inmudalgi
ಆಗಷ್ಟ್ 25, 2024 Recent Posts, ತಾಲ್ಲೂಕು, ಬೆಳಗಾವಿ
ಸರಕಾರಿ ಶಾಲೆಗಳಲ್ಲಿ ಕಲಿತು ಬದುಕು ಕಟ್ಟಿಕೊಳ್ಳಿ- ಗಿರೆಣ್ಣವರ ಮೂಡಲಗಿ: ಸರಕಾರಿ ಶಾಲೆಯಲ್ಲಿಯ ಶಿಕ್ಷಣ ಇಲಾಖೆಯ ಸೌಲಭ್ಯಗಳನ್ನು ಹಾಗೂ ಅನುಕೂಲತೆಗಳನ್ನು ಉಪಯೋಗಿಸಿಕೊಂಡು ಪಾಲಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮುಖ್ಯಾದ್ಯಾಪಕ ಎ.ವ್ಹಿ ಗಿರೆಣ್ಣವರ ಹೇಳಿದರು. ಅವರು ಬೆಳಗಾವಿ ಜಿ.ಪಂ. ಕಾರ್ಯನಿರ್ವಾಹಕರ ಆದೇಶದಂತೆ ನಡೆದ ತುಕ್ಕಾನಟ್ಟಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆ ಸಂಘಟಿಸಿ ಮಾತನಾಡಿ, ಸರಕಾರ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಕೌಟುಂಬಿಕ ಸಮಸ್ಯೆಗಳಿಗೆ …
Read More »
inmudalgi
ಆಗಷ್ಟ್ 24, 2024 Recent Posts, ತಾಲ್ಲೂಕು, ಬೆಳಗಾವಿ
ಓದುವ ಹವ್ಯಾಸ ರೂಡಿಸಿಕೊಳ್ಳಬೇಕು-ಡಾ.ಶಂಕರ ತೇರದಾಳ ಮೂಡಲಗಿ: ವಿದ್ಯಾರ್ಥಿಗಳು ಓದುವ ಹವ್ಯಾಸ, ಕೇಳುವ ಮನೋಭಾವ, ಬರೆಯುವ ಅಭಿಲಾಸೆ, ಮಾತನಾಡುವ ಕಲೆಯನ್ನು ರೂಡಿಸಿಕೊಂಡು ಸಮಾಝಕ್ಕೆ ಪೂರಕವಾದ ವ್ಯಕ್ತಿತ್ವನ್ನು ರೂಪಿಸಿಕೊಳ್ಳ ಬೇಕು ಎಂದು ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಶಂಕರ ತೇರದಾಳ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕೋತ್ಸ ಸಮಾರಂಭದ ಮುಖ್ಯ ಅತಿಥಿಸ್ಥಾನದಿಂದ ಮಾತನಾಡಿದರು. ಕರ್ನಾಟಕ …
Read More »
inmudalgi
ಆಗಷ್ಟ್ 24, 2024 Recent Posts, ತಾಲ್ಲೂಕು, ಬೆಳಗಾವಿ
*ಸಿಎಂ ಭೇಟಿ ಫಿಕ್ಸ್* *ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ* *ಮುಖ್ಯಮಂತ್ರಿ ಸಿದ್ಧರಾಮಯ್ಯ ೨೬ ರಂದು ಕಳ್ಳಿಗುದ್ದಿ, ಕೌಜಲಗಿ, ಯಾದವಾಡ ಮತ್ತು ಕಲ್ಲೊಳಿಗೆ ಆಗಮನ.* *ಸಿಎಂ ಸಿದ್ಧರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕೌಜಲಗಿಯಲ್ಲಿ ಭರದ ಸಿದ್ಧತೆ.* ಗೋಕಾಕ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬರುವ ಸೋಮವಾರದಂದು ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಪ್ರವಾಸ ಕೈಗೊಂಡಿದ್ದು, ನೂತನವಾಗಿ ನಿರ್ಮಾಣಗೊಂಡಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರದಂದು ಬೆಂಗಳೂರಿನಿದ ವಿಶೇಷ ವಿಮಾಣದ ಮೂಲಕ …
Read More »
inmudalgi
ಆಗಷ್ಟ್ 23, 2024 Recent Posts, ತಾಲ್ಲೂಕು, ಬೆಳಗಾವಿ
*ಆಧ್ಯಾತ್ಮದಿಂದ ದುಃಖ ನಿವೃತ್ತಿಯಾಗುವದು* ಹೂಲಿಕಟ್ಟಿ-ಶಿವಾಪೂರ : ಗೋಕಾಕ ತಾಲೂಕಿನ ಸುಕ್ಷೇತ್ರ ಹೂಲಿಕಟ್ಟಿ ಗ್ರಾಮದ ಶ್ರೀ ಬಸವ ಆಶ್ರಮದಲ್ಲಿ ಶ್ರಾವಣ ಮಾಸದ ಆಧ್ಯಾತ್ಮಿಕ ಸತ್ಸಂಗ ಕಾರ್ಯಕ್ರಮಗಳು ಜರುಗಿದವು. ಹೂಲಿಕಟ್ಟಿಯ ಭಜನಾ ಮಂಡಳಿ ಹಾಗೂ ಶ್ರೀ ಅಡವಿಸಿದ್ದೇಶ್ವರ ಭಜನಾ ಮಂಡಳಿ ಶಿವಾಪೂರ ಹ, ಶ್ರೀ ದುರ್ಗಾದೇವಿ ಭಜನಾ ಮಂಡಳಿ ಶಿವಾಪೂರ ಹ ಹಾಗೂ ವಿವಿಧ ಗ್ರಾಮಗಳ ಕಲಾವಿದರಿಂದ ಭಜನಾ ಕಾರ್ಯಕ್ರಮಗಳು ನಡೆದವು. ಮುಂಜಾನೆ ರುದ್ರಾಭಿಷೇಕ, ಹಾಗೂ ವರದ ಶಂಕರ ಪೂಜೆ ಶಿವಾಪೂರದ ವೇ. …
Read More »
inmudalgi
ಆಗಷ್ಟ್ 23, 2024 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ ತಾಲ್ಲೂಕು ಬಣಜಿಗ ಸಂಘದ 16ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸಭ್ಕಾರ ಸಮಾರಂಭದಲ್ಲಿ ಬಣಜಿಗ ಸಮಾಜದ ಹಿರಿಯ ವ್ಯಕ್ತಿಗಳನ್ನು ಸಂಸದರಾದ ಜಗದೀಶ ಶೆಟ್ಟರ ಅವರು ಸನ್ಮಾನಿಸಿದರು. ದತ್ತಾತ್ರೇಯಬೋಧ ಸ್ವಾಮಿಗಳು ಚಿತ್ರದಲ್ಲಿರುವರು. ಮೂಡಲಗಿ: ‘ಲಿಂಗಾಯತ ಎಲ್ಲ ಉಪಪಂಗಡಗಳು ಬೆಳೆಯುವುದರೊಂದಿಗೆ ಇಡೀ ವಿಶ್ವಮಟ್ಟದಲ್ಲಿ ಲಿಂಗಾಯತ ಸಮಾಜ ಒಂದೇ ಎನ್ನುವ ಬದ್ಧತೆ ಹೊಂದಬೇಕು’ ಎಂದು ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಹೇಳಿದರು. ಮೂಡಲಗಿಯ ಕೆ.ಎಚ್. ಸೋನವಾಲ್ಕರ್ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲ್ಲೂಕಾ ಬಣಜಿಗ ಸಮಾಜ …
Read More »
inmudalgi
ಆಗಷ್ಟ್ 23, 2024 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ- ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ರೇಣುಕಾ ಸಂಜು ಮಾದರ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜಶ್ರೀ ಅಪ್ಪಯ್ಯ ಗಂಗನ್ನವರ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ಸಭಾ ಭವನದಲ್ಲಿ ಜರುಗಿದ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಿದ್ದರಿಂದ ಉಭಯ …
Read More »
inmudalgi
ಆಗಷ್ಟ್ 21, 2024 ಪ್ರಕಟಣೆ
ನಿಧನ ವಾರ್ತೆ ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದ ನಿವಾಸಿ ಶ್ರೀಮತಿ ಅನ್ನಪೂರ್ಣ ಲಕ್ಷ್ಮಣ ನಾಯಿಕ(80) ಮಂಗಳವಾರದಂದು ನಿಧನರಾದರು. ಮೃತರು ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ.
Read More »
inmudalgi
ಆಗಷ್ಟ್ 21, 2024 ಪ್ರಕಟಣೆ
ನಿಧನ ವಾರ್ತೆ ಮೂಡಲಗಿ: ಪಟ್ಟಣದ ಹಿರಿಯರಾದ ಪಾಂಡಪ್ಪ ರಂಗಪ್ಪ ಸೋನವಾಲಕರ(74) ಬುಧವಾರದಂದು ಹೃದಯಘಾತದಿಂದ ನಿಧನರಾದರು. ಮೃತರು ಇಬ್ಬರು ಪುತ್ರ, ಓರ್ವ ಪುತ್ರಿ ಮತ್ತು ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ.
Read More »
inmudalgi
ಆಗಷ್ಟ್ 20, 2024 Recent Posts, ತಾಲ್ಲೂಕು, ಬೆಳಗಾವಿ
ಘಟಪ್ರಭಾ: ನಮ್ಮ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಶಿಕ್ಷಣ ಕಲಿತರೇ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶವಿದ್ದು, ವಿದ್ಯಾರ್ಥಿಗಳು ಸ್ಮಾರ್ಟ್ ಕ್ಲಾಸ್ ಉಪಯೋಗವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಂಗಳವಾರ ಆ 20 ರಂದು ಮಲ್ಲಾಪೂರ ಪಿ.ಜಿ ಪಟ್ಟಣದ ಪಿ.ಎಂ ಶ್ರೀ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ …
Read More »
inmudalgi
ಆಗಷ್ಟ್ 20, 2024 Recent Posts, ತಾಲ್ಲೂಕು, ಬೆಳಗಾವಿ
ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಗಳ ತರಬೇತಿ ಶಿಬಿರ ಉದ್ಘಾಟನೆ ಮೂಡಲಗಿ: ಕೃಷಿ ಪರಿಕರ ಮಾರಟಾಗಾರರು ವ್ಯಾಪಾರ ಮನೋಬಾವ ಬಿಟ್ಟು ಸೇವಾ ಮನೋಬಾವದ ಕಡೆ ತಿರುಗಿ ಮತ್ತು ರೈತರಿಗೆ ಸರಿಯಾದ ಸಲಹೆಗಳನ್ನು ನೀಡಬೇಕು ಮತ್ತು ಆಧುನಿಕತೆ, ಯಾಂತ್ರಿಕತೆಯಿಂದ ಭೂಮಿ ಫಲವತ್ತತೆಯು ಕಡಿಮೆ ಆಗುತ್ತಿದೆ ಆದ್ದರಿಂದ ಮಣ್ಣಿನ ಸಂರಕ್ಷಣೆ ಕಡೆ ಗಮನ ಹರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕೆಂದು ಎಂದು ತಿಳಿಸಿದರು ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಪ್ರಾಧ್ಯಪಕರು ಹಾಗೂ ದೇಶಿ ರಾಜ್ಯ …
Read More »