ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪನೋಂದಣಾಧಿಕಾರಿಗಳಿಗೆ ಮನವಿ
ಮೂಡಲಗಿ: ಪಟ್ಟಣದ ಪತ್ರ ಬರಹಗಾರರು (ಬಾಂಡ್ ರೈಟರ್ಸ ) ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪನೋಂದಣಾಧಿಕಾರಿ ಡಿ.ಕೆ.ಕುಳ್ಳೂರ ಮೂಲಕ ಕಂದಾಯ ಸಚಿವರಿಗೆ ಬುಧವಾರ ಮನವಿ ಸಲ್ಲಿಸಿದರು.
ಡಿ.3 ರಿಂದ ಕಾವೇರಿ-2 ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳಿಗಾಗಿ ಎಲ್ಲಾ ಉಪ-ನೋಂದಣಿ ಕಛೇರಿಗಳಲ್ಲಿ ನೋಂದಣಿ ಕಾರ್ಯಗಳು ಕುಂಠಿತಗೊಂಡಿರುತ್ತವೆ. ಸ್ವತ್ತಿನ ವಿವರಣೆಯಲ್ಲಿ ಸ್ವತ್ತಿನ ವಿಳಾಸ, ಸ್ವತ್ತಿನ ನಂಬರ, ಸ್ವತ್ತಿನ ವಿಸ್ತಿರ್ಣ ಸರಿಯಾಗಿ ನಮೂದಾಗದೇ ನೋಂದಣಿ ಪ್ರಕ್ರಯೇ 100ಕ್ಕೆ 95% ಸ್ಥಗಿತಗೊಂಡಿರುತ್ತವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾವೇರಿ-2 ತಂತ್ರಾಂಶದಲ್ಲಿ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗ ಸರಿಪಡಿಸಿ ನೋಂದಣಿ ಪ್ರಕ್ರಿಯೇಯನ್ನು ಸುಗಮಗೊಳಿಸುವದರ ಮೂಲಕ ಸಾರ್ವಜನಿಕರಿಗೆ ನೋಂದಣಿ ಮಾಡಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಮನವಯಲ್ಲಿ ಆಗ್ರಹಿಸಿದ್ದಾರೆ.
ಪತ್ರ ಬರಹಗಾರಾದ (ಬಾಂಡ್ ರೈಟರ್ಸ ) ಪಿ.ಬಿ.ಹಿರೇಮಠ, ಆರ್.ಎಮ್.ಕುಲಕರ್ಣಿ, ಎಲ್.ಸಿಗಾಡವಿ, ಕೆ.ಎಸ್.ಹುಬಳಿ, ಎಮ್.ಎನ್.ಶಿರಸಂಗಿ, ರಾಜು ಅಥಣಿ, ಎಸ್.ಬಿ.ಸಿದ್ದುಮಾಳಿ, ಎಸ್.ಎನ್.ಗೋಟಡಕಿ, ಎ.ಎಮ್.ಥರಥರಿ ಉಪಸ್ಥಿತರಿದ್ದರು.
IN MUDALGI Latest Kannada News