Breaking News

TimeLine Layout

ಅಕ್ಟೋಬರ್, 2022

  • 10 ಅಕ್ಟೋಬರ್

    ವಿದ್ಯುತ್ ವ್ಯತ್ಯಯ

    ನಾಳೆ ವಿದ್ಯುತ್ ವ್ಯತ್ಯಯ ಮೂಡಲಗಿ: ತಾಲೂಕಿನ ಹಳ್ಳೂರ ವಿದ್ಯುತ್ ವಿತರಣಾ ಉಪ ಕೇಂದ್ರದ ಕಮಲದಿನ್ನಿಗೆ ಪೂರೈಕೆ ಯಾಗುತ್ತಿರುವ ಹಳ್ಳೂರ ಗ್ರಾಮದ 250ಕೆವಿಎ ವಿದ್ಯುತ್ ಪರಿವರ್ತಕವನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಕೈಗೊಳ್ಳವರಿದ್ದು, ಅ.11 ಮತ್ತು 12 ರಂದು ಮುಂಜಾನೆ 10ಗಂಟೆಯಿಂದ ಸಂಜೆ ಗಂಟೆಯವರೆಗೆ ಹಳ್ಳೂರ, ಶಿವಾಪೂರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ, ರಂಗಾಪೂರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸಬೇಕು ಎಂದು ಮೂಡಲಗಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್ ಎಸ್ …

    Read More »
  • 10 ಅಕ್ಟೋಬರ್

    ಇಲೆಕ್ಟ್ರಿಕಲ್ ಬೈಕ್ ತಯಾರಿಸಿದ ಅರಭಾವಿ ಮಠದ ಯುವಕ ಅಮಿತ ಬಿಲಕುಂದಿ ಅಮಿತಗೆ ಭೇಷ್ ಎಂದು ಬೆನ್ನು ತಟ್ಟಿದ ಶಾಸಕ ಬಾಲಚಂದ್ರ ಜಾರಕಿಹೊಳಿ

    ಇಲೆಕ್ಟ್ರಿಕಲ್ ಬೈಕ್ ತಯಾರಿಸಿದ ಅರಭಾವಿ ಮಠದ ಯುವಕ ಅಮಿತ ಬಿಲಕುಂದಿ ಅಮಿತಗೆ ಭೇಷ್ ಎಂದು ಬೆನ್ನು ತಟ್ಟಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಪರಿಸರ ಸ್ನೇಹಿಯಾಗಿರುವ ಇಲೆಕ್ಟ್ರಿಕಲ್ ಬೈಕ್‍ನ್ನು ತಯಾರಿಸುವ ಮೂಲಕ ಅರಭಾವಿ ಮಠದ ಯುವಕ ಮಾದರಿಯಾಗುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾನೆ. ಮೂಡಲಗಿ ತಾಲೂಕಿನ ಅರಭಾವಿ ಮಠದ ಅಮಿತ ರಾಮಪ್ಪ ಬಿಲಕುಂದಿ ಎಂಬ ಡಿಪ್ಲೋಮಾ ಪದವೀಧರ ಹೊಚ್ಚ ಹೊಸ ಇಲೆಕ್ಟ್ರಿಕಲ್ ಬೈಕ್ ನಿರ್ಮಾಣ ಮಾಡುವ ಮೂಲಕ …

    Read More »
  • 9 ಅಕ್ಟೋಬರ್

    ಬೆಟಗೇರಿಯಲ್ಲಿ ಸಡಗರದಿಂದ ಶೀಗಿಹುಣ್ಣಿಮೆ ಆಚರಣೆ

    ಬೆಟಗೇರಿಯಲ್ಲಿ ಸಡಗರದಿಂದ ಶೀಗಿಹುಣ್ಣಿಮೆ ಆಚರಣೆ ಬೆಟಗೇರಿ: ಗ್ರಾಮದಲ್ಲಿ ಶೀಗಿಹುಣ್ಣಿಮೆ ಪ್ರಯುಕ್ತ ರೈತರು ತಮ್ಮ ತಮ್ಮ ಹೊಲ-ಗದ್ದೆಗಳÀಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ಚಲ್ಲುವ ಕಾರ್ಯಕ್ರಮ ಅ.9ರಂದು ಸಡಗರದಿಂದ ನಡೆಯಿತು. ಗ್ರಾಮದ ಎಲ್ಲರ ಮನೆಗಳಲ್ಲಿ ರವಿವಾರದಂದು ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿತ್ತು, ಇಲ್ಲಿಯ ರೈತ ಕುಟುಂಬದ ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಎತ್ತುಗಳನ್ನು ಶೃಂಗರಿಸಿ, ಎತ್ತಿನ ಬಂಡಿ ಹೂಡಿಕೊಂಡು, ಕೆಲವರು ಕಾಲ್ನಡೆಗೆಯಲ್ಲಿ, ಇನ್ನೂ …

    Read More »
  • 9 ಅಕ್ಟೋಬರ್

    ಗೋದಾವರಿ ಸಕ್ಕರೆ ಕಾರ್ಖಾನೆಯ ಸಡಗರದ ಸುವರ್ಣ ಸಂಭ್ರಮ ! ಜನಸಾಗರದ ಮಧ್ಯೆ ಮಾಲೀಕರಿಗೆ ಅಭಿಮಾನ ಸನ್ಮಾನಗಳ ಸುರಿಮಳೆ !

    ಗೋದಾವರಿ ಸಕ್ಕರೆ ಕಾರ್ಖಾನೆಯ ಸಡಗರದ ಸುವರ್ಣ ಸಂಭ್ರಮ ! ಜನಸಾಗರದ ಮಧ್ಯೆ ಮಾಲೀಕರಿಗೆ ಅಭಿಮಾನ ಸನ್ಮಾನಗಳ ಸುರಿಮಳೆ ! ಮೂಡಲಗಿ: ಸಮೀಪದ ಸೈದಾಪೂರ- ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತ, ಕಾರ್ಮಿಕ, ಅಧಿಕಾರಿ ವರ್ಗದಿಂದ ಭಾನುವಾರ ಅದ್ದೂರಿ ಸುವರ್ಣ ಮಹೋತ್ಸವ ಜರುಗಿತು. ರೈತ, ಕಾರ್ಮಿಕರ ನಾಡಿ ಮಿಡಿತ ಅರಿತು 5 ದಶಕಗಳ ಕಾಲ ಈ ಭಾಗದಲ್ಲಿ ಉತ್ಪನ್ನ, ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಸಮೃದ್ದಿಗೆ …

    Read More »
  • 8 ಅಕ್ಟೋಬರ್

    ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನವರಾತ್ರಿ

    ಬೆಟಗೇರಿ:ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನವರಾತ್ರಿಯ ಅಂಗವಾಗಿ ಆಯೋಜಿಸಿರುವ ಶ್ರೀದೇವಿ ಪುರಾಣ ಪ್ರವಚನ ಮಂಗಲೋತ್ಸವ ಮತ್ತು 286ನೇ ಬಸವ ಸ್ಮøತಿ ಮಾಸಿಕ ಶಿವಾನುಭವ ಹಾಗೂ ಶಿರಹಟ್ಟಿ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ರವಿವಾರ ಅ.9 ರಂದು ಸಾಯಂಕಾಲ 4 ಗಂಟೆಗೆ ನಡೆಯಲಿದೆ. ಸ್ಥಳೀಯ ಮೌನಮಲ್ಲಿಕಾರ್ಜುನ ಶ್ರೀಮಠದಲ್ಲಿ 286ನೇ ಬಸವ ಸ್ಮøತಿ ಮಾಸಿಕ ಶಿವಾನುಭವೋತ್ಸವವು ಸಂಜೆ 7ಗಂಟೆಗೆ ನಡೆಯಲಿದ್ದು, ಇಲ್ಲಿಯ ಶ್ರೀಮಠದ ಮೌನಮಲ್ಲಿಕಾರ್ಜುನ ಶಿವಯೋಗಿಗಳ ಅಧ್ಯಕ್ಷತೆ, ಶಿರಹಟ್ಟಿಯ …

    Read More »
  • 8 ಅಕ್ಟೋಬರ್

    ಸರ್ಕಾರ ವಿರುದ್ದ ಕೂಡಲ ಸಂಗದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಅಸಮಾಧನ

    ಮೂಡಲಗಿ : ಶುಕ್ರವಾರದಂದು ಸರ್ವ ಪಕ್ಷಗಳ ಸಭೆ ಕರೆದು ಜನಸಂಖ್ಯೆ ಆಧಾರದ ಮೇಲೆ ಎಸ್ಸಿ-ಎಸ್ಟಿ ಸಮಾಜದ ಮೀಸಲಾತಿ ಹೆಚ್ಚಳ ಮಾಡಿದರುವುದು ಸಂತಸವಾದರು, ಆ ಸಭೆಯಲ್ಲಿ ಪಂಚಮಸಾಲಿಗಳ ಮೀಸಲಾತಿ ಬಗ್ಗೆ ಚರ್ಚಿಸಿದರೇ ಮೀಸಲಾತಿಗಾಗಿ ಹೋರಾಟ ಮಾಡಿದ ಸಮುದಾಯಗಳಿಗೆ ನೆಮ್ಮದಿ ಸಿಗುತ್ತಿದ್ದು ಎಂದು ಸರ್ಕಾರ ವಿರುದ್ದ ಕೂಡಲ ಸಂಗದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಅಸಮಾಧನವನ್ನು ಹೋರ ಹಾಕಿದರು. ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಆಯೋಜಿಸಲಾದ ಪಂಚಮಸಾಲಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಸಮಾಜದ …

    Read More »
  • 8 ಅಕ್ಟೋಬರ್

     ರೈತ ಕಾರ್ಮಿಕರಿಂದಲೇ ಗೋದಾವರಿ ಸಕ್ಕರೆ ಕಾರ್ಖಾನೆಯ ಸುವರ್ಣ ಮಹೋತ್ಸವ

     ರೈತ ಕಾರ್ಮಿಕರಿಂದಲೇ ಗೋದಾವರಿ ಸಕ್ಕರೆ ಕಾರ್ಖಾನೆಯ ಸುವರ್ಣ ಮಹೋತ್ಸವ ಮೂಡಲಗಿ:: ಕಳೆದ 50 ವರ್ರ್ಷಗಳಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರೈತರ ಬಾಳಿಗೆ ಬೆಳಕಾಗಿ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿ, ಲಕ್ಷಾಂತರ ಜನ ಕೂಲಿಕಾರ್ಮಿಕರಿಗೆ ಜೀವನಾಧಾರವಾಗಿರುವ ಸೈದಾಪುರ ಗ್ರಾಮದ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಅ. 9ರ ಭಾನುವಾರ ರೈತರು, ಕಾರ್ಮಿಕರು ಮತ್ತು ಅಧಿಕಾರಿ ವರ್ಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಖಾನೆಯ ಡಿಸ್ಟಿಲರಿ ವಿಭಾಗದ ಕಾರ್ಮಿಕ …

    Read More »
  • 8 ಅಕ್ಟೋಬರ್

    ಕಲ್ಮೇಶ್ವರ ವೃತ್ತದ ಬಳಿ ನಗರೋತ್ಥಾನ ಯೋಜನೆಯಡಿ 4.05 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

    ಮೂಡಲಗಿ : ಮೂಡಲಗಿ ಪಟ್ಟಣದ ರಸ್ತೆಗಳ ಅಭಿವೃದ್ದಿಗೆ ನಗರೋತ್ಥಾನ ಯೋಜನೆಯಡಿ ಅನುದಾನ ಬಿಡುಗಡೆಗೊಂಡಿದ್ದು, ಮತ್ತೇ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಪೌರಾಡಳಿತ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶನಿವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದ ಬಳಿ ನಗರೋತ್ಥಾನ ಯೋಜನೆಯಡಿ 4.05 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಡಿಸೆಂಬರ ತಿಂಗಳ ಅಂತ್ಯದೊಳಗೆ ಮೂಡಲಗಿ …

    Read More »
  • 6 ಅಕ್ಟೋಬರ್

    ಅರಭಾವಿ ಮತಕ್ಷೇತ್ರದ ಕಾಂಗ್ರೇಸ್ ಮುಖಂಡರು ಎಲ್ಲರೂ ಬೆಂಬಲ ನೀಡುತ್ತಿವೆ- ಲಕ್ಕನ್ ಸವಸುದ್ದಿ

    ಮೂಡಲಗಿ : ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಅ.7ರಂದು ಕಲ್ಲೋಳಿ ಪಟ್ಟಣದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೃಹತ ಸಮಾಮೇಶಕ್ಕೆ ಹಾಗೂ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೇಸ್ ಮುಖಂಡ ಲಕ್ಕನ್ ಸವಸುದ್ದಿ ಹೇಳಿದರು. ಗುರುವಾರದಂದ ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ನೀಡಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಹೋರಾಟಗಳನ್ನು ಮಾಡುತ್ತಿದ್ದು ಅವರ ಹೋರಾಟಕ್ಕೆ ಅರಭಾವಿ …

    Read More »
  • 6 ಅಕ್ಟೋಬರ್

    ಸಾವಳಗಿ ಶ್ರೀಪೀಠದಲ್ಲಿ ವಿಜಯದಶಮಿಯ ಸೀಮೋಲ್ಲಂಘನ ಸಂಭ್ರಮ

      ಸಾವಳಗಿ ಶ್ರೀಪೀಠದಲ್ಲಿ ವಿಜಯದಶಮಿಯ ಸೀಮೋಲ್ಲಂಘನ ಸಂಭ್ರಮ ಗೋಕಾಕ: ಬುಧವಾರ ಸಂಜೆ ಕುಂಭಹೊತ್ತ ಮತ್ತು ಆರತಿಗಳನ್ನು ಹಿಡಿದ ಸುಮಂಗಲಿಯರ ಸಾಲು, ವಿವಿಧ ವಾದ್ಯ ವೃಂದಗಳ ನಿನಾದ, ಭಕ್ತಿಯ ಜಯಘೋಷಗಳೊಂದಿಗೆ ಹಿಂದೂ-ಮುಸ್ಲಿಂ ಭಾವ್ಯೆಕ್ಯತೆಗೆ ಹೆಸರಾಗಿರುವ ಸಾವಳಗಿಯ ಶಿವಲಿಂಗೇಶ್ವರ ಮಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಪಲ್ಲಕ್ಕಿ ಮೆರವಣಿಗೆಯೊಂದಿಗೆ ದಸರಾ ಉತ್ಸವದ ಸೀಮೋಲ್ಲಂಘನ ಕಾರ್ಯಕ್ರಮವು ಸಹಸ್ರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸಂಜೆ ಶ್ರೀಪೀಠದಿಂದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹಿಂದೂ, …

    Read More »