ಕಮಲದಿನ್ನಿ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವು ಲಯನ್ಸ್ ಕ್ಲಬ್ದಿಂದ ಆಹಾರ ಧಾನ್ಯ ಕಿಟ್ ವಿತರಣೆ ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಆಪ್ ಮೂಡಲಗಿ ಪರಿವಾರದಿಂದ ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿಯ ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ಗಳನ್ನು ವಿತರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಪ್ರಕೃತಿಯ ವಿಕೋಪದಲ್ಲಿ ಅಮಾಯಕ ಜನರು ಕಷ್ಟ ಅನುಭವಿಸುವಂತಾಗುತ್ತದೆ. ಇಂಥ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಂತರ್ರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ಕಡು ಬಡವ …
Read More »TimeLine Layout
ಆಗಷ್ಟ್, 2021
-
17 ಆಗಷ್ಟ್
ಕಾರ್ಯಾಧ್ಯಕ್ಷರಾಗಿ ನಿಂಗಪ್ಪ ಪಿರೋಜಿ ನೇಮಕ
ಕಾರ್ಯಾಧ್ಯಕ್ಷರಾಗಿ ನಿಂಗಪ್ಪ ಪಿರೋಜಿ ನೇಮಕ ಮೂಡಲಗಿ: ಸ್ಥಳೀಯ ಮುಖಂಡ ಹಾಗೂ ರಾಜಕೀಯ ಧುರಿಣರಾದ ನಿಂಗಪ್ಪ ಫಿರೋಜಿಯವರನ್ನು ಬೆಳಗಾವಿ ಜಿಲ್ಲಾ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಕಾರ್ಯಾಧ್ಯಕ್ಷರನ್ನಾಗಿ ನಿಯಮಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಜರುಗಿದ ಕಾರ್ಯಕಾರಣಿ ಸಭೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯೊಂಜಯ ಸ್ವಾಮೀಜಿಯª ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ನೇಮಕಗೋಳಿಸಿ ಸಂಘಟನೆಯಲ್ಲಿ ಸಕ್ರೀಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.
Read More » -
17 ಆಗಷ್ಟ್
ಆ.20 ರಂದು ಹೇಮರಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪಣೆ ಹಾಗೂ ದೇವಸ್ಥಾನ ಉದ್ಘಾಟನೆ
ಆ.20 ರಂದು ಹೇಮರಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪಣೆ ಹಾಗೂ ದೇವಸ್ಥಾನ ಉದ್ಘಾಟನೆ ಮೂಡಲಗಿ: ತಾಲೂಕಿನ ಹಳೇಯರಗುದ್ರಿ ಗ್ರಾಮದ ನೂತನವಾಗಿ ನಿರ್ಮಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಾ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪಣೆ ಹಾಗೂ ಕಳಸಾರೋಹಣ ಸಮಾರಂಭ ಹಾಗೂ ಶ್ರೀ ಬಿಂದಿಗೆಮ್ಮಾದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪಣೆ ಕಾರ್ಯಕ್ರಮ ಹಳೇಯರಗುದ್ರಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಮತ್ತು ಶ್ರೀ ವೇಮನ್ ಸೇವಾ ಸಮಿತಿ ಆಶ್ರಯದಲ್ಲಿ ಆ.19 ಮತ್ತು 20 ರಂದು ಜರುಗಲಿದೆ. …
Read More » -
16 ಆಗಷ್ಟ್
ಸತೀಶ ಶುಗರ್ಸ್ಗೆ ಹೆಚ್ಚು ಕಬ್ಬು ಪೂರೈಕೆ ಮಾಡಿದ ರೈತರಿಗೆ ಸತ್ಕಾರ
ಸತೀಶ ಶುಗರ್ಸ್ಗೆ ಹೆಚ್ಚು ಕಬ್ಬು ಪೂರೈಕೆ ಮಾಡಿದ ರೈತರಿಗೆ ಸತ್ಕಾರ ಮೂಡಲಗಿ: ತಾಲೂಕಿನಲ್ಲಿನ ಹುಣಶ್ಯಾಳ ಪಿಜಿ ಹತ್ತಿರದ ಸತೀಶ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹನ್ನು ಕಾರ್ಖಾನೆಗೆ ಅತೀ ಹೆಚ್ಚು ಕಬ್ಬು ಪೂರೈಕೆ ಮಾಡಿದ ಪ್ರಗತಿಪರ ರೈತ ಹುಕ್ಕೇರಿ ತಾಲೂಕಿನ ಝಾಂಗಟಿಹಾಳ ಗ್ರಾಮದ ಶ್ರೀಮತಿ. ಭೂದೇವಿ ಗುರುಶಿದ್ದೇಶ್ವರ ಕಾಡದೇವರ ಹಾಗೂ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಅರ್ಜುನ ತಮ್ಮಣ್ಣ ನಾಯಕವಾಡಿ ಇವರುಗಳು ದ್ವಜಾರೋಹಣನ್ನು ನೆರವೇರಿಸಿದರು. ದ್ವಜಾರೋಹಣ …
Read More » -
16 ಆಗಷ್ಟ್
ಯಾದವಾಡ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಯಾದವಾಡ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಸರ್ಕಾರಿ ಪೂರ್ವ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೊತ್ಸವ ಕಾರ್ಯಕ್ರಮವನ್ನು ವಿμÉೀಷವಾಗಿ ಆಚರಿಸಲಾಯಿತು. ಭಾರತಾಂಬೆ ಭಾವ ಚಿತ್ರಕ್ಕೆ ಎಸ್.ಡಿ.ಎಮ್.ಸಿ. ಅಧ್ಯಕ್ಷ ನಾಗಪ್ಪ ಬಳಿಗಾರ ಇವರು ಪೂಜೆ ಸಲ್ಲಿಸಿ ದ್ವಜಾರೋಹಣ ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್.ಕುರುಬಚನಾಳ ಮತ್ತು ಡಾ: ಹಣಮಂತ ಚಿಕ್ಕೇಣ್ಣವರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯು ತ್ಯಾಗ ಹಾಗೂ …
Read More » -
16 ಆಗಷ್ಟ್
ಸಂಗೊಳ್ಳಿ ರಾಯಣ್ಣ ಒಬ್ಬ ಅಪ್ಪಟ ದೇಶ ಭಕ್ತ: ರಮೇಶ ಹಾಲಣ್ಣವರ
ಸಂಗೊಳ್ಳಿ ರಾಯಣ್ಣ ಒಬ್ಬ ಅಪ್ಪಟ ದೇಶ ಭಕ್ತ: ರಮೇಶ ಹಾಲಣ್ಣವರ ಬೆಟಗೇರಿ:ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ರಮೇಶ ಹಾಲಣ್ಣವರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಆಶ್ರಯದಲ್ಲಿ ರವಿವಾರ ಆ.15 ರಂದು ನಡೆದ ಸಂಗೊಳ್ಳಿ ರಾಯಣ್ಣರವರ 224ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, …
Read More » -
16 ಆಗಷ್ಟ್
ಪ್ರತಿಯೊಬ್ಬ ರೈತರು ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಕೃಷಿ ಮಾಡಬೇಕು
ಬೆಟಗೇರಿ:ಗ್ರಾಮದ ಪ್ರತಿಯೊಬ್ಬ ರೈತರು ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಕೃಷಿ ಮಾಡಬೇಕು. ಎರೆಹುಳು ರೈತನಿಗೆ ಮಿತ್ರವಾಗಿದೆ. ರೈತರು ತಮ್ಮ ಜಮೀನಿನ ಒಂದಿಷ್ಟು ಜಾಗೆಯಲ್ಲಿ ಪೌಷ್ಟಿಕ ತೋಟ ನಿರ್ಮಾಣ ಮಾಡಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಭಾವಿಕಟ್ಟಿ ಹೇಳಿದರು. ಬೆಟಗೇರಿ ಗ್ರಾಮ ಪಂಚಾಯತಿಯಲ್ಲಿ ರವಿವಾರದಂದು ನಡೆದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಜರುಗಿದÀ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಬೆಳಗಾವಿ ಜಿಪಂ, …
Read More » -
15 ಆಗಷ್ಟ್
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವ
ಮೂಡಲಗಿ: ಇಲ್ಲಿನ ಕೆ ಎಚ್ ಸೋನವಾಲ್ಕರ ಸರರ್ಕಾರಿ ಫ್ರೌಡ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮುಖ್ಯೋಪಾಧ್ಯಯ ಎಸ್ ಬಿ ನ್ಯಾಮಗೌಡರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಪಡೆದ ವಿದ್ಯಾರ್ಥಿಗಳಾದ ಶಿವಕಾಂತ ಪರಸಪ್ಪ ಗೋಟೂರ (ನಾಗನೂರ) ,ಸಾನೀಯಾ ಅ. ನದಾಫ್, ವಿಜಯಕುಮಾರ ಮ ಅಂಗಡಿ, ಅಭಿಷೇಕ್ ಮ.ಮಗದುಮ್ ಇವರನ್ನು ಸತ್ಕರಿಸಿ ಗೌರವಿಸಿದರು, ಭೂದಾನಿ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಅಧ್ಯಕ್ಷ …
Read More » -
15 ಆಗಷ್ಟ್
ಭಾರತ ಮಾತೆ ವೇಷದಲ್ಲಿ ಆರೋಹಿ ನಾಡಗೌಡರ ಹಾಗೂ ಆರೋಹಿ
ಭಾರತ ಮಾತೆ ವೇಷದಲ್ಲಿ ಆರೋಹಿ ನಾಡಗೌಡರ ಭಾರತ ಮಾತೆ ವೇಷದಲ್ಲಿ ಗಮನಸೆಳೆದ ಆರೋಹಿ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಭಾನುವಾರ ಆಚರಿಸಿದ 75ನೇ ಸ್ವಾತಂತ್ರ್ಯೋತ್ಸ ದಿನಾಚರಣೆ ಸಂದರ್ಭದಲ್ಲಿ ಭಾರತ ಮಾತೆ ವೇಷದಲ್ಲಿ ಗಮನಸಳೆದಳು. ಆರೋಹಿ ಇಲ್ಲಿಯ ಪುರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಹಾಗೂ ವಿದ್ಯಾ ಅವರ ಮೊಮ್ಮಗಳು. ತಾಯಿ ಶೃತಿ ಮಗುವಿನ ವೇಷವನ್ನು ಸಿದ್ದಗೊಳಿಸಿದ್ದರು. ಹರ್ಷವರ್ಧನ ಮತ್ತು ಹರ್ಷಿತಾ … ಪುಟಾಣಿಗಳ ದೇಶಾಭಿಮಾನದ ಸಂಭ್ರಮ ಮೂಡಲಗಿ: …
Read More » -
15 ಆಗಷ್ಟ್
ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದ ರಾಹುಲ್ ಜಾರಕಿಹೊಳಿ
ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದ ರಾಹುಲ್ ಜಾರಕಿಹೊಳಿ ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಅಂಗವಾಗಿ ಸಂಗೊಳ್ಳಿ ರಾಯಣ್ಣನ ನೂತನ ಪ್ರತಿಮೆಯನ್ನು ಕಾಂಗ್ರೆಸ ಯುವ ಮುಖಂಡ ರಾಹುಲ ಜಾರಕಿಹೊಳಿ ಅನಾವರಣಗೊಳಿಸಿದರು. ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದಾರೆ.ಅವರು ಹುಟ್ಟಿದ ದಿನ ಸ್ವಾತಂತ್ರ್ಯ ದಿನವಾಗಿದ್ದರೆ ಅವರು ನೇಣುಗಂಬಕ್ಕೇರಿದ ದಿನ …
Read More »
IN MUDALGI Latest Kannada News