ಬೆಟಗೇರಿಯಲ್ಲಿ ಸೆ.16ರಿಂದ 39ನೇ ಸತ್ಸಂಗ ಸಮ್ಮೇಳನ
*ಐದು ದಿನಗಳ ಕಾಲ ಸಂಜೆ 7:30ಕ್ಕೆ ಸಕಲ ಮಹಾತ್ಮರಿಂದ ಪ್ರವಚನ* ದಾನಿಗಳಿಗೆ ಸತ್ಕಾರ* ಮಹಾಪ್ರಸಾದ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 39ನೇ ಸತ್ಸಂಗ ಸಮ್ಮೇಳನ ಇದೇ ಸೆ.16 ರಿಂದ ಸೆ.20 ತನಕÀ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ.
ಸೆ.16ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಸಾಯಂಕಾಲ 7:30ಗಂಟೆಗೆ ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಜೋಡಕುರಳಿ ಚಿದ್ಘನಾನಂದ ಭಾರತಿ ಸ್ವಾಮಿಜಿ, ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ ಇವರಿಂದ ಕರಕೆ ಸತ್ಪಾತ್ರ ದಾನವೇ ಭೂಷಣ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.
ಸೆ.17ರಂದು ಸಾಯಂಕಾಲ 7:30 ಗಂಟೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಹಿಪ್ಪರಗಿ ಸಿದ್ಧಾರೂಢ ಶರಣರು, ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ, ಗದಗದ ಶರಣೆ ಮೈತ್ರಾ ತಾಯಿಯವರು, ಇವರಿಂದ ಬೆಳೆವ ಭೂಮಿಯಲೊಂದು ಪ್ರಳಯದಾ ಕಸಹುಟ್ಟಿ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.
ಸೆ.18ರಂದು ಸಾಯಂಕಾಲ 7:30ಗಂಟೆಗೆ ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಚಿಕ್ಕಮುನವಳ್ಳಿ ಶಿವಪುತ್ರ ಸ್ವಾಮಿಜಿ, ಹಿಪ್ಪರಗಿ ಸಿದ್ಧಾರೂಢ ಶರಣರು, ಗದಗದ ಶರಣೆ ಮೈತ್ರಾ ತಾಯಿಯವÀರಿಂದ ಅರಿವು ನೀನೆಂದು ಸದ್ಗುರು ಪೇಳಿ ತಿಳಿವನೆ ಜಾಣರ ದೇವ ಎಂಬ ವಿಷಯದ ಮೇಲೆ ಪ್ರವಚನ, ಕರಿಕಟ್ಟಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನೆ ನಡೆಯಲಿದೆ.
ಸೆ.19ರಂದು ಪ್ರಾತ: ಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ಸಾಯಂಕಾಲ 6 ಗಂಟೆಗೆ ಇಂಚಲದ ಸಾಧು ಸಂಸ್ಥಾನಮಠದ ಉಪಮಾತೀತ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಸ್ವಾಗತ ಮೆರವಣಿಗೆ ಬಳಿಕ ರಾತ್ರಿ 8 ಗಂಟೆಗೆ ಭಾರತಿ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಪ್ರವಚನ ನಡೆಯಲಿದ್ದು, ಹಳಕಟ್ಟಿಯ ನಿಜಗುಣ ಸ್ವಾಮಿಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ (ಅಸುಂಡಿ), ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮಿಜಿ, ಮಲ್ಲಾಪೂರÀ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಹುಣಶ್ಯಾಳ(ಪಿ.ಜಿ) ನಿಜಗುಣ ದೇವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಹಡಗಿನಾಳದ ಮಲ್ಲೇಶ ಶರಣರು, ಗದಗದ ಶರಣೆ ಮೈತ್ರಾ ತಾಯಿಯವÀರು, ಭಕ್ತಿ ಮಾತ್ರವನು ಮಾಡಿದೊಡೆ ಕೇಳಂಗನೆ ಮುಕ್ತಿಯ ಸೋಲಿದೇಶ ನಿವನು ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.
ಸ್ಥಳೀಯ ಶರಣ ರಾಮಣ್ಣ ದುಂಡಪ್ಪ ಮುಧೋಳ, ಬಸಪ್ಪ ಶಿವನಪ್ಪ ಕಂಬಿ, ಬಸನಗೌಡ ಶಿವರುದ್ರಪ್ಪ ದೇಯಣ್ಣವರ ಮತ್ತು ಸಹೋದರರು ಹಾಗೂ ಕುಟುಂಬದವರಿಂದ ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕಿರೀಟ ಮಹಾಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ ರಾತ್ರಿ ಶಿವ ಭಜನೆ, ಶಿವಜಾಗರಣೆ, ಮದರಖಂಡಿ ಶಂಕರಯ್ಯಾ ಮಠಪತಿ ತಬಲಾ ಸಾಥ್ದೊಂದಿಗೆ ಶೇಗುಣಿಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ, ಶರಣೆ ಗಿರಿಜವ್ವ ಅಡಿವೆಪ್ಪ ನೀಲಣ್ಣವರ, ಶರಣ ಶಿವಾನಂದ ಪುಂಡಲೀಕಪ್ಪ ಪಾರ್ವತೇರ ಕುಟುಂಬದವರಿಂದ ಮಹಾಪ್ರಸಾದ ಸೇವೆ ನಡೆಯಲಿದೆ.
ಸೆ.20 ರಂದು ಮುಂಜಾನೆ 10 ಗಂಟೆಗೆ ಸಮ್ಮೇಳನದಲ್ಲಿ ಉಪಸ್ಥಿತರಿರುವ ಸಕಲ ಮಹಾತ್ಮರಿಂದ ಗುರುವೇ ನೀ ಮಾಡಿದ ಪರಮೋಪಕಾರವು ಮರೆಯದಂತಾಯಿತೆನ್ನ ಶರೀರವಿರುವತನಕ ಎಂಬ ವಿಷಯದ ಮೇಲೆ ಪ್ರವಚನ ನಡೆದು, ಸಾಧಕರಿಗೆ, ದಾನಿಗಳಿಗೆ ಸತ್ಕಾರ, ಆಶೀರ್ವಾದ, ಶ್ರೀಗಳಿಂದ ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದ ಕಾರ್ಯಕ್ರಮ ಜರುಗಿ ಸತ್ಸಂಗ ಸಮ್ಮೇಳನ ಸಮಾರೊಪಗೊಳ್ಳಲಿದೆ ಎಂದು ಇಲ್ಲಿಯ ಈಶ್ವರ ಭಜನಾ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.