Breaking News
Home / Recent Posts / ಕೃಷಿ ಮಸೂದೆ 2020 ರೈತರಿಗೆ ವರದಾನವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಬಳಲಿದ್ದ ರೈತ ಸಮುದಾಯದ ಅಭ್ಯುದಯ

ಕೃಷಿ ಮಸೂದೆ 2020 ರೈತರಿಗೆ ವರದಾನವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಬಳಲಿದ್ದ ರೈತ ಸಮುದಾಯದ ಅಭ್ಯುದಯ

Spread the love

ಮೂಡಲಗಿ: ಕೃಷಿ ಮಸೂದೆ 2020 ರೈತರಿಗೆ ವರದಾನವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಬಳಲಿದ್ದ ರೈತ ಸಮುದಾಯದ ಅಭ್ಯುದಯಕ್ಕೆ ಮಹತ್ತರ ಕಾಣಿಕೆಯನ್ನು ನೀಡಲಿದೆ ಎಂದು ರಾಜ್ಯಸಭೆಯ ಸದಸ್ಯ ಹಾಗೂ ಜಿ7 ಮತ್ತು ಜಿ20 ಶೃಂಗಸಭೆಗಳ ಭಾರತೀಯ ಪ್ರತಿನಿಧಿ ಸುರೇಶ ಪ್ರಭು ತಿಳಿಸಿದರು.


ಅವರು ಶನಿವಾರಂದು ತುಕ್ಕಾನಟ್ಟಿಯ ಐಸಿಏಆರ್-ಬಡ್ರ್ಸ ಕೃಷಿ ವಿಜ್ಞಾನಕೇಂದ್ರದಲ್ಲಿ ಕೃಷಿ ಮಸೂದೆ-2020 ವಿಷಯದ ಬಗ್ಗೆ ವೆಬಿನಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿಕರುತಾವು ಬೆಳದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡಲು ಈ ಕಾಯಿದೆಯು ನೆರವಾಗಲಿದೆ ಎಂದು ತಿಳಿಸಿದರು
ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಟಾರಿ-ಬೆಂಗಳೂರು ವಿಭಾಗದ ನಿರ್ದೇಶಕ ಡಾ. ವೆಂಕಟಸುಬ್ರಮಣಿಯನ್ ಅವರು ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಮಸೂದೆಯ ತುರ್ತು ಅಗತ್ಯದ ಬಗ್ಗೆ ಮಾಹಿತಿ ನೀಡಿ, ಈ ಮಸೂದೆಯು ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಮಹತ್ತರ ಪಾತ್ರವಹಿಸಲಿದೆ ಎಂದು ವ್ಯಕ್ತಪಡಿಸಿದರು.
ಬಸವರಾಜ ಹುಂಬರವಾಡಿ ಮಾತನಾಡಿ, ಕೃಷಿ ಮಸೂದೆಯ ಪ್ರಮುಖ ವಿಷಯಗಳನ್ನು ವಿವರಿಸಿ ಅವರು ರೈತನು ತನ್ನ ಬೆಳೆಗಳನ್ನು ಸ್ವತಂತ್ರ್ಯವಾಗಿ ಮಾರಾಟಮಾಡಲು ಕೃಷಿ ಮಸೂದೆ ಕಾಯಿದೆಯು ಅನುವು ಮಾಡಿಕೊಡುವುದಲ್ಲದೆ, ರೈತ ಹಾಗೂ ಕೊಳ್ಳುವವರ ನಡುವೆ ಒಂದು ಸೂಕ್ತ ಒಡಂಬಡಿಕೆ ಮಾಡಿಕೊಳ್ಳಲು ಹಾಗೂ ಆ ಒಡಬಂಡಿಕೆಗೆ ಬದ್ಧರಾಗಿರಲು ಮಾರಾಟಗಾರರನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದರು.
ಈ ವೆಬಿನಾರದಲ್ಲಿ ಮಾನ್ಯರಾಜ್ಯಸಭೆ ಸದಸ್ಯ ಈರಣ್ಣಕಡಾಡಿ, ಐಸಿಏಆರ್-ಬಡ್ರ್ಸ ಕೃಷಿ ವಿಜ್ಞಾನಕೇಂದ್ರದ ಚೇರಮನ್ನ ಆರ.ಎಂ.ಪಾಟೀಲ, ಮಾಜಿ ಶಾಸಕ ರಾಮಚಂದ್ರರೆಡ್ಡಿ, ಏ.ಆರ್.ಪಾಟೀಲ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ರೈತರುಗಳು ಭಾಗವಹಿಸಿದ್ದರು. ಐಸಿಐಸಿ ಪೌಂಡೇಶನ್ ಸಹಯೋಗದೊಂದಿಗೆ ರಾಜಾಪುರ ಮತ್ತು ಬಡಿಗವಾಡ ಗ್ರಾಮದ ರೈತರು ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಿದರು.
ಐಸಿಏಆರ್-ಬಡ್ರ್ಸ ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥರಾದ ಡಿ.ಸಿ. ಚೌಗಲಾ, ಕೇಂದ್ರದ ವಿಜ್ಞಾನಿಗಳಾದ ಆದರ್ಶ ಹೆಚ್. ಎಸ್, ಎಂ. ಎನ್.ಮಲಾವಾಡಿ, ಎನ್. ಆರ್. ಸಾಲಿಮಠ, ಸುಭೊದ ಶರ್ಮಾ, ರೇಖಾ ಕಾರಭಾರಿ, ಡಾ. ಸೂರಜ ಕೌಜಲಗಿ, ಪರಶುರಾಮ ಪಾಟೀಲ, ಉಮೇಶ ಪಾಟೀಲ ಹಾಗೂ ಶಿವಬೋಧ ಬಿಜಗುಪ್ಪಿ ಕಾರ್ಯಕ್ರಮದ ಆಯೋಜನೆಯಲ್ಲಿ ಶ್ರಮಿಸಿದರು.


Spread the love

About inmudalgi

Check Also

ಮೂಡಲಗಿಯಲ್ಲಿ ಡಯಾಲಿಸಿಸ್ ಕೇರ್ ಕೇಂದ್ರವನ್ನು   ಉದ್ಘಾಟಿಸಿದ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅನುಕೂಲವಾಗಲು ಡಯಾಲಿಸಿಸ್ ಕೇಂದ್ರದ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ