Breaking News
Home / Recent Posts / ಶಿಕ್ಷಕರಿಗೆ ಕಿರುಕಳ: ಶಿಕ್ಷಕರ ಸಂಘದಿಂದ ಖಂಡನೆ

ಶಿಕ್ಷಕರಿಗೆ ಕಿರುಕಳ: ಶಿಕ್ಷಕರ ಸಂಘದಿಂದ ಖಂಡನೆ

Spread the love

 

ಶಿಕ್ಷಕರಿಗೆ ಕಿರುಕಳ: ಶಿಕ್ಷಕರ ಸಂಘದಿಂದ ಖಂಡನೆ

ಮೂಡಲಗಿ: ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲಕ್ಷ್ಮಣ ನಾಯಿಕ ಮತ್ತು ಅಲ್ಲಿಯ ಸಿಬ್ಬಂದಿಯ ಮೇಲೆ ಆಡಳಿತ ಮಂಡಳಿಯ ಅಧ್ಯಕ್ಷರು ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಳ ನೀಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಮೂಡಲಗಿ ತಾಲ್ಲೂಕ ಘಟಕವು ಶನಿವಾರ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದರು.
ಸತ್ತಿ ಬವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾರುತಿ ಹೊನಕಡಬಿ ಅವರ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಬಿ.ಎಂ. ಬೋರಗಲ್, ಉಪಾಧ್ಯಕ್ಷ ಆರ್.ಪಿ. ಭಾಗೋಜಿ, ಪ್ರಧಾನ ಕಾರ್ಯದರ್ಶಿ ವೈ.ಕೆ. ಮಾರಿಹಾಳ, ಎಂ.ಆರ್. ತೋಟಗಿ, ಆರ್.ಎಂ. ಗುಡಸಿ, ಎಲ್.ಎಂ. ಪಂಚಗಾಂವಿ, ಪಿ.ಎಂ. ಶಿವಾಪುರ, ಎ.ಎಂ. ಹೆಗ್ಗಾಣಿ, ಜೆ.ಬಿ. ಓಂಕಾರಿ, ಎಸ್.ಪಿ. ಕಪ್ಪಲಗುದ್ದಿ, ಬಿ.ಆರ್. ಮುಂಬರಡ್ಡಿ, ಐ.ಎ. ಪಾಟೀಲ, ಇಸಾಕ ಮೂಡಲಗಿ, ಬೌರಮ್ಮ ಬಿ. ನಿಡಸೋಸಿ ಇದ್ದರು.


Spread the love

About inmudalgi

Check Also

*ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸುತ್ತಿರುವ ನೀರು ಮೂರು ದಿನಗಳವರೆಗೆ ಹೆಚ್ಚುವರಿ ವಿಸ್ತರಣೆ*

Spread the love ಗೋಕಾಕ: ಜನ ಹಾಗೂ ಜಾನುವಾರುಗಳಿಗೆ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿರುವ ನೀರನ್ನು ಇನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ