Breaking News
Home / inmudalgi (page 309)

inmudalgi

ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು

ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಮೂಡಲಗಿ: ಕನ್ನಡದ ಉಳಿವಿಗೆ ಕನ್ನಡಿಗರು ಪ್ರತಿ ದಿನದ ವ್ಯವಹಾರ, ವ್ಯಾಪರ ಇತರೆ ಚಟುವಟಿಕೆಗಳಲ್ಲಿ ಕನ್ನಡವನ್ನೆ ಬಳಸಬೇಕು ಅನಿವಾರ್ಯ ಇದ್ದರೆ ಮಾತ್ರ ಇತರ ಭಾಷೆ ಬಳಸಬಹುದು. ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ …

Read More »

ಭುವನೇಶ್ವರಿ ವೇಷದಲ್ಲಿ ಗಮನಸೆಳೆದ ಆರೋಹಿ

ಆರೋಹಿ ನಾಡಗೌಡರ ಭುವನೇಶ್ವರಿ ವೇಷದಲ್ಲಿ ಗಮನಸೆಳೆದ ಆರೋಹಿ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಭಾನುವಾರ ಆಚರಿಸಿದ 65ನೇ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಡದೇವಿ ಭುವನೇಶ್ವರಿ ವೇಷದಲ್ಲಿ ಗಮನಸೆಳೆದಳು. ಆರೋಹಿ ಇಲ್ಲಿಯ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆ ನಿರ್ದೇಶಕ ರವಿ ಪಿ. ಸೋನವಾಲಕರ ಮತ್ತು ವಿದ್ಯಾ ಇವರ ಮೊಮ್ಮಗಳಾಗಿದ್ದು, ತಾಯಿ ಶೃತಿ ಮಗುವಿನ ವೇಷವನ್ನು ಸಿದ್ಧಗೊಳಿಸಿದ್ದರು.

Read More »

ಪುರಸಭೆ ಹಾಗೂ ತಹಶೀಲ್ದಾರ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ.

ಮೂಡಲಗಿ : ಸ್ಥಳೀಯ ಪುರಸಭೆ ಹಾಗೂ ತಹಶೀಲ್ದಾರ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ   ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ ಅವರು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ, ಉಪ ತಹಶೀಲ್ದಾರ ಎ.ಎಲ್.ಬಬಲಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಸಿಡಿಪಿಓ ವೈ.ಎಮ್.ಗುಜನಟ್ಟಿ ಪುರಸಭೆ ಸದಸ್ಯರಾದ ಶಿವು ಚಂಡಕಿ, ಅಬ್ದುಲಗಪಾರ ಡಾಂಗೆ, ಬಸು ಝಂಡೇಕುರಬರ, …

Read More »

ಶ್ರೀ ಮಹಾಲಕ್ಷ್ಮೀ ಸಹಕಾರಿ ವಾರ್ಷಿಕೋತ್ಸವ ಹಾಗು ಸತೀಶ ಕಡಾಡಿ ಸನ್ಮಾನ

ಶ್ರೀ ಮಹಾಲಕ್ಷ್ಮೀ ಸಹಕಾರಿ ವಾರ್ಷಿಕೋತ್ಸವ ಹಾಗು ಸತೀಶ ಕಡಾಡಿ ಸನ್ಮಾನ ಬೆಟಗೇರಿ: ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ.,ಕಲ್ಲೋಳಿ ಶಾಖೆ ಬೆಟಗೇರಿ ಇದರ 5 ನೇ ವಾರ್ಷಿಕೋತ್ಸವ ಸಮಾರಂಭ ಸೋಮವಾರ ನ-02 ರಂದು ಬೆಳಿಗ್ಗೆ 11-00 ಶಾಖಾ ಕಛೇರಿಯಲ್ಲಿ ನಡೆಯಲಿದೆ. ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಜ್ಯೊತಿ ಬೆಳಗಿಸುವರು. ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸತೀಶ ಕಡಾಡಿ ಅವರನ್ನು …

Read More »

“ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗು ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ”

“ಕನ್ನಡಮ್ಮನ ಗುಡಿಯಲಿ ಸದಾಕ್ಷರದ ಅರ್ಚನೆ ನಡೆಯಲಿ ತನು-ಮನಗಳೇ ಅದಕೆ ಎಣ್ಣೆ-ಪಣತಿಯಾಗಿರಲು ಷಡ್ಗುಣದ ಕನ್ನಡಗರ ಕೊರಳ ನುಡಿಗಳು ಮುತ್ತಿನ ತೋರಣವ ಕಟ್ಟಿವೆ ದಶದಿಕ್ಕುಗಳಿಗೆ ಬೆಳಗಿಹುದು ಬಾನ ತುಂಬ ಬೇಳಕು ಅದಕ್ಕೆ ಇಹುದು ಕನ್ನಡಮ್ಮನ ನೆಲದಲ್ಲಿ ನಿತ್ಯ ಕನ್ನಡೋತ್ಸವದ ಉತ್ಸಹ ಕನ್ನಡಿಗರ ಮನ-ಮನಗಳಿಲ್ಲಿ” ಮತ್ತೇ ರಾಜ್ಯೋತ್ಸವ ಬಂದಿದೆ, ಕನ್ನಡಿಗರಲ್ಲಿ ಸಂತಸ ತಂದಿದೆ, ಮಳೆಗಾಲದಂತೆ, ಚಳಿಗಾಲದಂತೆ, ದೀಪಾವಳಿಯಂತೆ, ಸಂಕ್ರಾoತಿಯoತೆ ಕನ್ನಡ ರಾಜ್ಯೋತ್ಸವ ಕೂಡ ಪತ್ರಿ ವರ್ಷ ಬರುತ್ತದೆ, ಕನ್ನಡ ಮನಸ್ಸುಗಳಲ್ಲಿ ಹೊಸ ಸಂಚಲನ ಮೂಡಿಸುತ್ತದೆ, …

Read More »

ಕುಲಗೋಡ ಪೋಲಿಸರಿಂದ ರಾಷ್ಟ್ರೀಯ ಏಕತಾ ದಿನ ಆಚರಣೆ ಹಾಗೂ 5 ಕಿಮೀ ಏಕತಾ ಓಟ, ವಿಚಾರ ಸಂಕೀರ್ಣ

ಕುಲಗೋಡ ಪೋಲಿಸರಿಂದ ರಾಷ್ಟ್ರೀಯ ಏಕತಾ ದಿನ ಆಚರಣೆ ಹಾಗೂ 5 ಕಿಮೀ ಏಕತಾ ಓಟ, ವಿಚಾರ ಸಂಕೀರ್ಣ  ಕುಲಗೋಡ; ಯುವಕರು ದೇಶದ ಏಕತೆಗೆ ಶ್ರಮಿಸಿದರೆ ಭಾರತ ಸುಭದ್ರವಾಗಿರುತ್ತದೆ. ಹಲವು ಭಾಷೆ-ಸಂಸ್ಕøತಿಗಳನ್ನು ಹೊಂದಿದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶ್ವದ ಗುರುವಾಗಲಿ ಎಂದು ಬೆಟಗೇರಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಅಭಿಪ್ರಾಯಿಸಿದರು. ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಮುಂಜಾನೆ ಕುಲಗೋಡ ಪೋಲಿಸ್ …

Read More »

ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಆದಕವಿ ಶ್ರೀ ವಾಲ್ಮೀಕಿ ಜಯಂತಿ

ಮೂಡಲಗಿ: ರಾಮಾಯಣ ಎಂಬ ಅತ್ಯದ್ಭುತ ಕಾವ್ಯವನ್ನು ರಚಿಸಿದ ಆದಕವಿ ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ಶನಿವಾರ ಅ.31 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಆದಕವಿ ಶ್ರೀ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಈರಣ್ಣ ಕಡಾಡಿ ಅವರು ಪೂಜೆ ಸಲ್ಲಿಸಿ ನಮಿಸಿದರು. ಈ ಸಂದಭದಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು ಆದಿಕವಿ ರಾಮಾಯಣದ ಮೂಲಕ ಸಾರ್ವಕಾಲಿಕ ಆದರ್ಶಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟು, ಅನಾದಿ ಕಾಲದಿಂದಲೂ …

Read More »

ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಗೋಕಾವಿ ನೆಲದ ವೈಭವವನ್ನು ಎತ್ತಿಹಿಡಿದಿದೆ – ನಾಗಪ್ಪ ಶೇಖರಗೋಳ

ಮೂಡಲಗಿ : ಬಯಲಾಟ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಗೋಕಾವಿ ನೆಲದ ವೈಭವವನ್ನು ಎತ್ತಿಹಿಡಿದಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಶುಕ್ರವಾರ ಸಂಜೆ ತಾಲೂಕಿನ ಅರಭಾವಿ ಪಟ್ಟಣದ ಬಯಲಾಟ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಶಾಸಕರ ಪರವಾಗಿ ಸತ್ಕರಿಸಿ ಅವರು ಮಾತನಾಡಿದರು. ಕಳೆದ ಮೂರ್ನಾಲ್ಕು …

Read More »

ಸೋಸೈಟಿಯ ಪ್ರಥಮ ವಾರ್ಷಿಕೋತ್ಸವದಲ್ಲಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸುಭಾಸ ಢವಳೇಶ್ವರ ಅವರನ್ನು ಸತ್ಕರಿಸಿ ಗೌರವಿಸಿದರು.

ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸುಭಾಸ ಢವಳೇಶ್ವರಿಗೆ ಸತ್ಕಾರ ಮೂಡಲಗಿ: ಸಹಕಾರಿ ಸಂಘಗಳು ಪ್ರಗತಿ ಹೊಂದಲು ಸೊಸಾಯಿಟಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ನಿಸ್ವಾರ್ಥ ಸೇವೆ ಬಹಳ ಮುಖ್ಯವಾಗಿದೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಹಾಗೂ ದಿ.ಮೂಡಲಗಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುಭಾಸ ಗಿ.ಢವಳೇಶ್ವರ ಹೇಳಿದರು. ಶುಕ್ರವಾರದಂದು ಪಟ್ಟಣದ ನಂದಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೋಸೈಟಿಯ ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಸೋಸಾಯಿಟಿಯ ಆಡಳಿತ ಮಂಡಳಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಈ …

Read More »

ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಪ್ರವಾದಿ ಮಹ್ಮದ ಪೈಗಂಬರು

ಮೂಡಲಗಿ: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಪ್ರವಾದಿ ಮಹ್ಮದ ಪೈಗಂಬರ ಅವರ ಹೋರಾಟದ ವಿಧಾನ,ಪ್ರಗತಿಯ ತಂತ್ರ,ಮನುಕುಲದ ಶ್ರೇಯಸ್ಸು ಬಯಸುವ ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಧರ್ಮ ಗುರು ಮೌಲಾನಾ ಮೊಹ್ಮದ ಶಫೀಕ ಆಜ್ಮಿ ಹೇಳಿದರು ಶುಕ್ರವಾರ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮಹ್ಮದ ಪೈಗಂಬರ ಜಯಂತಿ ನಿಮಿತ್ತ ಹಾಗೂ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗಾಗಿ ಸೇರಿದ ಸಮಾಜ ಬಾಂಧವರನನ್ನುದ್ದೇಶಿಸಿ ಮಾತನಾಡಿದ ಅವರು ಮನು ಕುಲಕ್ಕೆ ಮಾರಕವಾಗಿ ಪರಿಣಮಿಸಿದ ಕೊರೋನಾ ವೈರಸ್‍ನ್ನು ಹತೋಟಿಗೆ …

Read More »