Breaking News
Home / ತಾಲ್ಲೂಕು / ಕೊರೋನಾ ಸೈನಿಕರಿಗೆ ಅಭಿನಂದನಾ ಪತ್ರ

ಕೊರೋನಾ ಸೈನಿಕರಿಗೆ ಅಭಿನಂದನಾ ಪತ್ರ

Spread the love

ಹಳ್ಳೂರ12: ಕೋವಿಡ್ 19 ಕೊರೋನಾ ಮಹಾಮಾರಿ ವಿರುದ್ಧ ಹಗಲಿರುಳು ಜೀವದ ಹಂಗನ್ನು ತೊರೆದು ದೇಶ ಸೇವೆಯೇ ಈಶ ಸೇವೆಯೆಂದು ಶ್ರಮಿಸುತ್ತಿರುವ ತಮ್ಮ ಸೇವೆ ಸಹನೆ ಸಾಹಸಗಳಿಗೆ ಬೆಲೆ ಕಟ್ಟಲಾಗದು.ತಮ್ಮ ಕುಟುಂಬ ಜೀವದ ಹಂಗು ಬಿಟ್ಟು ಶ್ರಮಿಸುತ್ತಿರುವ  ಕೊರೋನಾ ಸೈನಿಕರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಶ್ರೀ ಭಾಲಚಂದ್ರ ಜಾರಕಿಹೊಳಿ  ಅರಭಾಂವಿ ಶಾಸಕರು ಹಾಗೂ ಕೆ ಎಮ್ ಎಫ್ ಅಧ್ಯಕ್ಷರು. ಹಾಗೂ ನಳಿನ್ ಕುಮಾರ ಕಟೀಲ್ ಲೋಕಸಭಾ ಸದಸ್ಯರು ಹಾಗೂ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರು ಅಭಿನಂದನಾ ಪತ್ರವನ್ನು ಹಳ್ಳೂರ ಗ್ರಾಮ ಪಂಚಾಯತ್ ತಲುಪಿಸಿದ್ದು ಇಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಹಣಮಂತ ತಾಳಿಕೋಟಿ ಯವರು ಕೊರೋನಾ ಸೈನಿಕರಿಗೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನಾ ಪತ್ರವನ್ನು ನೀಡಿದ ನಂತರ ಮಾತನಾಡಿ ಕೊರೋನಾ ರೋಗವು ನಮ್ಮ ಗ್ರಾಮದಲ್ಲಿ ಹರಡದಂತೆ ನಾವೆಲ್ಲರೂ ಕಾರ್ಯನಿರ್ವಹಿಸೋಣಾ ಜನರಿಗೆ ಮನೆ ಬಿಟ್ಟು ಹೊರಗೆ ಬರದಂತೆ ಜಾಗೃತಿ ನೀಡಿ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಯ್ದು ಕೊಳ್ಳುವದೇ ಇದಕ್ಕೆ ಪರಿಹಾರ  ಎಂದು ಸಾರ್ವಜನಿಕರಿಗೆ ತಿಳಿ ಹೇಳೋಣಾ ಎಂದರು.ಇದೆ ಸಂದರ್ಭದಲ್ಲಿ ಹಳ್ಳೂರ ಬಿಟ್ ಪೊಲೀಸ್ ಏನ್ ಎಸ್ ಒಡೆಯರ. ನಾಗಪ್ಪ ಆರೇರ. ಗಿರಮಲ್ಲ ಸಂತಿ.ಕೊರೋನಾ ಸೈನಿಕ ಹಾಗೂ  ಸಂಗಪ್ಪ ಪಟ್ಟಣಶೆಟ್ಟಿ. ಕಿಶೋರ ಗಣಾಚಾರಿ. ಗಂಗಪ್ಪ ಡಬ್ಬಣ್ಣವರ ಮಹಾಂತೇಶ ಕುಂದರಗಿ.ಆಶಾ ಕಾರ್ಯಕರ್ತೆ ಮುಖಂಡ ವಿದ್ಯಾ ರಡರಟ್ಟಿ.ಅಂಗನವಾಡಿ ಕಾರ್ಯಕರ್ತೆ ಗಂಗು ಸಂತಿ. ಶಾಂತಾ ನೇಸೂರ. ಗೀತಾ ಹರಿಜನ. ಸುಜಾತಾ ಕೂಲಿಗೋಡ.ಗಂಗವ್ವ  ಪಾಲಭಾಂವಿ ಸರೋಜಿನಿ ಮುಗಳಖೋಡ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ