inmudalgi
ಮೇ 3, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ ಮೂಡಲಗಿ: ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮದ ರಂಜಾನ್ ಹಬ್ಬವನ್ನು ಆಚರಿಸಿದರು. ಧರ್ಮಗುರುಗಳಾದ ಕೌಸರ ರಜಾ ಅವರು ಮಂತ್ರ ಪಠಣ ಮಾಡಿ ರಂಜಾನ್ ಹಬ್ಬದ ವೈಶಿಷ್ಟ್ಯದ ಕುರಿತು ಪ್ರವಚಣ ಹೇಳಿ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕುಬೇಕು ಎಂದು ಸಂದೇಶ ಸಾರಿದರು. ಬಾಜಾರ ಮಸೀದಿಯಿಂದ ಪ್ರಮುಖ ವೃತ್ತಗಳಲ್ಲಿ ಅಲ್ಲಾಹನ ನಾಮಸ್ಮರಣೆಯೊಂದಿಗೆ ಮೆರವಣಿಗೆ ಸಾಗಿ ಜಾಮೀಯಾ ಮಸೀದಿ ತಲುಪಿ ಪ್ರಾರ್ಥನೆ ಸಲ್ಲಿಸಿ ಪರಸ್ಪರರು …
Read More »
inmudalgi
ಮೇ 2, 2022 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವ ಅಭಿಮಾನಿ ಬಳಗದ ಸಹಯೋಗದಲ್ಲಿ ಬಸವ ಜಯಂತಿಯ ಆಚರಣೆ ಕಾರ್ಯಕ್ರಮ ಇದೇ ಮಂಗಳವಾರ ಮೇ.3ರಂದು ಅದ್ಧೂರಿಯಾಗಿ ನಡೆಯಲಿದೆ. ಗ್ರಾಮದ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿ ಮುಂಜಾನೆ 8 ಗಂಟೆಗೆ ಬಸವಣ್ಣನವರ ಅಶ್ವಾರೊಢ ಮೂರ್ತಿಗೆ ಮಹಾಪೂಜೆ, ಪುಷ್ರ್ಪಾಪನೆ, ಷಟಸ್ಥಲ್ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಷಟಸ್ಥಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಂಜಾನೆ 10 ಗಂಟೆಗೆ …
Read More »
inmudalgi
ಮೇ 1, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ‘ಮೇಲು, ಕೀಳು ಎಂಬ ಭೇದ ತೀವ್ರವಾಗಿದ್ದ 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನ, ಸಂದೇಶಗಳ ಮೂಲಕ ಸಮಾಜ ಶುದ್ಧಗೊಳಿಸಿದ ಮಹಾನ ಮಾನವತಾವಾದಿ’ ಎಂದು ಕನೇರಿಮಠದ ಶ್ರೀ ಸಿದ್ಧಿಗಿರಿಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಕಲ್ಲೋಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ವೃತ್ತದಲ್ಲಿ ಆಶ್ವಾರೂಢ ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಬಸವಣ್ಣನವರು ಕಾಯಕನಿಷ್ಠತೆ, ಸಮಾನತೆ, ಸಮಬಾಳ್ವೆ ಸಾರಿದ ದಾರ್ಶನಿಕ ಪುರುಷ ಎಂದರು. …
Read More »
inmudalgi
ಮೇ 1, 2022 Recent Posts, ತಾಲ್ಲೂಕು, ಬೆಳಗಾವಿ
ಗಿಡ ನೆಟ್ಟು ಕಾರ್ಮಿಕರ ದಿನಾಚರಣೆ ಆಚರಣೆ ಮೂಡಲಗಿ: ಇಲ್ಲಿನ ಈರಣ್ಣ ನಗರದ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು 20 ಗಿಡ ನೆಟ್ಟು ವಿಭಿನ್ನವಾಗಿ ಕಾರ್ಮಿಕ ದಿನಾಚರಣೆ ಆಚರಿಸಿದರು ಶಿಕ್ಷಣ ಸಂಯೋಜಕ ಕರಿಬಸವರಾಜ ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತನಂತೆ ನಿತ್ಯ ಶ್ರಮಪಡುವ ಕಾರ್ಮಿಕರ ಸೇವೆ ಅನನ್ಯವಾಗಿದೆ.ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ …
Read More »
inmudalgi
ಮೇ 1, 2022 Recent Posts, ತಾಲ್ಲೂಕು, ಬೆಳಗಾವಿ
ಬಸವ ಜಯಂತಿ ಆಚರಣೆ ಮೂಡಲಗಿ: ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ರುದ್ರಾಭೀಷೇಕ ಹಾಗೂ ಸಾಯಂಕಾಲ 3 ಗಂಟೆಗೆ ಬಸವಣ್ಣನವರ ಭಾವಚಿತ್ರದೊಂದಿಗೆ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಎತ್ತುಗಳ ಮೆರವಣಿಗೆಯು ಸಕಲ ವಾದ್ಯಮೇಳದೊಂದಿಗೆ ನೆರವೇರುವುದು ಎಂದು ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್ ಕಮೀಟಿ ಅಧ್ಯಕ್ಷ ಎಸ್ ಜಿ ಢವಳೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »
inmudalgi
ಏಪ್ರಿಲ್ 30, 2022 Recent Posts, ತಾಲ್ಲೂಕು, ಬೆಳಗಾವಿ
ಬಸವ ಜಯಂತಿ-ರಂಜಾನ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು:ಪಿಎಸ್ಐ ಗೋವಿಂದಗೌಡ ಪಾಟೀಲ ಬೆಟಗೇರಿ: ಬಸವ ಜಯಂತಿ ಹಾಗೂ ರಂಜಾನ ಹಬ್ಬವನ್ನು ಸ್ಥಳೀಯ ಸಮಾಜ ಭಾಂಧವರು ಸೌಹಾರ್ದತೆ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್ಐ ಗೋವಿಂದಗೌಡ ಪಾಟೀಲ ಹೇಳಿದರು. ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಬಸವ ಜಯಂತಿ ಹಾಗೂ ರಂಜಾನ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಏ.30 ರಂದು ನಡೆದ ಶಾಂತಿಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, …
Read More »
inmudalgi
ಏಪ್ರಿಲ್ 30, 2022 Recent Posts, ತಾಲ್ಲೂಕು, ಬೆಳಗಾವಿ
ಅಂಜುಮನ್ ಕಮಿಟಿಯಿಂದ ಕಡು ಬಡವರಿಗೆ ರಮಜಾನ ಕಿಟ್ ವಿತರಣೆ ಮೂಡಲಗಿ: ಪರಸ್ಪರರು ಸಂಭ್ರಮದಿಂದ ರಮಜಾನ ಹಬ್ಬ ಆಚರಿಸುವುದರ ಜೊತೆಗೆ ಕಡು ಬಡವರನ್ನು ಗುರುತಿಸಿ ಅವರಿಗೆ ನೆರವು ಒದಗಿಸುವ ಕಾರ್ಯವನ್ನು ಅಂಜುಮನ್ ಎ ಇಸ್ಲಾಂ ಕಮೀಟಿಯು ಪ್ರತಿ ವರ್ಷ ಮಾಡುತ್ತಿದೆ ಎಂದು ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು. ರಮಜಾನ್ ಹಬ್ಬದ ಪ್ರಯುಕ್ತ 50 ಕಡು ಬಡವರಿಗೆ ರಮಜಾನ್ ಹಬ್ಬಕ್ಕಾಗಿಯೇ ತಯಾರಿಸಿದ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಯಾವ …
Read More »
inmudalgi
ಏಪ್ರಿಲ್ 30, 2022 Recent Posts, ತಾಲ್ಲೂಕು, ಬೆಳಗಾವಿ
ಪಾಶ್ಛಾಪೂರ ಅವರಿಂದ ರಮಜಾನ್ ಇಫ್ತಾರ್ ಕೂಟ ಮೂಡಲಗಿ: ಇಲ್ಲಿನ ಮುಖಂಡ ಹಾಗೂ ಗಣ್ಯರಾದ ಮಲೀಕ ಪಾಶ್ಚಾಪೂರ ಮತ್ತು ಅವರ ಸಹೋದರರು ತಮ್ಮ ವಿದ್ಯಾ ನಗರದ ನಿವಾಸದಲ್ಲಿ ರಂಜಾನ್ ಅಂಗವಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ವೇಳೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಕಾರ್ಯದರ್ಶಿ ನಾಗಪ್ಪ ಸೇಖರಗೋಳ ಹಾಗೂ ನಿಂಗಪ್ಪ ಕುರಬೇಟ ಅವರನ್ನು ಸತ್ಕರಿಸಲಾಯಿತು. ಈ ಸಂರ್ಭದಲ್ಲಿ ಮಾತನಾಡಿದ ಅವರು ರಂಜಾನ್ ಹಬ್ಬವು ಶಾಂತಿಯ ಸಂಕೇತವಾಗಿದೆ ರಂಜಾನ್ ಕಠಿನ ಉಪವಾಸ ವೃತವು …
Read More »
inmudalgi
ಏಪ್ರಿಲ್ 30, 2022 Recent Posts, ತಾಲ್ಲೂಕು, ಬೆಳಗಾವಿ
ಶ್ರೀನಿವಾಸ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟನೆ ಮೂಡಲಗಿ: ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಮುಂದಿನ ವರ್ಷದಿಂದ ಕಣ್ಣಿನ ತಪಾಸಣೆ ಜೋತೆಗೆ ಹೃದಯ ರೋಗ ಮತ್ತು ಮಧು ಮೇಹ ಕಾಯಿಲ್ಲೆಯ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ಶ್ರೀನಿವಾಸ ಶಾಲೆಯ ಚೇರಮನ್ನ ಡಾ. ರಂಗಣ್ಣಾ ಸೋನವಾಲ್ಕರ ಹೇಳಿದರು. ಪಟ್ಟಣದ ಶ್ರೀನಿವಾಸ ಶಾಲೆಯಲ್ಲಿ ದಿ.ನಿಂಗಪ್ಪ ರ.ಸೋನವಾಲಕರ ಅವರ ಸ್ಮರಣಾರ್ಥ …
Read More »
inmudalgi
ಏಪ್ರಿಲ್ 29, 2022 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗೋಕಾಕ ತಾಲೂಕಿನ ಕಳ್ಳಿಗುದ್ದಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಾಳಪ್ಪ ಗೌಡರ ಅವರು ಅವಿರೂಧವಾಗಿ ಆಯ್ಕೆಯಾಗಿದ್ದಾರೆ. ಸಮೀಪದ ಕಳ್ಳಿಗುದ್ದಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷರ ಆಯ್ಕೆಗಾಗಿ ಏ.28ರಂದು ನಡೆದ ಚುನಾವಣೆಯಲ್ಲಿ ಇಲ್ಲಿಯ ಗ್ರಾಪಂ ನೂತನ ಅಧ್ಯಕ್ಷರಾಗಿ ಬಾಳಪ್ಪ ಗೌಡರ ಅವರು ಅವಿರೂಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೋಕಾಕ ಜಿಆರ್ಬಿಸಿ ಉಪವಿಭಾಗ ನಂ-7ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ಬಿರಾದಾರ ತಿಳಿಸಿದರು. …
Read More »