ಹೆಲ್ಮೆಟ್ ಧರಿಸದೆ ಬೈಕ್ ಮುಟ್ಟಬೇಡಿ ಪಿ.ಎಸ್ ಐ ಆನಂದ ಬಿ.
ಕುಲಗೋಡ: ಜೀವ ಅಮುಲ್ಯ ನಿರ್ಲಕ್ಷತನಕ್ಕೆ ಜೀವ ಬಲಿಕೊಡಬೇಡಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಬೈಕ್ ಮುಟ್ಟಬೇಡಿ.. ಮನೆಯಿಂದಲೇ ಹೆಲ್ಮೆಟ್ ಹಾಕಿಕೊಳ್ಳು ಪರಿಪಾಠ ಇಟ್ಟುಕೊಳ್ಳಿ ಎಂದು ಕುಲಗೋಡ ಪಿ.ಎಸ್.ಐ ಆನಂದ ಬಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ ಸಂಚಾರ ಸುರಕ್ಷತೆ ಹಾಗೂ ಹೆಲ್ಮೆಟ್ ಜಾಗೃತಿ ಅಭಿಯಾನ ಚಾಲನೆ ನೀಡಿ ಮಾತನಾಡಿ ಕಳೆದ ವರ್ಷ 40 ಸಾವಿರಕ್ಕೂ ಅಪಘಾತ ಪ್ರಕರಣಗಳು ದಾಖಲಾಗಿತ್ತು. ಸರಾಸರಿ ದಿನಕ್ಕೆ 30 ಜನರ ಸಾವು 150 ಕ್ಕೂ ಹೆಚ್ಚು ಗಾಯಳು. ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲಿಸಿ. ವೇಗಕ್ಕೆ ಕಡಿವಾನ ಹಾಕಿ. ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂದರು.
ಕಾರ್ಯಕ್ರಮದಲ್ಲಿ ಕುಲಗೋಡ ಮುಖಂಡರಾದ ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ. ಸತೀಶ ವಂಟಗೋಡಿ. ಠಾಣಾ ಸಿಬ್ಬಂದಿ ವರ್ಗ ಗ್ರಾಮಸ್ಥರು ಇದ್ದರು.