Breaking News
Home / ತಾಲ್ಲೂಕು / *ಇಬ್ಬರು ಸರಗಳ್ಳರ ಬಂಧನ.1.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ*

*ಇಬ್ಬರು ಸರಗಳ್ಳರ ಬಂಧನ.1.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ*

Spread the love

ಮೂಡಲಗಿ : ಮಹಿಳೆ ಕೊರಳಲ್ಲಿ ಇರುವ ಬಂಗಾರದ ಮಂಗಳಸೂತ್ರವನ್ನು(ಗಂಟನ) ಕಿತ್ತುಕೊಂಡು ಪರಾರಿಯಾದ ಇಬ್ಬರು ಸರಗಳ್ಳರನ್ನು ಪೊಲೀಸರು ಬಂಧಿಸಿ ಆಭರಣವನ್ನು ವಶ ಪಡಿಸಿಕೊಂಡಿದ್ದಾರೆ.   ರಾಯಬಾಗ ತಾಲೂಕಿನ ಮುಗಲಖೋಡ ಪಟ್ಟಣದ ರಾಜಶ್ರೀ ಬೆಣಚಿನಮರಡಿ ಎಂಬ ಮಹಿಳೆ ಸಪ್ಟಂಬರ್ 13 ರಂದು ತನ್ನ ಗಂಡನೊಂದಿಗೆ ಮೂಡಲಗಿ ತಾಲೂಕಿನ ಮಸಗುಪ್ಪಿಗೆ ಬೈಕ್ ಮೇಲೆ ಹೋಗುವಾಗ ಮಹಿಳೆಯ ಕೊರಳಲ್ಲಿರುವ ಸುಮಾರು 1,25,000 ಬೆಲೆಬಾಳುವ ಮಂಗಳಸೂತ್ರವನ್ನು (ಗಂಟನ) ಬೈಕ್ ಮೇಲೆ ಬಂದು ಕಿತ್ತುಕೊಂಡು ಪರಾರಿಯಾಗಿದ್ದರು.

ಮೂಡಲಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 166/2020 ಕಾಲಂ 392 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಪಿಐ ವೆಂಕಟೇಶ್ ಮುರನಾಳ ತನಿಖೆ ಕೈಕೊಂಡು ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ, ಎಮ್. ಎಸ್ ಬಡಿಗೇರ, ಆರ್ ಎಸ್ ಪೂಜೇರಿ, ಎನ್ ಎಸ್ ವಡೆಯರ, ಎಲ್ ಪಿ ಹಂಪಿಹೊಳಿ, ವ್ಹಿ ವಾಯ್ ಕೊಳವಿ, ಎಮ್ ವಾಯ್ ನದಾಫ್, ಆಯ್ ವಾಯ್ ಬೆಂಡ್ರೊಳ್ಳಿ, ಡಿ ಜಿ ಕೊಣ್ಣೂರ, ಎಸ್ ಬಿ ಪೂಜೇರಿ, ಪಿ ಎಮ್ ಸಪ್ತಸಾಗರ, ಎಸ್ ಆರ್ ತಳವಾರ, ಕೆ ವ್ಹಿ ಕದಮ, ಕೆ ಎಸ್ ರಾಮದಾಸ ರವರ ತಂಡ ರಚನೆ ಮಾಡಿ ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಅಮೀತ ಸಿದ್ರಾಮಗೋಳ (20) ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಮಾರಾಪೂರ ಗ್ರಾಮದ ಆನಂದ ಮೇತ್ರೆ (23) ಎಂಬ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ