Breaking News
Home / Recent Posts / ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗಲಿವೆ- ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗಲಿವೆ- ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ- ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ- ಪುನಸ್ಕಾರವಿರಲಿ. ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆಯು ನಮ್ಮ ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ. ಅದು ಯಾವುದೇ ಕೆಲಸವಿರಲಿ. ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗಲಿವೆ ಎಂಬ ನಂಬಿಕೆಯು ಈಗಲೂ ನಮ್ಮ ಪೂರ್ವಜರಲ್ಲಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ಪಟ್ಟಣದ ಬಸವ ಮಂಟಪದಲ್ಲಿ ಏಕದಂತ ಉತ್ಸವ ಸಮೀತಿಯಿಂದ ಜರುಗಿದ ಮೂಡಲಗಿ ಮಹಾರಾಜ ಗಣೇಶನ ವಿಸರ್ಜನಾ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ಗಣೇಶನೇ ಶ್ರೇಷ್ಟವಾದ ದೇವರು ಎಂದು ಹೇಳಿದರು.
ನಮ್ಮ ದೇಶವು ಕೋಮು ಸಾಮರಸ್ಯವನ್ನು ಬಿಂಬಿಸುವ ಜಗತ್ತಿನ ಏಕಮೇವ ದೇಶವಾಗಿದೆ. ಅನೇಕ ಜಾತಿಗಳು, ನಾನಾ ಧರ್ಮಗಳು, ವಿವಿಧ ಪಂಕ್ತಿಗಳು ಇದ್ದರೂ ಎಲ್ಲರೂ ಜಾತ್ಯಾತೀತ ಮನೋಭಾವನೆಯಿಂದ ಬದುಕುತ್ತಿದ್ದೇವೆ. ನಮ್ಮ ಆಚರಣೆಗಳು ಭಿನ್ನವಾಗಿದ್ದರೂ ವಿವಿಧತೆಯಲ್ಲಿ ಏಕತೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಅದು ಯಾವುದೇ ಆಚರಣೆ ಇರಬಹುದು. ಎಲ್ಲರೂ ಜಾತ್ಯಾತೀತವಾಗಿ ಭಾಗವಹಿಸುತ್ತಾರೆ. ಅದಕ್ಕೆ ಹೇಳುವುದು ನಮ್ಮ ಭಾರತವು ಜಾತ್ಯಾತೀತ ರಾಷ್ಟ್ರವೆಂದು ಅವರು ತಿಳಿಸಿದರು.
ಮೂಡಲಗಿಯಲ್ಲಿ ಇದೇ ಮೊದಲ ಬಾರಿಗೆ ಏಕದಂತ ಯುವಕ ಮಂಡಳವು ಸಾರ್ವಜನಿಕ ಗಣೇಶ ಉತ್ಸವವನ್ನು ಮಾಡುತ್ತಿದ್ದು, ೨೧ನೇ ದಿನಕ್ಕೆ ಗಣೇಶನನ್ನು ವಿಸರ್ಜನೆ ಮಾಡುತ್ತಿದೆ. ಸಂತೋಷ ಸೋನವಾಲಕರ, ಮಹಾದೇವ ಶೆಕ್ಕಿ, ಮಲ್ಲು ಯಾದವಾಡ ಅವರ ನೇತೃತ್ವದಲ್ಲಿ ಅನೇಕ ಯುವಕರು ಮೂಡಲಗಿ ಮಹಾರಾಜ ಹೆಸರಿನ ಗಣೇಶನನ್ನು ಈ ವರ್ಷ ಇಪ್ಪತ್ತೊಂದು ದಿನಗಳ ತನಕ ಪ್ರತಿಷ್ಟಾಪಿಸಿದ್ದಾರೆ. ಸಮಸ್ತ ಯುವಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಈ ಭಾಗದ ಆರಾಧ್ಯೆ ದೈವವಾಗಿರುವ ಶಿವಬೋಧರಂಗ ಮಠವು ಕೂಡ ಈ ಹಿನ್ನಲೆಯಲ್ಲಿ ಅನೇಕ ಪವಾಡಗಳನ್ನು ಸೃಷ್ಟಿಸಿರುವುದು ಇತಿಹಾಸಕ್ಕೆ ನಾಂದಿಹಾಡಿದೆ. ಪ್ರತಿಯೊಬ್ಬರ ಮನಸ್ಸು- ಹೃದಯಲ್ಲಿ ಶ್ರೀಮಠವು ನೆಲೆಸಿರುವುದು ಭಕ್ತ ಸಮೂಹದ ಜಾತ್ಯಾತೀತ ತತ್ವಕ್ಕೆ ಮಾದರಿಯಾಗಿದೆ ಎಂದು ಈ ಭಾಗದ ಸಕಲ ಭಕ್ತರ ಸೇವಾ ಕಾರ್ಯಗಳನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು.
ಲೋಕ ಕಲ್ಯಾಣಕ್ಕೆ ಒಳ್ಳೆಯದಾಗಲಿ. ಸಕಾಲಕ್ಕೆ ಮಳೆಯಾಗಿ, ಉತ್ತಮ ಫಸಲಾಗಿ, ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಲಿ. ಅನ್ನದಾತನ ಕಷ್ಟಗಳು ದೂರವಾಗಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಪ್ರಮುಖರಾದ ಸುಭಾಸ ಢವಳೇಶ್ವರ, ರವಿ ಸೋನವಾಲಕರ, ಸಂತೋಷ ಸೋನವಾಲಕರ, ಮಹಾದೇವ ಶೆಕ್ಕಿ, ವೇ.ಮೂ. ಶಂಕರಯ್ಯ ಹಿರೇಮಠ, ಅರುಣ ಪತ್ತಾರ, ಮಲ್ಲು ಯಾದವಾಡ, ವಿನೋದ ಮಾನೆ, ಅನ್ವರ ನದಾಫ, ಭೀಮಶಿ ಢವಳೇಶ್ವರ, ಹಣಮಂತ ಗುಡ್ಲಮನಿ, ವಿನೋದ ಪತ್ತಾರ, ಶಿವಬಸು ಸುಣಧೋಳಿ, ಶೀತಲ ಬೇವಿನಕಟ್ಟಿ, ಮನೋಹರ ಸಣ್ಣಕ್ಕಿ, ಪುರಸಭೆಯ ಸದಸ್ಯರು, ಏಕದಂತ ಉತ್ಸವ ಸಮೀತಿ ಸದಸ್ಯರು, ವ್ಯಾಪಾರಸ್ಥರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ