Breaking News
Home / Recent Posts / ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ಸನ್ಮಾನ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ಸನ್ಮಾನ

Spread the love


ನಿವೃತ್ತ ಸೈನಿಕ ಅಪ್ಪಾಸಾಬ ಜಾಧವಗೆ ಸನ್ಮಾನ

ಮೂಡಲಗಿ: ಭಾರತೀಯ ಸೇನೆಯಲ್ಲಿ 24ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಪಟ್ಟಣಕ್ಕೆ ಮರಳಿದ ಯೋಧ ಅಪ್ಪಾಸಾಬ ಜಾಧವಗೆ ಪಿ ಕೆ ಫ್ರೂಟ್ ಮಾರ್ಟನಲ್ಲಿ ಸತ್ಕರಿಸಿ ಗೌರವಿಸಲಾಯಿತು
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸೈನಿಕ ವೃತ್ತಿಯಿಂದ ನಿವೃತ್ತಿಯಾದರೂ ಭಾರತ ಮಾತೆಯ ಸೇವೆಯಲ್ಲಿ ಸದಾ ಇರುವುದಾಗಿ ಹೇಳಿ,ಬಲಿಷ್ಠ ಭಾರತಕ್ಕಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಯಲ್ಲಿ ಸೇರಿ ಸದೃಡ ದೇಶ ಕಟ್ಟುವಲ್ಲಿ ಮುಂದಾಗಬೇಕು ಎಂದರು.
ಪಿ.ಕೆ ಫ್ರೂಟ್ ಮಾರ್ಟ ಮಾಲಿಕ ಪ್ರಕಾಶ ಕಾಳಪ್ಪಗೋಳ ನಿವೃತ್ತ ಯೋಧನಿಗೆ ಸನ್ಮಾನಿಸಿ ಮಾತನಾಡಿ, ರೈತ ಹಾಗೂ ಯೋಧರು ಸಲ್ಲಿಸುವ ಕಾರ್ಯದಿಂದ ಇಂದು ನಾವೆಲ್ಲ ನೆಮ್ಮದಿ ಜೀವನ ಸಾಗಿಸುವಂತಾಗಿದೆ ಅವರಂತೆ ಪ್ರತಿಯೊಬ್ಬರೂ ಪ್ರಾಮಾಣಿಕ ಸೇವೆಯಲ್ಲಿ ತೊಡಗಿ ದೇಶದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅರ್ಜುನ ಗಾಣಿಗೇರ, ಬಸವರಾಜ ಬಡಿಗೇರ, ಮೋಹನ ಜಾಧವ, ಫ್ರೂಟ್‍ಮಾರ್ಟ ಸಿಬ್ಬಂದಿ ಹಾಗೂ ಅನೇಕ ಗಣ್ಯರು ಇದ್ದರು.


Spread the love

About inmudalgi

Check Also

ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ – ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ: ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ