂದರು.
ಅತಿಥಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಮುತ್ತಣ್ಣ ಒಡೆಯರ ಮಾತನಾಡುತ್ತಾ ಕನಕದಾಸರು ಜಾತಿ ಪದ್ದತಿಯ ವಿರುದ್ದ ಅವರ ಹೊಂದಿರುವ ಉದಾರತೆಯನ್ನು ತಿಳಿಸುವದರ ಜೊತೆಗೆ ಮಾನವ ಕುಲದಲ್ಲಿ ಇರುವ ಶ್ರೇಷ್ಟತೆಯನ್ನು ತಿಳಿಸುವದರ ಮೂಲಕ ಅನೇಕ ಕೃತಿಗಳನ್ನು ರಚಿಸಿ ಜನರಿಗೆ ಮೌಡ್ಯತೆಗಳನ್ನು ಬಿಟ್ಟು ಮಾನವೀತೆಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಪ್ರಸ್ತಾಪಿಸಿದನ್ನು ನನೆಪಿಸಿದರು,
ಉಪನ್ಯಾಸಕ ಸಂಜೀವ ಮಂಟೂರ ಮಾತನಾಡಿ ಭಕ್ತಿ ಸೇವೆಯಿಂದ ಪರಮಾತ್ಮನನ್ನು ಒಲಿಸಿಕೊಳ್ಳುವದಕ್ಕೆ ಕನಕದಾಸರ ವಿಚಾರಗಳು ಮತ್ತು ಚಿಂತನೆಗಳು ಮಾನವ ಕುಲಕೋಟಿಗೆ ಸ್ಪೂರ್ತಿಯನ್ನು ತುಂಬುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ ಕನಕದಾಸರು ಜಾತಿ ಪದ್ದತಿಯ ವಿರುದ್ದ ಹೋರಾಡಿ ಸಮಾಜವನ್ನು ಮಾನವೀಯತೆ ತತ್ವದ ಮೇಲೆ ಕಟ್ಟುವಂತೆ ಹೇಳಿದರು ನಾನು ಎಂಬ ಅಹಂಕಾರ ಬಿಟ್ಟಾಗ ಮಾತ್ರ ಭಗವಂತನನ್ನು ಒಲಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಲಕ್ಷ್ಮೀ ಪಾಟೀಲ, ಡೊಳ್ಳಿ ಅಭಿಷೇಕ ಮಠದ ಭಾಮಿನಿ ವ್ಯಾಪಾರಿ ಕನಕದಾಸರ ಚಿಂತನೆಗಳನ್ನು ಕುರಿತು ಮಾತನಾಡಿದ್ದರು
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಉಪನ್ಯಾಸಕರಾದ ಸಂಗಮೇಶ ಕುಂಬಾರ, ಸಂತೋಷ ಲಟ್ಟಿ, ಮಹಾದೇವ ಸಿದ್ನಾಳ, ಸುನೀಲ ಸತ್ತಿ, ಮಲ್ಲಪ್ಪ ಪಾಟೀಲ, ರಾಜು ಪತ್ತಾರ, ಸಾದನಾ ಖಂಡ್ರಟ್ಟಿ ಸುಭಾಸ ಮಾಲೋಜಿ, ಉಮೇಶ ಪುಟ್ಟಿ ಮತ್ತಿತರರು ಭಾಗವಹಿಸಿದ್ದರು.
ಉಪನ್ಯಾಸಕ ಭೀರಪ್ಪ ಕಬ್ಬೂರೆ ನಿರೂಪಿಸಿದರು ರವಿ ಕಟಗೇರಿ ಸ್ವಾಗತಿಸಿದರು ಸಿದ್ದಾರೂಢ ಬೆಳವಿ ವಂದಿಸಿದರು.
IN MUDALGI Latest Kannada News