ಮೂಡಲಗಿ: ಭಕ್ತಿ ಭಾವದಿಂದ ಸೇವೆ ಮಾಡುವುದರಿಂದ ನೆಮ್ಮದಿ ಸಾಧ್ಯವಾಗುತ್ತದೆ ಮಠ ಮಂದಿರಗಳು ಸತತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಇದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು. ರವಿವಾರ ಡಿ-02 ರಂದು ಶ್ರೀ ಶಿವಭೋಧರಂಗ ಸಂಸ್ಥಾನ ಮಠದ ನೂತನ ಶ್ರೀಗಳ ಪೀಠಾರೋಹಣ ಅಲಂಕರಿಸಿದ ಸಂದರ್ಭದಲ್ಲಿ ಶ್ರೀ ದತ್ತಾತ್ರೇಯಬೋಧ ಶ್ರೀಪಾದ ಬೋಧ ಸ್ವಾಮಿಜೀ ಹಾಗೂ ಶ್ರೀ ಶ್ರೀಧರ ಶ್ರೀಪಾದಬೋಧ ಸ್ವಾಮಿಜೀಗಳನ್ನು ಸತ್ಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು …
Read More »5ಕೆಜಿ250 ಗ್ರಾಂ ತೂಕದ ಗೆಣಸು.!
5ಕೆಜಿ250 ಗ್ರಾಂ ತೂಕದ ಗೆಣಸು.! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರೈತ ಪ್ರಕಾಶ ಈಶ್ವರ ಮೇಳೆಣ್ಣವರ ಅವರ ತೋಟದಲ್ಲಿ 5ಕೆಜಿ 250ಗ್ರಾಂ ತೂಕದ ಗೆಣಸು ಬೆಳೆದು ಆಶ್ಚರ್ಯ ಮೂಡಿಸಿದೆ. ಈ ಗೆಣಸು ನೋಡಿದವರು ಹುಬ್ಬೆರುಸುವಂತಾಗಿದೆ.
Read More »ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಬ್ಯಾಂಕ ಖಾತೆಗಳಿಗೆ ಇಂದು ಹಣ
ಮೂಡಲಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ದೇಶದ 10.09 ಕೋಟಿ ರೈತ ಬಂಧುಗಳಿಗೆ ರೂ.20,900 ಕೋಟಿ ರೂ ಗಳನ್ನು ರೈತರ ಬ್ಯಾಂಕ ಖಾತೆಗಳಿಗೆ ಇಂದು ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘೀಸಿದ್ದಾರೆ. ಶನಿವಾರ ಜ.01 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ …
Read More »ಸರ್ವರನ್ನು ಒಂದುಗೂಡಿಸಿ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಕೈಯಲ್ಲಿದೆ- ಸರ್ವೋತ್ತಮ ಜಾರಕಿಹೊಳಿ
ಮೂಡಲಗಿ: ಜಾನಪದ ಸಾಹಿತ್ಯದಲ್ಲಿ ಸಮಾಜ ಕಟ್ಟುವ ಶಕ್ತಿ ಇದೆ ಸರ್ವರನ್ನು ಒಂದುಗೂಡಿಸುವ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಕೈಯಲ್ಲಿದೆ ಎಂದು ಗೋಕಾಕ್ ಲಕ್ಷ್ಮಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು ಗುರ್ಲಾಪುರ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಹಾಗೂ ಗುರ್ಲಾಪುರ್ …
Read More »ಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಿ: ಸಂಜೀವ ಕೌಜಲಗಿ
ಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಿ: ಸಂಜೀವ ಕೌಜಲಗಿ ಮೂಡಲಗಿ: ಎಲ್ಲ ಕೂಲಿಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿ ವಹಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸಂಜೀವ ಕೌಜಲಗಿ ಹೇಳಿದರು. ತಾಲೂಕಿನ ಯಾದವಾಡ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಐಇಸಿ ಚಟುವಟಿಕೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೌಷ್ಠಿಕಾಂಶವುಳ್ಳ ಆಹಾರ …
Read More »ಮೂಡಲಗಿ ಶಿವಬೋಧರಂಗ ಮಠದಲ್ಲಿ ದತ್ತಾತ್ರೇಯಬೋಧ ಮತ್ತು ಶ್ರೀಧರಬೋಧರ ಪೀಠಾರೋಹಣ
ಮೂಡಲಗಿ ಶಿವಬೋಧರಂಗ ಮಠದಲ್ಲಿ ದತ್ತಾತ್ರೇಯಬೋಧ ಮತ್ತು ಶ್ರೀಧರಬೋಧರ ಪೀಠಾರೋಹಣ ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನೃಸಿಂಹವಾಡಿಯ ವೇದಮೂರ್ತಿ ಶ್ರೀ ಅವಧೂತ ಬೋರಗಾಂವಕರ ಅವರ ನೇತೃತ್ವದಲ್ಲಿ ಪೀಠಾರೋಹಣ ಧೀಕ್ಷಾ ಕಾರ್ಯಕ್ರಮವು ವಿಧಿವತ್ತಾಗಿ ನೆರವೇರಿತು. ಬೆಳಿಗ್ಗೆ ಕೆಳಗಿನಮಠದಲ್ಲಿ ಸನ್ನಿಧಿಗೆ ವಿಶೇಷ ಪೂಜೆಗಳು ನೆರವೇರಿದ ನಂತರ ಮೇಲಿನಮಠದಲ್ಲಿ ಸೌರಯಾಗ ಹೋಮದೊಂದಿಗೆÉ ಶ್ರೀಮಠದ ಸಂಪ್ರದಾಯದಂತೆ ಮತÀ್ತು ವಿವಿಧ ವಿಧಿವಿಧಾನಗಳೊಂದಿಗೆ ಉಭಯ ಶ್ರೀಗಳಿಗೆ …
Read More »ಉಜ್ಜಯನಿಪೀಠದ ಜಗದ್ಗುರು ಬೆಟಗೇರಿ ವೀರಭದ್ರೇಶ್ವರ ದೇವರ ದೇವಾಲಯಕ್ಕೆ ಭೇಟಿ
ಉಜ್ಜಯನಿಪೀಠದ ಜಗದ್ಗುರು ಬೆಟಗೇರಿ ವೀರಭದ್ರೇಶ್ವರ ದೇವರ ದೇವಾಲಯಕ್ಕೆ ಭೇಟಿ ಬೆಟಗೇರಿ:ಉಜ್ಜಯನಿಪೀಠದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಭಗವತ್ಪಾದರು ಡಿ.27ರಂದು ಬೆಟಗೇರಿ ಗ್ರಾಮದ ವೀರಭದ್ರೇಶ್ವರದೇವರ ದೇವಾಲಯಕ್ಕೆ ಭೇಟಿ ನೀಡಿ, ಸ್ಥಳೀಯ ವೀರಭದ್ರೇಶ್ವರ ದೇವರ ದರ್ಶನ ಮಾಡಿದರು. ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ, ಸ್ಥಳೀಯ ವೀರಭದ್ರೇಶ್ವರದೇವರ ದೇವಾಲಯ ಅರ್ಚಕ ಸಂಗಯ್ಯ ಹಿರೇಮಠ, ವಿಜಯ ಹಿರೇಮಠ, ವೀರಭದ್ರೇಶ್ವರದೇವರ ಪುರವಂತರು, ಭಕ್ತರು, ಗಣ್ಯರು, …
Read More »ಅರಭಾವಿ, ಕಲ್ಲೊಳ್ಳಿ, ನಾಗನೂರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರ ಭರ್ಜರಿ ಜಯ. ಸಂಸದ ಈರಣ್ಣ ಕಡಾಡಿಯವರಿಗೆ ತೀವ್ರ ಮುಖಭಂಗ
ಮೂಡಲಗಿ : ಕಳೆದ ಸೋಮವಾರದಂದು ಜರುಗಿದ ತಾಲೂಕಿನ ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರೇ ಭರ್ಜರಿ ಜಯ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸ್ವ ಗ್ರಾಮದಲ್ಲಿಯೇ …
Read More »ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವದು ತುಂಬಾ ಅವಶ್ಯವಾಗಿದೆಯಲ್ಲದೆ- ಆನಂದ ಹಮ್ಮನವರ
ಮೂಡಲಗಿ : ಇಂದಿನ ಅಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವದು ತುಂಬಾ ಅವಶ್ಯವಾಗಿದೆಯಲ್ಲದೆ ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವದೂ ಕೂಡ ಅದ್ಯಯನದ ಮಹತ್ವದ ಅಂಶವಾಗಿದೆ ಎಂದು ವಡೇರಹಟ್ಟಿಯ ಸಮೂಹ ಸಂಪನ್ಮೂಲ ವ್ಯಕ್ತಿ ಆನಂದ ಹಮ್ಮನವರ ಹೇಳಿದರು. ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರ್ರಾಥಮಿಕ ಶಾಲೆಯಲ್ಲಿ ನಡೆದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳುವದರ ಮುಖಾಂತರ ವಿದ್ಯಾರ್ಥಿಗಳಿಗೆ …
Read More »ಡಿ.31 ರಂದು ಮೂಡಲಗಿ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ
ಡಿ.31 ರಂದು ಮೂಡಲಗಿ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ ಮೂಡಲಗಿ: ಪಟ್ಟಣ ಆರಾಧ್ಯ ದೈವ ಶ್ರೀ ಶಿವಬೋಧರಂಗ ಸ್ವಾಮಿ ಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ ದತ್ತಾತ್ರೆಯಬೋಧ ಶ್ರೀಪಾದಬೋಧ ಸ್ವಾಮಿಜಿ ಹಾಗೂ ಶ್ರೀಧರ ಶ್ರೀಪಾದಬೋಧ ಸ್ವಾಮಿಗಳ ಹಾಗೂ ನವೀಕರಣಗೊಂಡ ಪಟ್ಟಣದ ಶ್ರೀಗಳ ಮೇಲಿನ ಮಠದ ಗೃಹ ಪ್ರವೇಶ ಸಮಾರಂಭ ಶುಕ್ರವಾರ ಡಿ.31 ರಂದು ಸರಳ ರೀತಿಯಲ್ಲಿ ಜರುಗಲಿದೆ. ಶುಕ್ರವಾರದಂದು ಮೇಲಿನ ಮಠದಲ್ಲಿ ಪೀಠಾರೋಹಣ ದೀಕ್ಷೆಯುನ್ನು ನರಸಿಂಹವಾಡಿಯ ವೇದಮೂರ್ತಿ ಶ್ರೀ ಅವಧೂತ ಬೋರಗಾಂವಕರ …
Read More »