Breaking News

TimeLine Layout

ಫೆಬ್ರವರಿ, 2022

  • 19 ಫೆಬ್ರವರಿ

    ಇಂದು ಮನ್ನಾಪೂರದಲ್ಲಿ ತಹಸೀಲ್ದಾರ ಗ್ರಾಮ ವಾಸ್ತವ್ಯ

    ಇಂದು ಮನ್ನಾಪೂರದಲ್ಲಿ ತಹಸೀಲ್ದಾರ ವಾಸ್ತವ್ಯ ಮೂಡಲಗಿ: ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಪೆ.19ರಂದು ತಹಸೀಲ್ದಾರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದಡಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ ಡಿ.ಜೆ ಮಹಾತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರಕಾರದ ಆದೇಶದ ಮೇರೆಗೆ ಅಧಿಕಾರಿ ವರ್ಗದವರಿಂದ ಗ್ರಾಮ ವಾಸ್ತವ್ಯ ಕೈಗೊಳ್ಳಲಾಗಿದೆ. ಬೆಳಿಗ್ಗೆ 10 ರಿಂದ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಆಯಾ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಹಾಜರಿರುವರು ಹಾಗೂ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಾರ್ವಜನಿಕರ …

    Read More »
  • 18 ಫೆಬ್ರವರಿ

    ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು : ಆರತಿ ಸಬರದ *ಬೆಟಗೇರಿ ಪ್ರೌಢ ಶಾಲೆಯಲ್ಲಿ ಬೇಗ ಬೇಡ ಕೊರಳಿಗೆ ಉರುಳು ಕಾರ್ಯಕ್ರಮ * ತಾಯಂದಿರ ಸಭೆ

    ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು : ಆರತಿ ಸಬರದ *ಬೆಟಗೇರಿ ಪ್ರೌಢ ಶಾಲೆಯಲ್ಲಿ ಬೇಗ ಬೇಡ ಕೊರಳಿಗೆ ಉರುಳು ಕಾರ್ಯಕ್ರಮ * ತಾಯಂದಿರ ಸಭೆ ಬೆಟಗೇರಿ:ಇಂದಿನ ದಿನಮಾನಗಳಲ್ಲಿ ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ. ಹೆಣ್ಣು ಮಕ್ಕಳಿಗೆ ಬೇಗ ವಿವಾಹ ಬೇಡ, ಬೇಗ ಮದುವೆಯಾದ ಹೆಣ್ಣು ಮಕ್ಕಳು ಬದುಕಿನೂದ್ದಕ್ಕೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾ ಎಂಎಸ್‍ಕೆ ಸಂಯೋಜಕರಾದ …

    Read More »
  • 18 ಫೆಬ್ರವರಿ

    ಸಾಧನೆ ಎನ್ನುವದು ಸಾಧಕನ ಸ್ವತ್ತು ವಿನಹಃ ಅಲಸ್ಯಿಯ ಆಸ್ಥಿಯಲ್ಲ – ಡಾ. ಮಹದೇವ ಜಿಡ್ಡಿಮನಿ

    ಮೂಡಲಗಿ: ಸಾಧನೆ ಎನ್ನುವದು ಸಾಧಕನ ಸ್ವತ್ತು ವಿನಹಃ ಅಲಸ್ಯಿಯ ಆಸ್ಥಿಯಲ್ಲ. ಸತತ ಪ್ರಯತ್ನ ನಿರಂತರ ಪ್ರಯತ್ನದಿಂದಾಗಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವೆಂದು ಹಿರಿಯ ಸಾಹಿತಿ ಶಿಕ್ಷಕ ಡಾ. ಮಹದೇವ ಜಿಡ್ಡಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸ್ಥಳೀಯ ಭೀರಸಿದ್ದೇಶ್ವರ ದೇವಸ್ಥಾನದಲ್ಲಿ ಜರುಗಿದ ಗುರುಬಳಗದ ಸತ್ಕಾರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾರ್ವಜನಿಕ ಜೀವನದಲ್ಲಿ ಸದಾ ಸಾಮಾಜಿಕ ಕಾಳಜಿ ಅತ್ಯಾವಶ್ಯಕವಾಗಿದೆ. ಯಾವುದೇ ವೃತ್ತಿಯಾಗಿರಲಿ ಅದರಲ್ಲಿ ಶೃದ್ಧೆ ಹಾಗೂ ಪ್ರಾಮಾಣಿಕವಾಗಿ ದುಡಿಮೆ ಮಾಡಿದರೆ ಯಶಸ್ಸು …

    Read More »
  • 18 ಫೆಬ್ರವರಿ

    20ರಂದು ಲಯನ್ಸ್ ಕ್ಲಬ್‍ದಿಂದ ಉಚಿತ ನೇತ್ರ ತಪಾಸಣೆ ಶಿಬಿರ

    20ರಂದು ಲಯನ್ಸ್ ಕ್ಲಬ್‍ದಿಂದ ಉಚಿತ ನೇತ್ರ ತಪಾಸಣೆ ಶಿಬಿರ   ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ, ಡಾ. ಸಚಿನ ಮೂಡಲಗಿ ಕಣ್ಣಿನ ಆಸ್ಪತ್ರೆ ಹಾಗೂ ಬೆಳಗಾವಿಯ ಜಿಲ್ಲಾ ಅಂಧತ್ವ ನಿಯಂತ್ರಣ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ. 20ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಕಾಲೇಜು ರಸ್ತೆಯಲ್ಲಿರುವ ನೂತನ ಕಟ್ಟಡದಲ್ಲಿರುವ ಸುಸಜ್ಜಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನೋಳಗೊಂಡಿರುವ ಡಾ. ಸಚಿನ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ …

    Read More »
  • 17 ಫೆಬ್ರವರಿ

    ಬೆಟಗೇರಿ ಪ್ರೌಢ ಶಾಲೆಯಲ್ಲಿ ಫೆ.18ರಂದು ಬೇಗ ಬೇಡ ಕೊರಳಿಗೆ ಉರುಳು ಕಾರ್ಯಕ್ರಮ

    ಬೆಟಗೇರಿ ಪ್ರೌಢ ಶಾಲೆಯಲ್ಲಿ ಫೆ.18ರಂದು ಬೇಗ ಬೇಡ ಕೊರಳಿಗೆ ಉರುಳು ಕಾರ್ಯಕ್ರಮ ಬೆಟಗೇರಿ:ಮಹಿಳಾ ಸಮಾಖ್ಯ ಕರ್ನಾಟಕ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ತರಬೇತಿ ಕಾರ್ಯಾಗಾರ, ತಾಯಂದಿರ ಸಭೆ ಹಾಗೂ ಬೇಗ ಬೇಡ ಕೊರಳಿಗೆ ಉರುಳು ಬಾಲ್ಯ ವಿವಾಹ ಜಾಗೃತಿ ಅಭಿಯಾನ ಕಾರ್ಯಕ್ರಮ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಫೆ.17ರಂದು ಮುಂಜಾನೆ 10 ಗಂಟೆಗೆ ನಡೆಯಲಿದೆ. ಇಲ್ಲಿಯ ಪ್ರೌಢ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ …

    Read More »
  • 17 ಫೆಬ್ರವರಿ

    ಲಯನ್ಸ್ ಕ್ಲಬ್‍ದಿಂದ ಶಾಲಾ ಮಕ್ಕಳ ಹಲ್ಲು ತಪಾಸಣೆ

    ಲಯನ್ಸ್ ಕ್ಲಬ್‍ದಿಂದ ಶಾಲಾ ಮಕ್ಕಳ ಹಲ್ಲು ತಪಾಸಣೆ ಮೂಡಲಗಿ: ದೇಹದ ಆರೋಗ್ಯ ಉತ್ತಮವಾಗಿರಬೇಕಾದರೆ ಹಲ್ಲುಗಳ ಆರೋಗ್ಯ ಉತ್ತಮವಾಗಿರಬೇಕು’ ಎಂದು ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು. ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸಮೀಪದ ತಳವಾರ ತೋಟದ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಉಚಿತ ಹಲ್ಲು ತಪಾಸಣಾ ಶಿಬಿರದಲ್ಲಿ ಮಕ್ಕಳನ್ನು ಹಾಗೂ ಪಾಲಕರನ್ನು ಉದ್ಧೇಶಿಸಿ ಮಾತನಾಡಿದ ಅವರು ಮಕ್ಕಳು ಸರಿಯಾಗಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವುದರ ಮೂಲಕ ಹಲ್ಲುಗಳ ಆರೋಗ್ಯವನ್ನು …

    Read More »
  • 17 ಫೆಬ್ರವರಿ

    ಮೂಡಲಗಿ ಕಸಾಪ ಕಾರ್ಯಕಾರಿಣಿ ಪದಾಧಿಕಾರಿಗಳ ಪದಗ್ರಹಣ ಗಣ್ಯರ ಮೆರವಣಿಗೆ; ‘ಶುದ್ಧಿ’ ಪುಸ್ತಕ ಬಿಡುಗಡೆ

    ಮೂಡಲಗಿ ಕಸಾಪ ಕಾರ್ಯಕಾರಿಣಿ ಪದಾಧಿಕಾರಿಗಳ ಪದಗ್ರಹಣ ಗಣ್ಯರ ಮೆರವಣಿಗೆ; ‘ಶುದ್ಧಿ’ ಪುಸ್ತಕ ಬಿಡುಗಡೆ ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ದ ನೂತನ ಘಟಕದ ಕಾರ್ಯಕಾರಿ ಸಮಿತಿಯ ಪದಗ್ರಹಣ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಫೆ. 18ರಂದು ಮಧ್ಯಾಹ್ನ 3ಗಂಟೆಗೆ ಸ್ಥಳೀಯ ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿವಹಿಸುವರು. ಸಮಾರಂಭದ ಗೌರವಾಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾಗವಹಿಸುವರು. …

    Read More »
  • 16 ಫೆಬ್ರವರಿ

    ಕುಲಗೋಡದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿ ಆಚರಣೆ

    ಕುಲಗೋಡದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿ ಆಚರಣೆ ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದಲ್ಲಿ ಗ್ರಾಮದ ಹರಳಯ್ಯ ಸಮಾಜ ಮತ್ತು ಶ್ರೀ ಮಹಾ ಶಿವಶರಣ ಹರಳಯ್ಯ ಸಮಾಜ ಯುವಕ ಸಂಘದ ಆಶ್ರಯದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿಯನ್ನು ಆಚರಿಸಿದರು. ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯ ಗೋವಿಂದಪ್ಪ ಕೊಪ್ಪದ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾ.ಪಂ ಮಾಜಿ ಸದಸ್ಯ ಸುಭಾಸ ಒಂಟಗೋಡಿ, ಗ್ರಾ.ಪಂ ಸದಸ್ಯ ಸತೀಶ ಒಂಟಗೋಡಿ, ಪಾರಿಜಾತ ಪ್ರತಿಷ್ಠಾಣದ ಅಧ್ಯಕ್ಷ …

    Read More »
  • 16 ಫೆಬ್ರವರಿ

    ಸವದತ್ತಿ ಯಲ್ಲಮ್ಮದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ: ವೀರಭದ್ರ ನೀಲಣ್ಣವರ ಬೆಟಗೇರಿ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಸಂಪನ್ನ ಸಂಭ್ರಮದಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು

    ಸವದತ್ತಿ ಯಲ್ಲಮ್ಮದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ: ವೀರಭದ್ರ ನೀಲಣ್ಣವರ ಬೆಟಗೇರಿ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಸಂಪನ್ನ ಸಂಭ್ರಮದಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು ಬೆಟಗೇರಿ:ಬಹಳ ಹಿಂದಿನಿಂದಲೂ ನಮ್ಮ ದೇಶದ ಜನರು ದೇವರ ಮೇಲೆ ಅಪಾರ ಭಯ, ಭಕ್ತಿಯುಳ್ಳವರಾಗಿದ್ದಾರೆ. ಪ್ರತಿಯೊಬ್ಬರೂ ಧಾರ್ಮಿಕ ಪರಂಪರೆ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಪೊಲೀಸ್ ಇಲಾಖೆಯ ನಿವೃತ್ತ ಎಎಸ್‍ಐ ವೀರಭದ್ರ ನೀಲಣ್ಣವರ ಹೇಳಿದರು. ಭಾರತ ಹುಣ್ಣಿಮೆ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಫೆ.16 ರಂದು …

    Read More »
  • 16 ಫೆಬ್ರವರಿ

    ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳು ಪ್ರಾರಂಭ-ಸುಣಗಾರ ಕರೆ

    ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳು ಪ್ರಾರಂಭ-ಸುಣಗಾರ ಕರೆ ಅಂಗನವಾಡಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯ ಮೂಡಲಗಿ:ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿದ್ದು ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ಪ್ರೇರಿಪಿಸಬೇಕೆಂದು ಮೇಲ್ವಿಚಾರಕಿ ಚಂಪಾ ಸುಣಗಾರ ಕರೆ ನೀಡಿದರು. ತಾಲೂಕಿನ ಕಲ್ಲೋಳಿ ಪಟ್ಟಣದ 421 ರ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡಿಯುವಂತೆ ಅಂಗನವಾಡಿಗಳು ಕಂಗೋಳಿಸುತ್ತಿವೆ ಎಂದರು. ಮಹಿಳೆಯರ …

    Read More »