ಮೂಡಲಗಿ : ಮೂಡಲಗಿಯಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಯನ್ನು ಮಂಜೂರಾತಿ ಪಡೆಯಲು ಇಷ್ಟರಲ್ಲಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದು ಶಾಸಕ ಹಾಗೂ ಕಹಾಮ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದ್ದಾರೆ. ಕಳೆದ ಮಂಗಳವಾರದಂದು ಅಗ್ನಿಶಾಮಕ ಇಲಾಖೆಯೂ ಹೊರಡಿಸಿದ ನೂತನವಾಗಿ ರಚನೆಯಾಗಿರುವ ಅಗ್ನಿಶಾಮಕ ಠಾಣೆಯ ಪಟ್ಟಿಯಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಮೂಡಲಗಿಯಲ್ಲಿ ಅತಿ ಶೀಘ್ರವೇ ಅಗ್ನಿಶಾಮಕ ಠಾಣೆಯ ಮಂಜೂರಾತಿ ದೊರೆಯುವ …
Read More »ಶಾಸಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತೀತರ ಪರಿಕರಗಳನ್ನು ವಿತರಣೆ
ಬೆಟಗೇರಿ:ಸತೀಶ್ ಶುಗರ್ಸ್ ಲಿ. ಗೋಕಾಕ ಇವರಿಂದ ಉಚಿತವಾಗಿ ನೀಡುತ್ತಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಆಶಾ ಮತ್ತು ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಿಬ್ಬಂದಿಗೆ ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಜೂ.2ರಂದು ವಿತರಿಸಲಾಯಿತು. ಕೌಜಲಗಿ ಗ್ರಾಮದ ಯುವ ಧುರೀಣ ಮಂಜುನಾಥ ಸಣ್ಣಕ್ಕಿ ಅವರು ಶಾಸಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತೀತರ ಪರಿಕರಗಳನ್ನು ವಿತರಿಸಿ ಮಾತನಾಡಿ, ಸತೀಶ್ ಶುಗರ್ಸ್ …
Read More »ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ. ನಿಧನ
ನಿಧನ ವಾರ್ತೆ ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ. ಬೆಟಗೇರಿ: ಗ್ರಾಮದ ನಿವಾಸಿ, ಲಿಂಗಾಯತ ಸಮಾಜದ ಹಿರಿಯರಾದ ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ(96) ಇವರು ಮಂಗಳವಾರ ಜೂ.1ರಂದು ನಿಧನರಾದರು. ಮೃತರಿಗೆ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.
Read More »ಕುರುಹಿನಶೆಟ್ಟಿ ಸೊಸೈಟಿಯಿಂದ ಕೊರೋನಾ ಸೋಂಕಿತರಿಗೆ, ಆಸ್ಪತ್ರೆ ಸಿಬ್ಬಂದಿ,ಪತ್ರಕರ್ತರಿಗೆ,ಪೋಲಿಸ ಸಿಬ್ಬಂದಿಗೆ ಮಾಸ್ಕ್,ಸ್ಯಾನಿಟೈಜರ್,ಹಣ್ಣು ವಿತರಣೆ
ಕುರುಹಿನಶೆಟ್ಟಿ ಸೊಸೈಟಿಯಿಂದ ಕೊರೋನಾ ಸೋಂಕಿತರಿಗೆ, ಆಸ್ಪತ್ರೆ ಸಿಬ್ಬಂದಿ,ಪತ್ರಕರ್ತರಿಗೆ,ಪೋಲಿಸ ಸಿಬ್ಬಂದಿಗೆ ಮಾಸ್ಕ್,ಸ್ಯಾನಿಟೈಜರ್,ಹಣ್ಣು ವಿತರಣೆ ಮೂಡಲಗಿ: ಕೊರೋನಾ ಲಾಕ್ಡೌನ್ ಸಮಯದಲ್ಲಿ ಪ್ರಂಟ್ಲೈನ್ ವಾರಿಯರ್ಸಗಳಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದು ಕುರುಹಿನಶೆಟ್ಟಿ ಕೋ-ಆಪ್ ಸೊಸಾಯಿಟಿಯ ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಹೇಳಿದರು. ಸೊಸೈಟಿ ವತಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಸೊಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಮತ್ತು ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಹಣ್ಣು ಎನ್95 …
Read More »ಜಿಲ್ಲೆಯಲ್ಲಿ ಜೂನ್ 4ರಿಂದ 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿಗಳ ಆದೇಶ
ಬೆಳಗಾವಿ ಜಿಲ್ಲೆಯಲ್ಲಿ ಜೂನ್ 4ರಿಂದ 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ವೀಕ್ ಎಂಡ್ ಲಾಕ್ ಡೌನ್ ಈ ಬಾರಿ ಶನಿವಾರ, ಭಾನುವಾರ ಮತ್ರವಲ್ಲ, ಶುಕ್ರವಾರದಿಂದಲೇ ಜಾರಿಯಾಗಲಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಬೆಳಗ್ಗೆ ಕೂಡ ಅಗತ್ಯ ವಸ್ತುಗಳು ಸಿಗುವುದಿಲ್ಲ.
Read More »ಚನ್ನಬಸಪ್ಪ ಶಿವಬಸಪ್ಪ ಅಂಗಡಿ ನಿಧನ
ನಿಧನ ವಾರ್ತೆ ಚನ್ನಬಸಪ್ಪ ಶಿವಬಸಪ್ಪ ಅಂಗಡಿ ಮೂಡಲಗಿ: ಮೂಡಲಗಿ ತಾಲ್ಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಬಸಪ್ಪ ಶಿವಬಸಪ್ಪ ಅಂಗಡಿ(65) ಸೋಮವಾರ ರಾತ್ರಿ ಹೃದಯಘಾತದಿಂದ ನಿಧನರಾದರು. ಅವರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ ಜಿ.ಪಂ ಸದಸ್ಯ ಕೊಪ್ಪದ ಸ್ವಂತ ಹಣದಿಂದ ಸ್ಥಾಪಿಸಿದ ಶುಧ್ಧ ಕುಡಿಯವ ನೀರಿನ ಘಟಕಕ್ಕೆ ಚಾಲನೆ
ಶಾಸಕ ಬಾಲಚಂದ್ರ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ ಜಿ.ಪಂ ಸದಸ್ಯ ಕೊಪ್ಪದ ಸ್ವಂತ ಹಣದಿಂದ ಸ್ಥಾಪಿಸಿದ ಶುಧ್ಧ ಕುಡಿಯವ ನೀರಿನ ಘಟಕಕ್ಕೆ ಚಾಲನೆ ಮೂಡಲಗಿ: ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾದವಾಡ ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ ಅವರು ಸ್ವಂತ ಖರ್ಚಿನಿಂದ ಸ್ಥಾಪಿಸಿದ ಒಂದು ಸಾವಿರ ಲೀಟರ ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು …
Read More »ಹದವಾದ ಮಳೆಯಾದ ಮೇಲೆ ಸೋಯಾಬಿನ ಬಿತ್ತನೆ ಮಾಡಿರಿ- ಸಹಾಯಕ ಕೃಷಿ ನಿರ್ದೇಶಕ – ಶ್ರೀ ಎಂ.ಎಂ. ನದಾಫ
ಹದವಾದ ಮಳೆಯಾದ ಮೇಲೆ ಸೋಯಾಬಿನ ಬಿತ್ತನೆ ಮಾಡಿರಿ- ಸಹಾಯಕ ಕೃಷಿ ನಿರ್ದೇಶಕ – ಎಂ.ಎಂ. ನದಾಫ ಗೋಕಾಕ /ಮೂಡಲಗಿ: ಸೋಯಾಬಿನ ಬೆಳೆಯನ್ನು ಬಿತ್ತನೆ ಮಾಡುವ ರೈತರು ಹದವಾದ ಮಳೆಯಾದ ಮೇಲೆ ಭೂಮಿಯ ತೇವಾಂಶ ನೋಡಿಕೋಂಡು ಬಿತ್ತನೆ ಮಾಡಬೇಕು ಎಂದು ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ. ನದಾಫ ರವರು ಸಲಹೆ ನೀಡಿದ್ದಾರೆ. ಸೋಯಾಬಿನ ಬಿತ್ತನೆ ಮಾಡಲು ಜೂನ ಮೋದಲನೆಯ ವಾರದಿಂದ ಜೂಲೈ ಮದ್ಯದವರೆಗೂ ಅವಕಾಶ …
Read More »ಎಲ್ ಎಚ್ ಬೋವಿ, ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ, ವರ್ಗಾವಣೆ
ಎಲ್ ಎಚ್ ಬೋವಿ, ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ, ವರ್ಗಾವಣೆ ಮೂಡಲಗಿ: ತಾಲೂಕಿನ ಅರಭಾವಿ ನಾಡ ಕಚೇರಯಲ್ಲಿ ಉಪತಹಶೀಲದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್ ಎಚ್ ಬೋವಿ ಅವರು ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ ಪಡೆದು ಗೋಕಾಕ ತಹಶೀಲದಾರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ. ಈ ಮೊದಲು ಇವರು ಕೋಲಾರನಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಮೂಡಲಗಿ ತಾಲೂಕಾ ಶಿರಸ್ತೆದಾರರಾಗಿ ಪ್ರಮಾಣಿಕ ಸೇವೆ ಸಲ್ಲಿಸಿ ಸಧ್ಯ ಮುಂಬಡ್ತಿ ಹೊಂದಿ ಗ್ರೇಡ್ 2 ತಹಶೀಲದಾರರಾಗಿ ಗೋಕಾಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
Read More »ಆಯುರ್ವೇದಿಕ ಔಷಧಿ, ಇಮ್ಯೂನಿಟಿ ಬೂಷ್ಟರ್ ವಿತರಣೆ
ಆಯುರ್ವೇದಿಕ ಔಷಧಿ, ಇಮ್ಯೂನಿಟಿ ಬೂಷ್ಟರ್ ವಿತರಣೆ ಮೂಡಲಗಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮಿಜಿಗಳ ಮಾರ್ಗದರ್ಶದಲ್ಲಿ ತಯಾರಿಸಿರುವ ಇಮ್ಯೂನಿಟಿ ಬೂಷ್ಟರ್ ಆಯುರ್ವೇದಿಕ್ ಔಷದಿ ಬಾಟಲಿಗಳನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಚಿಕ್ಕೋಡಿ ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಮುಖ ಮಲ್ಲಪ್ಪ ಮುಕುಂದ ನೇತೃತ್ವದಲ್ಲಿ ಪತ್ರಕರ್ತರಿಗೆ ಹಾಗೂ ಪೋಲಿಸ್ ಸಿಬ್ಬಂದಿಗಳಿಗೆ ವಿತರಿಸಿದರು. ನಂತರ ಮಾತನಾಡಿದ ಅವರು, ಈ ಆಯುರ್ವೇದಿಕ್ ಔಷಧಿ ಸೇವನೆಯಿಂದ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ. ಈ …
Read More »