Breaking News
Home / Recent Posts / ಬೆಟಗೇರಿ ನಿವೃತ್ತ ಸೈನಿಕ ರವಿ ದೇಯಣ್ಣವರ ಸ್ವಾಗತ ಮೆರವಣಿಗೆ ಕಾರ್ಯಕ್ರಮ

ಬೆಟಗೇರಿ ನಿವೃತ್ತ ಸೈನಿಕ ರವಿ ದೇಯಣ್ಣವರ ಸ್ವಾಗತ ಮೆರವಣಿಗೆ ಕಾರ್ಯಕ್ರಮ

Spread the love

ಬೆಟಗೇರಿ ನಿವೃತ್ತ ಸೈನಿಕ ರವಿ ದೇಯಣ್ಣವರ ಸ್ವಾಗತ ಮೆರವಣಿಗೆ ಕಾರ್ಯಕ್ರಮ

ಬೆಟಗೇರಿ:ದೇಶ ರಕ್ಷಣೆಯ ಸೈನಿಕ ಸೇವೆಯಿಂದ ನಿವೃತ್ತಿ ಹೊಂದಿ ಹುಟ್ಟೂರು ಬೆಟಗೇರಿ ಗ್ರಾಮಕ್ಕೆ ಆಗಮಿಸುತ್ತಿರುವ ನಿವೃತ್ತ ಯೋಧ ರವಿ ಈರಸಂಗಪ್ಪ ದೇಯಣ್ಣವರ ಅವರಿಗೆ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಮಾ.3ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ.
ಇಲ್ಲಿಯ ಅಶ್ವಾರೂಢ ಶ್ರೀ ಬಸವೇಶ್ವರ ವೃತ್ತದಿಂದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ಭಾರತಾಂಬೆಯ ಮೂರ್ತಿ ತನಕ ಭವ್ಯ ಸ್ವಾಗತ ಮೆರವಣಿಗೆ ನಡೆದ ಬಳಿಕ ಭಾರತಾಂಬೆಯ ಮೂರ್ತಿಗೆ ಪೂಜೆ, ಪುಷ್ಪಾರ್ಪನೆ, ನಿವೃತ್ತ ಸೈನಿಕ ರವಿ ದೇಯಣ್ಣವರ ಅವರಿಗೆ ಸನ್ಮಾನ, ಸಿಹಿ ವಿತರಣೆ ಜರುಗಲಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ನಿವೃತ್ತ ಸೈನಿಕರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯರು ಪಾಲ್ಗೊಳ್ಳಲಿದ್ದಾರೆ ಎಂದು ಬೆಟಗೇರಿ ಹಾಲಿ ಮತ್ತು ಮಾಜಿ ಸೈನಿಕರ ಬಳಗ ಪ್ರಕಟನೆಗೆ ತಿಳಿಸಿದೆ.
ನಿವೃತ್ತ ಸೈನಿಕ ರವಿ ದೇಯಣ್ಣವರÀ ಭಾರತೀಯ ಸೇನೆಗೆ ಸೇರುವ ಹಂಬಲದಿಂದ 1998ರಲ್ಲಿ ಭಾರತೀಯ ಭೂ ಸೇನೆಗೆ ಸೇರಿ, ಬೆಂಗಳೂರು ಎಂಇಜಿನಲ್ಲಿ ತರಬೇತಿ ಪಡೆದು, ಹಲವು ವರ್ಷಗಳ ಕಾಲ ದೇಶದ ವಿವಿಧ ಕಡೆಯಲ್ಲಿ 24 ವರ್ಷಗಳ ಕಾಲ ಸೈನಿಕನಾಗಿ ಭಾರತಾಂಬೆಯ ಸೇವೆ ಸಲ್ಲಿಸಿ, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳಿಂದ ಸೈ ಎನಿಸಿಕೊಂಡು, 2022 ಫೆ.28ರಂದು ಜಾನಸಿಯಿಂದ ಸೈನಿಕ ಸೇವೆಗೆ ವಿದಾಯ ಹೇಳಿದ್ದಾರೆ.
ಇಂದು ಸ್ವಗ್ರಾಮ ಬೆಟಗೇರಿಗೆ ಬರುತ್ತಿರುವ ನಿವೃತ್ತ ಯೋಧ ರವಿ ದೇಯಣ್ಣವರÀ ದೇಶ ಸೇವೆ ಇಂದಿನ ಯುವಕರಿಗೆ ಅನುಕರಣಿಯ. ನಿವೃತ್ತಿ ನಂತರ ವೈಚಾರಿಕ ನೆಲಗಟ್ಟಿನ ಮೇಲೆ ಸಾರ್ವಜನಿಕ ಬದುಕು ಸಾಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಅವರು ದೇಶ ಭಕ್ತಿ, ಪ್ರೇಮ, ಸೇವೆಗೆ ಅನಿಯಾಗುವಂತೆ ಇಂದಿನ ಯುವಕರಿಗೆ ಮಾದರಿ ವ್ಯಕ್ತಿತ್ವ ವಿಕಸನದ ಮಾರ್ಗದರ್ಶಕರಾಗಲಿ ಅಂಬುವುದು ಸ್ಥಳೀಯರ ಹಾರೈಕೆಯಾಗಿದೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ