ಜೀವನ ಪರ್ಯಂತರ ಬಂಗಾರದಂತೆ ಬದುಕುವುದನ್ನು ಕಲಿಯಬೇಕು ಮೂಡಲಗಿ: ‘ಮನುಷ್ಯ ತನ್ನೊಳಗಿನ ಅವಗುಣಗಳನ್ನು ಬಿಟ್ಟು ಜೀವನ ಪರ್ಯಂತರ ಬಂಗಾರದಂತೆ ಬದುಕುವುದನ್ನು ಕಲಿಯಬೇಕು’ ಎಂದು ಬೆಳಗಾವಿ ವಿಭಾಗದ ಈಶ್ವರಿ ವಿಶ್ವವಿದ್ಯಾಲಯದ ವಲಯ ಸಂಚಾಲಕರಾದ ಅಂಬಿಕಾಜೀ ಅಕ್ಕನವರು ಹೇಳಿದರು. ತಾಲ್ಲೂಕಿನ ವಡೇರಹಟ್ಟಿಯ ಶ್ರೀ ಅಂಬಾದರ್ಶನ ಪೀಠದಲ್ಲಿ ಶುಕ್ರವಾರ ಆಚರಿಸಿದ ದಸರಾ ಉತ್ಸವ ಹಾಗೂ ನೂತನ ಮಂದಿರ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಆಧ್ಯಾತ್ಮಿಕ ಜ್ಞಾನದ ಮೂಲಕ ಪರಮಾತ್ಮನ ಸಾಕ್ಷಾತ್ಕಾರಗೊಳ್ಳಿಸಿಕೊಳ್ಳಲು ಸಾಧ್ಯ ಎಂದರು. …
Read More »Daily Archives: ಅಕ್ಟೋಬರ್ 15, 2021
ಬೆಟಗೇರಿ ಗ್ರಾಮದಲ್ಲಿ ವೈಭವದ ಬನ್ನಿ ವಿನಿಮಯ
ಬೆಟಗೇರಿ ಗ್ರಾಮದಲ್ಲಿ ವೈಭವದ ಬನ್ನಿ ವಿನಿಮಯ ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಪುರ ಜನರಿಂದ ಬನ್ನಿ ವಿನಿಮಯ ಕಾರ್ಯಕ್ರಮ ಶುಕ್ರವಾರ ಅ.15ರಂದು ವೈಭವದಿಂದ ನಡೆಯಿತು. ಗ್ರಾಮದ ಪ್ರತಿ ಮನೆಗಳಲ್ಲಿ ಹಾಗೂ ಅಕ್ಕ-ಪಕ್ಕದ ಮನೆಯಲ್ಲಿರುವ ವೃದ್ಧರಿಗೆ, ಹಿರಿಯರಿಗೆ ಮಕ್ಕಳು, ಮಹಿಳೆಯರು, ವೃದ್ದರು ಜಾತಿ, ಮತ, ಪಂಥ ಎನ್ನದೇ ಒಬ್ಬರಿಗೊಬ್ಬರೂ ‘ನಾನು ನೀನು ಬಂಗಾರದಂಗ ಇರೋಣಾ’ ಅಂತಾ ಬನ್ನಿ ವಿನಿಮಯ ಮಾಡಿಕೊಂಡು, ಹಿರಿಯರ ಕಾಲಿಗೆ ನಮಸ್ಕರಿಸಿ ಆರ್ಶೀವಾದ …
Read More »