ಸಾಧನೆ, ಸಾಹಸ-ಸೇವೆ ಜೀವನವನ್ನು ರೂಪಿಸುವ ಸೂತ್ರಗಳು-ಪ್ರೊ.ಲಂಕೆಪ್ಪಣ್ಣವರ
ಮೂಡಲಗಿ: ವಿದ್ಯಾರ್ಥಿಗಳು ಸಾಧನ ಪ್ರವೃತಿ, ಸಾಹಸಶೀಲತೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು, ಈ ಮೂರು ನಿಮ್ಮ ಭಾವಿ ಭವಿಷ್ಯವನ್ನು ರೂಪಿಸುವ ಸೂತ್ರಗಳು ಎಂದು ಸುಣಧೋಳಿ ಶೀ ಜಡಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸುರೇಶ ಲಂಕೆಪ್ಪಣ್ಣವರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2020-21 ಸಾಲಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಸ್ಥಾನದಿಂದ ಮಾತನಾಡುತ್ತಿದ್ದ ಅವರು ಸ್ವಾಮಿ ವಿವೇಕಾನಂದರಂತವರ ಜೀವನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಹಾಗೂ ನಾವು ಕಲಿತ ವಿದ್ಯೆ ಈ ದೇಶಕ್ಕೆ ಸಮರ್ಪಣೆ ಆಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ.ಶಾಸ್ತ್ರೀಮಠ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಸ್ಥಿತಿಗಳಿಗೆ ತಮ್ಮನ್ನು ವಪ್ಪಿಕೊಳ್ಳಬೇಕು ಜೋತೆಗೆ ಪ್ರಯತ್ನ ಹಗೂ ಅಧ್ಯಯನಶೀಲರಾಗ ಬೇಕು ಅಂದಾಗ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ ಎಂದರು.
ಇತ್ತಿಚಿಗಷ್ಟೆ ನಿವೃತ್ತಿ ಹೊಂದಿದ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ.ಎಸ್.ಎ.ಶಾಸ್ತ್ರೀಮಠ ಅವರನ್ನು ಮಹಾವಿದ್ಯಾಲಯದ ಪರವಾಗಿ ಶಾಲುಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ಹಣಮಂತ ಬಸಳಿಗುಂದಿ ಮತ್ತು ಗಾಯತ್ರಿ ಪಾಟೀಲ ವಿದ್ಯಾರ್ಥಿಗಳ ಪರವಾಗಿ ಅನಿಸಿಕೆ ಹಂಚಿಕೊಂಡರು.
2020-21 ಸಾಲಿನ ಆದರ್ಶ ವಿದ್ಯಾರ್ಥಿಯಾಗಿ ವಿನೊಧ ಹಲಗಿ, ಆದರ್ಶ ವಿದ್ಯಾರ್ಥಿನಿಯಾಗಿ ನಿರ್ಮಲಾ ಪಾಟೀಲ ಹಾಗೂ ಗ್ರಂಥಾಲಯ ವಿಭಾಗದಿಂದ ಉತ್ತಮ ಓದುಗ ವಿದ್ಯಾರ್ಥಿ ಶ್ರೀಧರ ಸುಭಾಸ ಹೊಸಕೊಟಿ, ಉತ್ತುಮ ಓದುಗ ವಿದ್ಯಾರ್ಥಿನಿಯಾಗಿ ಲಕ್ಷ್ಮೀ ಕುಶಾಲ ಶಾಬನ್ನವರ ಪ್ರಶಸ್ತಿ ಪಡೆದುಕೊಂಡರು.
ಸಮಾರಂಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಎಸ್.ಜಿ.ನಾಯ್ಕ, ವ್ಹಿ.ಆರ್.ದೇವರಡ್ಡಿ, ಎಸ್.ಬಿಖೋತ, ಎ.ಪಿ.ರಡ್ಡಿ, ಎಸ್.ಸಿ.ಮಂಟೂರ, ಎಸ್.ಎಮ್.ಗುಜಗೊಂಡ, ವ್ಹಿ.ಎಸ್.ಹಂಪನ್ನವರ, ಗ್ರಂಥಪಾಲಕ ಬಿ.ಎಮ್.ಬರಗಾಲಿ ಮತ್ತಿತರು ಇದ್ದರು.
ಪ್ರೊ.ಜಿ.ಸಿದ್ರಾಮರಡ್ಡಿ ಸ್ವಾಗತಿಸಿದರು, ಪ್ರೊ.ಜಿ.ವ್ಹಿ.ನಾಗರಾಜ ಪರಿಚಯಿಸಿದರು, ಪ್ರೊ.ಎ.ಎಸ್.ಮಿಸಿನಾಯ್ಕ, ನಿರೂಪಿಸಿದರು, ಡಾ.ಬಿ.ಸಿ.ಪಾಟೀಲ ವಂದಿಸಿದರು. ವಿದ್ಯಾರ್ಥಿಗಳಾದ ಐಶ್ವರ್ಯ ಮುಂಜೆ, ಗಾಯತ್ರಿ ನಿಡಗುಂದಿ ಪ್ರಾರ್ಥಿಸಿದರು.