ಸದೃಢ ಭಾರತ ಕಟ್ಟುವಲ್ಲಿ ಮಹಿಳೆಯರ ಪಾತ್ರ ಪ್ರಮುಖ ಮೂಡಲಗಿ: ನಮ್ಮ ನಾಡಿನ ಪ್ರತಿಯೊಬ್ಬ ಮಹಿಳೆಯರು ಸಾಕ್ಷರರಾಗುವದರ ಜೊತೆಗೆ ಸ್ವಾವಲಂಬಿಗಳಾಗಿ ಬದುಕಬೇಕು. ಕುಟುಂಬವನ್ನು ಬೆಳೆಸುವದರ ಜೊತೆಗೆ ಜಗತ್ತಿನ ತೂಗುವ ಶಕ್ತಿಯಾಗಿ, ಸಭಲೆಯಾಗಿ ಬೆಳೆಯಬೇಕೆಂದು ಮುಖ್ಯ ಶಿಕ್ಷಕ ಎ.ವ್ಹಿ ಗಿರೆಣ್ಣವರ ಹೇಳಿದರು. ಅವರು ತುಕ್ಕಾನಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವುದು ಹಾಗೂ ಸದೃಢ ಭಾರತ …
Read More »ಎರಡನೇ ಹಂತದ ಕೋವಿಡ್-19 ಲಸಿಕೆ ಅಭಿಯಾನ
ಮೂಡಲಗಿ: ಎರಡನೇ ಹಂತದ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಗಾವಿ ಪ್ರತಿಷ್ಠಿತ ಲೇಕ್ಯೂ ಆಸ್ಪತ್ರೆಯ ಡಾ. ಗಿರೀಶ್ ಸೋನವಾಲಕರ ಮತ್ತು ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಅವರ ಮಾತೋಶ್ರಿ ಸ್ಥಳೀಯ ಸರಕಾರಿ ಪ್ರೌಢ ಶಾಲೆಗೆ ಭೂ ದಾನಿ ಲಕ್ಷ್ಮೀಬಾಯಿ ಸೋನವಾಲಕರ ಅವರಿಗೆ ಕೋವಿಡ್ ವಾಕ್ಸಿನ್ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ …
Read More »ಕೋವಿಡ್ ಲಸಿಕೆ ಪಡೆದ ಡಾ. ಅನೀಲ ಪಾಟೀಲ
ಕೋವಿಡ್ ಲಸಿಕೆ ಪಡೆದ ಡಾ. ಅನೀಲ ಪಾಟೀಲ ಮೂಡಲಗಿ: ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ಪಟ್ಟಣದ ವೈದ್ಯ ಡಾ. ಅನೀಲ ಪಾಟೀಲ ಅವರು ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದರು.
Read More »ರಾಜ್ಯ ಬಜೆಟ್ನಲ್ಲಿ ಸೌಲಭ್ಯ ವಂಚಿತ ಪತ್ರಕರ್ತರು
ರಾಜ್ಯ ಬಜೆಟ್ನಲ್ಲಿ ಸೌಲಭ್ಯ ವಂಚಿತ ಪತ್ರಕರ್ತರು ಮೂಡಲಗಿ: ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರ ಮಂಡಿಸಿದ ಬಜೆಟ್ನಲ್ಲಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗನಿಸಿದ್ದಾರೆ ಎಂದು ಪ್ರೆಸ್ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು. ಮಂಗಳವಾರದಂದು ಪ್ರೆಸ್ಕ್ಲಬ್ ಕಚೇರಿಯಲ್ಲಿ ಜರುಗಿದ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಪತ್ರಕರ್ತರಿಗೆ ಅನ್ಯಾಯವಾಗಿರುವ ಕುರಿತು ಮಾತನಾಡಿದ ಅವರು, ಈ ಹಿಂದೆ ಮಂಡಿಸಿದ ಬಜೆಟ್ಗಳಲ್ಲಿ ಪತ್ರಕರ್ತರನ್ನು ಗಮನದಲ್ಲಿಟ್ಟುಕೊಂಡು ಅನುದಾನ ಹಾಗೂ ವಿವಿಧ ಯೋಜನೆಗಳನ್ನು ಸರಕಾರದಿಂದ ನೀಡಲಾಗುತ್ತಿತ್ತು. ಆದರೆ …
Read More »ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ಸನ್ಮಾನ
ನಿವೃತ್ತ ಸೈನಿಕ ಅಪ್ಪಾಸಾಬ ಜಾಧವಗೆ ಸನ್ಮಾನ ಮೂಡಲಗಿ: ಭಾರತೀಯ ಸೇನೆಯಲ್ಲಿ 24ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಪಟ್ಟಣಕ್ಕೆ ಮರಳಿದ ಯೋಧ ಅಪ್ಪಾಸಾಬ ಜಾಧವಗೆ ಪಿ ಕೆ ಫ್ರೂಟ್ ಮಾರ್ಟನಲ್ಲಿ ಸತ್ಕರಿಸಿ ಗೌರವಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸೈನಿಕ ವೃತ್ತಿಯಿಂದ ನಿವೃತ್ತಿಯಾದರೂ ಭಾರತ ಮಾತೆಯ ಸೇವೆಯಲ್ಲಿ ಸದಾ ಇರುವುದಾಗಿ ಹೇಳಿ,ಬಲಿಷ್ಠ ಭಾರತಕ್ಕಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಯಲ್ಲಿ ಸೇರಿ ಸದೃಡ ದೇಶ ಕಟ್ಟುವಲ್ಲಿ ಮುಂದಾಗಬೇಕು ಎಂದರು. …
Read More »ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಭೂಷಿತಳಾಗಿರುವಳು- ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ
ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಭೂಷಿತಳಾಗಿರುವಳು- ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಮೂಡಲಗಿ: ‘ಸಹನೆ, ಕರುಣೆಯನ್ನು ಹೊಂದಿರುವ ಮಹಿಳೆಯು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಭೂಷಿತಳಾಗಿದ್ದಾಳೆ’ ಎಂದು ನಿಪ್ಪಾಣಿಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಹೇಳಿದರು. ಇಲ್ಲಿಯ ಲಯನ್ಸ ಕ್ಲಬ್ ಮೂಡಲಗಿ ಪರಿವಾರದಿಂದ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಹಿಳೆಯು ಅಪಾರವಾದ ಆತ್ಮಸ್ಥೈರ್ಯವನ್ನು ಹೊಂದಿದ್ದಾಳೆ ಎಂದರು. ಪ್ರತಿ ಮಹಿಳೆಯು ಶಿಕ್ಷಣವನ್ನು ಹೊಂದಿದರೆ ಅದು …
Read More »ಬೆಟಗೇರಿ ಗ್ರಾಮದ ಶ್ರೀ ಸಿದ್ಧಾರೂಢರ ಭಕ್ತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಗೆ ಪಯಣ
ಬೆಟಗೇರಿ ಗ್ರಾಮದ ಶ್ರೀ ಸಿದ್ಧಾರೂಢರ ಭಕ್ತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಗೆ ಪಯಣ ಬೆಟಗೇರಿ:ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಜಾತ್ರೆಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರು ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಸೋಮವಾರದಂದು ಸ್ಥಳೀಯ ಶ್ರೀ ಬಸವೇಶ್ವರ ವೃತ್ತದಲ್ಲಿ ನಡೆಯಿತು. ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಸೇರಿದಂತೆ ನೂರಾರು …
Read More »ಕೋವಿಡ್ ಲಸಿಕೆ ಪಡೆದ ಡಾ. ಪಾಟೀಲ
ಕೋವಿಡ್ ಲಸಿಕೆ ಪಡೆದ ಡಾ. ಪಾಟೀಲ ಮೂಡಲಗಿ: ಎರಡನೇ ಹಂತದ ಲಸಿಕೆ ಅಭಿಯಾನ ಕಾರ್ಯಕ್ರದ ಪ್ರಾರಂಭದಲ್ಲಿ ಮಾಜಿ ಪುರಸಭೆ ಸದಸ್ಯ ಡಾ.ಎಸ್ ಎಸ್ ಪಾಟೀಲ ಅವರು ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಕೋವಿಡ್ ಲಸಿಕೆಯನ್ನು ಪಡೆದು ‘ಯಾರೂ ಭಯ ಪಡುವ ಅವಷ್ಯಕತೆ ಇಲ್ಲ ಧೈರ್ಯವಾಗಿ ಲಸಿಕೆ ಪಡೆದು ಕೊರೋನಾ ಮುಕ್ತ ದೇಶಕ್ಕಾಗಿ ಸಹಕರಿಸಿ ಎಂದರು’
Read More »ಮಹಿಳೆಯರ ಅವಮಾನ, ಖಂಡನೆ
ಮಹಿಳೆಯರ ಅವಮಾನ, ಖಂಡನೆ ಮೂಡಲಗಿ: 2ಎ ಮೀಸಲಾತಿಗಾಗಿ ಪಂಚಮಸಾಲಿ ಶ್ರೀಗಳಿಂದ ಅಖಂಡ 36 ದಿನಗಳವರೆಗೆ ಪಾದಯಾತ್ರೆ, ಬೃಹತ್ ಸಮಾವೇಷ, ಧರಣಿ ಸತ್ಯಾಗ್ರಹ ಹೀಗೆ ನಾನಾ ತರಹದ ಹೋರಾಟದ ಮೂಲಕ ಮೀಸಲಾತಿಗಾಗಿ ಹಕ್ಕೊತ್ತಾಯಕ್ಕಾಗಿ ಮನವಿ ಮಾಡಿಕೊಂಡರೂ ಸರಕಾರ ಇನ್ನೂವರೆಗೆ ಯಾವುದೆ ಭರವಸೆ ಕೂಡ ನೀಡದಿರುವುದು ವಿಷಾದನೀಯ ಹಾಗೂ ಮೀಸಲಾತಿಗಾಗಿ ನಡೆದ ಹೋರಾಟಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಅಭಿವೃದ್ದಿ ಸಮಿತಿ ಯುವ ಮುಖಂಡ ಈಶ್ವರ ಢವಳೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ …
Read More »ಭಾರತೀಯ ಸ್ಟೆಟ್ ಬ್ಯಾಂಕನಲ್ಲಿ ಅಂತರಾಷ್ಟಿಯ ಮಹಿಳಾ ದಿನ ಆಚರಣೆ
ಅಂತರಾಷ್ಟಿಯ ಮಹಿಳಾ ದಿನ ಆಚರಣೆ ಮೂಡಲಗಿ ಪಟ್ಟಣದ ಭಾರತೀಯ ಸ್ಟೆಟ್ ಬ್ಯಾಂಕನಲ್ಲಿ ಸೋಮವಾರಂದು ಕೇಕ ಕತ್ತರಿಸುವ ಮೂಲಕ ಅಂತರಾಷ್ಟಿಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ ಪ್ರತಿಭಾ ಶೇಟ್ಟಿ , ಡೆಪ್ಯುಟಿ ಮ್ಯಾನೇಜರ ಪರಮೇಶ ರೆಡ್ಡಿ ಅಸಿಸ್ಟಂಟ್ ಮ್ಯಾನೇಜರ ಸುಭಾಸ ಸ್ವೇತೆ ಹಾಗೂ ಅನೇಕರು ಹಾಜರಿದ್ದರು.
Read More »