ಪ್ರತಿಭಾವಂತ ಗಾಯಕರಿಂದ ಸಂಗೀತ ಸುಧೆ
ಮೂಡಲಗಿ: ಮಾ. 23ರಂದು ‘ಭಾವದೀವಿಗೆ’ ಸುಗಮ ಸಂಗೀತೋತ್ಸವ
ಮೂಡಲಗಿ: ಬೆಂಗಳೂರಿನ ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 23ರಂದು ಮೂಡಲಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಜೆ 5 ಗಂಟೆಗೆ ಖ್ಯಾತ ಗಾಯಕರಿಂದ ‘ಭಾವದೀವಿಗೆ: ಸುಗಮ ಸಂಗೀತೋತ್ಸವ ಮತ್ತು ಕವಿ ಗೀತ ನಮನ’ ಕಾರ್ಯಕ್ರಮವನ್ನು ಏರ್ಪಡಿಸಿವರು.
ರವೀಂದ್ರ ಸೊರಗಾಂವಿ
ಬೆಂಗಳೂರಿನ ಖ್ಯಾತ ಗಾಯಕ ಮೃತ್ಯುಂಜಯ ದೊಡ್ಡವಾಡ, ಚಲನಚಿತ್ರ ಹಿನ್ನೆಲೆ ಗಾಯಕ ರವೀಂದ್ರ ಸೊರಗಾಂವಿ, ಚಲನಚಿತ್ರ ಹಿನ್ನೆಲೆ
ಶ್ವೇತಾ ಪ್ರಭೂ
ಗಾಯಕಿ ಶ್ವೇತಾ ಪ್ರಭೂ, ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ
ಬಸವರಾಜ ಮುಗಳಖೋಡ
ಬಸವರಾಜ ಮುಗಳಖೋಡ, ಜೀಟಿವಿ ಸರಿಗಮಪ ಸಂಗೀತ ಸ್ಪರ್ಧೆಯ ವಿಜೇತ
ಓಂಕಾರ ಪತ್ತಾರ
ಗಾಯಕ ಓಂಕಾರ ಪತ್ತಾರ, ಜಾನಪದ ಗಾಯಕ ಶಬ್ಬೀರ ಡಾಂಗೆ, ಹೊಂಬೆಗೌಡ ಹೆಚ್, ಮಧುರಖಂಡಿಯ ಬಸವಲಿಂಗಯ್ಯ ಹಿಡಕಲ್, ಶ್ರೀಕಾಂತ ನಾಯಕ, ಐಶ್ವಂರ್ಯ ತಳವಾರ, ಶಿವಾನಂದ ಬಿದರಿ, ಮೇಘಾ ಸೊರಗಾಂವಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನೆ: ಮಾ. 23ರಂದು ಸಂಜೆ 5 ಗಂಟೆಗೆ ಜರಗುವ ಸಂಗೀತ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿವಹಿಸುವರು.
ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಕಾರ್ಯಕ್ರಮ ಉದ್ಘಾಟಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಅಧ್ಯಕ್ಷತೆವಹಿಸುವರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಡಿ.ಜಿ. ಮಹಾತ್, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಬಿಇಒ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಪಿಎಸ್ಐ ಎಚ್.ವೈ. ಬಾಲದಂಡಿ, ಎಂಜೆಎಫ್ ಲಯನ್ ವೆಂಕಟೇಶ ಸೋನವಾಲಕರ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಹಿರಿಯ ಕಲಾವಿದ ಮಹಾದೇವಪ್ಪ ಬಂಗಿ ಭಾಗವಹಿಸುವರು ಎಂದು ಲಯನ್ಸ್ ಕ್ಲಬ್ ಖಜಾಂಚಿ ಸುಪ್ರೀತ ಸೋನವಾಲಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.