ಶಿವಾಪೂರ(ಹ): ಮುಕ್ತ ಕಬಡ್ಡಿ ಪಂದ್ಯಾವಳಿ ಮಹಾರಾಷ್ಟ್ರದ ಶಿವ ಶಾಹು ತಂಡ ಪ್ರಥಮ
ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶ್ರೀ ಗಜಾನನ ಉತ್ಸವ ನಿಮಿತ್ತವಾಗಿ ಏರ್ಪಡಿಸಿದ ಪುರುಷರ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬ್ಬಡಿ ಪಂದ್ಯಾವಳಿ ಗ್ರಾಮದ ಬಾಲಚಂದ್ರ ಬಯಲು ರಂಗಮಂದಿರದ ಆವರಣದಲ್ಲಿ ಜರುಗಿದವು.
ಪಂದ್ಯಾವಳಿಯ ಸಮಾರಂಭವನ್ನು ಶಾಸಕ ಹಾಗೂ ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅವರ ಆಪ್ತ ಕಾರ್ಯದರ್ಶಿಯಾದ ದಾಸಪ್ಪ ನಾಯಕ್ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟ್ಟಗಳನ್ನು ಕ್ರೀಡೆಯಲ್ಲಿ ಸೊಲು-ಗೇಲುವನ್ನು ಸಮಾನಾಗಿ ಸ್ವೀಕರಿಸಬೇಕೆಂದರು.
ಹಿಡಕ್ ಡ್ಯಾಂ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಯಲ್ಲಪ್ಪ ಬಿ.ಪಾಟೀಲ್ ಮಾತನಾಡಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿ ಕೊಂಡು ಸದೃಢರಾಗಬೇಕೆಂದು,
ಕ್ರೀಡಾಕೂಟದ ಮೈದಾನ ಪೂಜೆಯನ್ನು ಎಸ್.ಎಸ್.ಪಾಟೀಲ ನೆರವೇರಿಸಿದರು, ಶಂಕರಗೌಡ ದುಂ.ಗೌಡ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ ಮಾಜಿ ಸದಸ್ಯ ಭೀಮಶಿ ಮುಗದುಮ್ಮ ಟಾಸ್ ಮಾಡಿ ಪಂದ್ಯಾವಳಿಗೆ ಚಾಲನೆ ನೀಡಿದರು ಅಥಿತಿಗಳಾಗಿ ಹಣಮಂತ ತೇರದಾಳ ಮತ್ತಿತರು ಭಾಗವಹಿಸಿದ್ದರು
ಪಂದ್ಯಾವಳಿಗಳಲ್ಲಿ ಸೂಮಾರು 40 ತಂಡಗಳು ಭಾಗವಹಿಸಿದ್ದರು
ಬಹುಮಾನ ವಿತರಣೆ: ಹೊನಲು ಬೆಳಕಿನಲ್ಲಿ ಕಬಡ್ಡಿ ಪಂದ್ಯಾವಯಲ್ಲಿ ಮಹಾರಾಷ್ತ್ರದ ಸಡೋಲಿ ಶಿವ ಶಾಹು ಕಬಡ್ಡಿ ತಂಡ(ಪ್ರಥಮ), ಅರಳಿಮಟ್ಟಿಯ ಬಸವೇಶ್ವರ ತಂಡ (ದ್ವಿತೀಯ), ನಾಗನೂರ ಮಹಾಲಕ್ಷ್ಮೀ ತಂಡ(ತೃತೀಯ), ಚಿಂಚಲಿ ಅಕಾಡೆಮಿ ತಂಡ(ಚತುರ್ಥ)ಸ್ಥಾವನ್ನು ಪಡೆದುಕೊಂಡರು.
ಪಂದ್ಯಾವಳಿಯ ನಿರ್ಣಾಯಕರಾಗಿ ಪಿ.ಎನ್.ಆಳಗೂರ್, ಕೆ.ಎಚ್.ಪಾಟೀಲ, ಮೆಕ್ಕಲಮರಡಿ, ಎಂ.ಕೆ.ಪೂಜೇರಿ, ಹಣಮಂತ ಮದನ್ನವರ, ಡೊಳ್ಳಿ ಕಾರ್ಯ ನಿರ್ವಹಿಸಿದರು, ಬಹುಮಾನ ವಿತರಣೆಯಲ್ಲಿ ಕೆ.ಜಿ.ಮೂಧೋಳ, ಗ್ರಾ.ಪಂ ಅಧ್ಯಕ್ಷ ಬಿ.ಆರ್.ಸಾಯನ್ನವರ, ಎಸ್.ಎಂ.ಜುಂಜರವಾಡ, ಕೆ.ಬಿ.ಮೂಧೋಳ, ಎಸ್.ವಾಯ್.ಜುಂಜರವಾಡ, ಸಿ.ಎಂ.ಕುಡಚಿ, ಮಾರುತಿ ಮದಲಮಟ್ಟಿ, ಯುವಕ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ, ಗ್ರಾ.ಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸಂಘಟಕರು, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು. ಸಿ.ಎಂ.ಉಗಾರ ನಿರೂಪಿಸಿದರು, ಮಾಂತೇಶ ಯರಗಟ್ಟಿ ವಂದಿಸಿದರು.